ಕರ್ನಾಟಕ

karnataka

ETV Bharat / sitara

ರಚಿತಾ ರಾಮ್​​​​​​​ ಮಾತಿಂದ ನಿರ್ದೇಶಕ ಪಿ.ವಾಸುಗೆ ಬೇಸರವಾಗಿದೆಯಂತೆ - ಪಿ ವಾಸು ಬಗ್ಗೆ ರಚಿತ ರಾಮ್​​ ಹೇಳಿಕೆ

‘ಆಯುಷ್ಮಾನ್​​​ ಭವ’ ಮಾಧ್ಯಮಗೋಷ್ಠಿಯಲ್ಲಿ ನಿರ್ದೇಶಕ ಪಿ.ವಾಸು ಅನುಪಸ್ಥಿತಿಯಲ್ಲಿ ನಟಿ ರಚಿತಾ ರಾಮ್ ತಮ್ಮ ಪಾತ್ರದ ಬಗ್ಗೆ ಮಾತನಾಡುತ್ತಾ, ಈ ಚಿತ್ರದಿಂದ ಒಳ್ಳೆಯದು, ಕೆಟ್ಟದ್ದು ಏನಾದರೂ ಆದರೆ ಅದಕ್ಕೆ ನಿರ್ದೇಶಕರೇ ಕಾರಣ ಎಂದು ಹೇಳಿಕೆ ಕೊಟ್ಟಿದ್ದಾರೆ. ಇದರಿಂದಾಗಿ ನಿರ್ದೇಶಕ ವಾಸು ಬೇಸರ ವ್ಯಕ್ತಪಡಿಸಿದ್ದಾರಂತೆ.

ರಚಿತ ರಾಮ್​​​ ಮಾತಿಂದ ನಿರ್ದೇಶಕ ಪಿ.ವಾಸುಗೆ ಬೇಸರವಾಗಿದ್ಯಂತೆ

By

Published : Oct 21, 2019, 9:50 AM IST

ಆಪ್ತ ಮಿತ್ರ, ಆಪ್ತ ರಕ್ಷಕ, ಆರಕ್ಷಕ, "ಆಯುಷ್ಮಾನ್ ಭವ" ಸಿನಿಮಾಗಳಿಗೆ ಆಕ್ಷನ್​​ ಕಟ್​​ ಹೇಳಿರುವ ಪಿ.ವಾಸು, ನಟಿ ರಚಿತಾ ರಾಮ್​ ಮಾತಿಂದ ಬೇಸರವಾಗಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.

ಮೊನ್ನೆ ನಡೆದ ‘ಆಯುಷ್ಮಾನ್ ​​​ಭವ’ ಮಾಧ್ಯಮಗೋಷ್ಠಿಯಲ್ಲಿ ನಿರ್ದೇಶಕ ಪಿ.ವಾಸು ಅನುಪಸ್ಥಿತಿಯಲ್ಲಿ ನಟಿ ರಚಿತಾ ರಾಮ್ ತಮ್ಮ ಪಾತ್ರದ ಬಗ್ಗೆ ಮಾತನಾಡುತ್ತಾ, ಈ ಚಿತ್ರದಿಂದ ಒಳ್ಳೆಯದು, ಕೆಟ್ಟದ್ದು ಏನಾದರೂ ಆದರೆ ಅದಕ್ಕೆ ನಿರ್ದೇಶಕರೇ ಕಾರಣ ಎಂದು ಹೇಳಿಕೆ ಕೊಟ್ಟಿದ್ದಾರೆ. ಈ ಕಾರ್ಯಕ್ರಮ ನಡೆಯುವ ಸಂದರ್ಭದಲ್ಲಿ ಪಿ.ವಾಸು ಮಲೇಷ್ಯಾ ಪ್ರವಾಸದಲ್ಲಿದ್ದರು. ರಚಿತಾರ ಹೇಳಿಕೆಯನ್ನು ವಿಡಿಯೋ ಮೂಲಕ ನೋಡಿರುವ ನಿರ್ದೇಶಕ ವಾಸು, ಬೇಸರ ವ್ಯಕ್ತಪಡಿಸಿದ್ದಾರಂತೆ.

ಒಬ್ಬ ನಟಿಯಾದವರು ಇದ್ಯಾಕೆ ಹೀಗೆ ಹೇಳಬೇಕು. ಒಳ್ಳೇದು ಮತ್ತು ಕೆಟ್ಟದ್ದು ನಿರ್ದೇಶಕರಿಗೆ ಸಲ್ಲಬೇಕು ಅಂದರೆ ಏನು ಅರ್ಥ. ನಾನಂತೂ ಹೀಗೆ ಹೇಳಿದವರನ್ನು ಕೇಳಿಯೇ ಇಲ್ಲ ಎಂದು ಪಿ.ವಾಸು ಮೊನ್ನೆ ‘ಆಯುಷ್ಮಾನ್ ಭವ’ ಧ್ವನಿ ಸಾಂದ್ರಿಕೆ ಬಿಡುಗಡೆ ಸಮಾರಂಭದಲ್ಲಿ ಬೇಸರ ಹೊರ ಹಾಕಿದ್ದಾರೆ.

ಹಿರಿಯ ನಿರ್ದೇಶಕರು ಇಷ್ಟು ಹೇಳಿದ್ದನ್ನು ಬಿಟ್ಟರೆ ರಚಿತಾ ರಾಮ್ ಅಭಿನಯದ ಬಗ್ಗೆ ಯಾವುದೇ ಅಹಿತಕರ ಮಾತು ಆಡಿಲ್ಲ. ರಚಿತಾ ರಾಮ್ ‘ಆಯುಷ್ಮನ್ ಭವ’ ಚಿತ್ರದಲ್ಲಿ ಡಾ. ಶಿವರಾಜಕುಮಾರ್​​​​​ಗೆ ನಾಯಕಿಯಾಗಿ ಅಭಿನಯಿಸಿದ್ದಾರೆ. ಇನ್ನು ಈ ಚಿತ್ರ ನವೆಂಬರ್ 1 ರಂದು ರಾಜ್ಯದ್ಯಂತ ಬಿಡುಗಡೆ ಆಗಲಿದೆ.

ABOUT THE AUTHOR

...view details