ಕರ್ನಾಟಕ

karnataka

ETV Bharat / sitara

ಚಂದನವನಕ್ಕೆ ರೀ ಎಂಟ್ರಿ ಕೊಟ್ಟ ನಿರ್ದೇಶಕ ಮಹೇಂದರ್​​​... ನಾಯಕನಾಗಿ ನಟನೆ! - ನಿರ್ದೇಶಕ ಮಹೇಂದರ್​​​

ʻಶಬ್ದʼ ಅನ್ನೋ ಸಿನಿಮಾದ ಮೂಲಕ ನಿರ್ದೇಶಕ ಮಹೇಂದರ್​​​​ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ.

director mahendar re entry to sandalwood
ಚಂದನವನಕ್ಕೆ ರೀ ಎಂಟ್ರಿ ಕೊಟ್ಟ ನಿರ್ದೇಶಕ ಮಹೇಂದರ್​​​

By

Published : Dec 16, 2019, 1:16 PM IST

Updated : Dec 16, 2019, 3:59 PM IST

ಕಣ್ಣೀರಿನ ನಿರ್ದೇಶಕ ಎಂದು ಹೆಸರು ಪಡೆದಿರುವ ಮಹೇಂದರ್‌ ತಮ್ಮ ಸಂಸಾರಿಕ ಜೀವನದಲ್ಲಾದ ಏಳುಬೀಳುಗಳಿಂದ ಚಿತ್ರರಂಗದಿಂದ ಕೊಂಚ ದೂರ ಸರಿದಿದ್ರು. ಇವರು ನಿರ್ದೇಶನ ಮಾಡಿದ ಒನ್ಸ್‌ ಮೋರ್‌ ಕೌರವ ಸಿನಿಮಾ ಕೂಡ ಹೇಳಿಕೊಳ್ಳುವಷ್ಟು ಯಶಸ್ಸು ತರಲಿಲ್ಲ. ಇದಾದ ಮೇಲೆ ಮಹೇಂದರ್​ ಎಲ್ಲಿಗೆ ಹೋದ್ರು ಎಂಬ ಬಗ್ಗೆ ಚರ್ಚೆ ಕೂಡ ಶುರುವಾಗಿತ್ತು. ಆದ್ರೆ ಇದೀಗ ಇದಕ್ಕೆಲ್ಲ ಉತ್ತರ ಕೊಡೋಕೆ ನಿರ್ದೇಶಕ ಮಹೇಂದರ್​​​ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.

ಇದೀಗ ʻಶಬ್ದʼ ಅನ್ನೋ ಸಿನಿಮಾದ ಮೂಲಕ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಇವರ ಜೋಡಿಯಾಗಿ ಸೋನುಗೌಡ ಕಾಣಿಸಿಕೊಳ್ಳಲಿದ್ದಾರೆ. ʻಶಬ್ದʼ ಒಂದು ಸಸ್ಪೆನ್ಸ್‌ ಥ್ರಿಲ್ಲರ್‌ ಸಿನಿಮಾವಾಗಿದ್ದು, ಸೋನುಗೌಡ ಖಡಕ್‌ ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ಇನ್ನು ಮಹೇಂದರ್​​​ 2001ರಲ್ಲಿ ರಿಲೀಸ್​ ಆಗಿದ್ದ ಗಟ್ಟಿಮೇಳ ಸಿನಿಮಾದಲ್ಲಿ ನಾಯಕನಾಗಿ ಯಶಸ್ಸು ಕಂಡಿದ್ದರು. ಆ ನಂತರದಲ್ಲಿ ಯಾವುದೇ ಸಿನಿಮಾದಲ್ಲೂ ನಾಯಕನಾಗಿ ಕಾಣಿಸಿಕೊಳ್ಳಲಿಲ್ಲ.

Last Updated : Dec 16, 2019, 3:59 PM IST

ABOUT THE AUTHOR

...view details