ಕರ್ನಾಟಕ

karnataka

By

Published : Aug 18, 2019, 1:21 PM IST

ETV Bharat / sitara

ನನ್ನ ಸಿನಿಮಾಗೆ ಯು ಸರ್ಟಿಫಿಕೇಟ್ ಸಿಗೋದು ಗ್ಯಾರಂಟಿ: ನಿರ್ದೇಶಕ ದಯಾಳ್​​ ಪದ್ಮನಾಭನ್​​

1981ರಲ್ಲಿ ಬಿಡುಗಡೆಯಾದ ಆರತಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದ 'ರಂಗನಾಯಕಿ' ಸಿನಿಮಾವನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಇದೀಗ ಅದೇ ಹೆಸರಿನಲ್ಲಿ ನಿರ್ದೇಶಕ ದಯಾಳ್ ಪದ್ಮನಾಭನ್ ಮತ್ತೊಂದು ಸಿನಿಮಾ ಮಾಡಿದ್ದಾರೆ. ಅದಿತಿ ಪ್ರಭುದೇವ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

'ರಂಗನಾಯಕಿ'

ಪುಟ್ಟಣ್ಣ ಕಣಗಾಲ್ ನಿರ್ದೇಶಿಸಿದ್ದ 'ರಂಗನಾಯಕಿ' ಚಿತ್ರ ಚಂದನವನದಲ್ಲಿ ಭಾರೀ ಸದ್ದು ಮಾಡಿತ್ತು. ಈಗ ಮತ್ತೆ ಸ್ಯಾಂಡಲ್​​​​ವುಡ್​​ನಲ್ಲಿ 'ರಂಗನಾಯಕಿ' ಶೀರ್ಷಿಕೆಯನ್ನೇ ಮರುಬಳಕೆ ಮಾಡಿಕೊಂಡು, ನಿರ್ದೇಶಕ ದಯಾಳ್ ಪದ್ಮನಾಭನ್ ಮತ್ತೊಂದು ಸಿನಿಮಾ ಮಾಡಿದ್ದಾರೆ.

ತಮ್ಮ ಸಿನಿಮಾ ಬಗ್ಗೆ ಮಾತನಾಡಿದ ದಯಾಳ್ ಪದ್ಮನಾಭನ್

'ವಾಲ್ಯೂಮ್ 1 ವರ್ಜಿನಿಟಿ' ಅಂತಾ ಟ್ಯಾಗ್​​​​​​​​​​​​​​ಲೈನ್ ಹೊಂದಿರುವ 'ರಂಗನಾಯಕಿ' ಸಿನಿಮಾದ ಕಥೆ ಏನು ಅನ್ನೋದನ್ನ ನಿರ್ದೇಶಕ ದಯಾಳ್ ಪದ್ಮನಾಭನ್ ಹಂಚಿಕೊಂಡಿದ್ದಾರೆ. ಈ ಚಿತ್ರವನ್ನು ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರಿಗೆ ಅರ್ಪಿಸುತ್ತೇನೆ ಎಂದಿದ್ದಾರೆ. ದೇಶಾದ್ಯಂತ ಸದ್ದು ಮಾಡಿದ್ದ ನಿರ್ಭಯ ಅತ್ಯಾಚಾರ ಪ್ರಕರಣದ ಕೆಲವೊಂದು ವಿಚಾರಗಳನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆಯಂತೆ. ಅತ್ಯಾಚಾರ ಪ್ರಕರಣದಲ್ಲಿ ಮೃತಪಟ್ಟ ಆ ಹುಡುಗಿ ಒಂದು ವೇಳೆ ಬದುಕಿದ್ದರೆ ಹೇಗೆ ಜೀವನ ಮಾಡುತ್ತಿದ್ದಳು, ಸಮಾಜ ಆಕೆಯನ್ನು ಹೇಗೆ ಸ್ವೀಕರಿಸುತ್ತಿತ್ತು ಎಂಬುದನ್ನು ಈ ಸಿನಿಮಾದಲ್ಲಿ ಹೇಳಲಾಗಿದೆಯಂತೆ.

'ರಂಗನಾಯಕಿ' ಚಿತ್ರೀಕರಣದ ಪೋಟೋ

ಅತ್ಯಾಚಾರ ಸಂತ್ರಸ್ತೆ ಪಾತ್ರವನ್ನು ಅದಿತಿ ಪ್ರಭುದೇವ ನಿಭಾಯಿಸಿದ್ದಾರೆ. ಅದಿತಿ ಬಾಯ್​​​​​​​​​​​​​ಫ್ರೆಂಡ್ ಪಾತ್ರದಲ್ಲಿ ಎಂ.ಜಿ.ಶ್ರೀನಿವಾಸ್ ನಟಿಸಿದ್ದಾರೆ. ಇಷ್ಟೆಲ್ಲಾ ವಿಚಾರಗಳಿದ್ದರೂ ನನ್ನ ಸಿನಿಮಾಗೆ ಯು ಸರ್ಟಿಫಿಕೇಟ್ ದೊರೆಯಲಿದೆ ಎಂದು ನಿರ್ದೇಶಕ ದಯಾಳ್ ಆತ್ಮವಿಶ್ವಾಸದಿಂದ ಹೇಳುತ್ತಾರೆ. ಬಹುತೇಕ ಶೂಟಿಂಗ್ ಮುಗಿಸಿರುವ ಸಿನಿಮಾವನ್ನು ಅಕ್ಟೋಬರ್​​​​​​ನಲ್ಲಿ ಬಿಡುಗಡೆ ಮಾಡಲು ದಯಾಳ್ ಪ್ಲ್ಯಾನ್ ಮಾಡಿಕೊಂಡಿದ್ದಾರೆ.

'ರಂಗನಾಯಕಿ' ಚಿತ್ರದಲ್ಲಿ ಅದಿತಿ ಪ್ರಭುದೇವ

ABOUT THE AUTHOR

...view details