ಕರ್ನಾಟಕ

karnataka

ETV Bharat / sitara

ಕಿರುತೆರೆಯಲ್ಲಿ ಮತ್ತೆ ದೀಪಿಕಾ ದಾಸ್​ ನಾ'ಗಿಣಿ'!! - ದೀಪಿಕಾ ದಾಸ್​​ ಸುದ್ದಿ

ಇದೇ ಸೋಮವಾರದಿಂದ ದೀಪಿಕಾ ದಾಸ್ ಬರುವ ಸಂಚಿಕೆ ಪ್ರಸಾರ ಕಾಣಲಿದ್ದು, ಶಿವಾನಿಯ ಜೊತೆಗೆ ವೀಕ್ಷಕರಿಗೂ ಆದಿಶೇಷ ಯಾರೂ ಎಂಬ ವಿಚಾರ ತಿಳಿಯಲಿದೆ..

deepika das enter to nagini 2 serial
ದೀಪಿಕಾ ದಾಸ್​​​

By

Published : Nov 10, 2020, 5:10 PM IST

ಬೆಳ್ಳಿತೆರೆಯ ಮೂಲಕ ನಟನಾ ಪಯಣ ಶುರು ಮಾಡಿರುವ ದೀಪಿಕಾಗೆ ಜನಪ್ರಿಯತೆ ತಂದು ಕೊಟ್ಟಿದ್ದು ನಾಗಿಣಿ ಧಾರಾವಾಹಿ. ನಾಗಿಣಿ ಧಾರಾವಾಹಿಯಲ್ಲಿ ನಾಗಲೋಕದ ಕನ್ಯೆ ಅಮೃತಾ ಆಗಿ ಅಭಿನಯಿಸಿ ಕಿರುತೆರೆ ಲೋಕದಲ್ಲಿ ಹೊಸ ಹವಾ ಸೃಷ್ಟಿಸಿದ್ದ ಚೆಂದುಳ್ಳಿ ಚೆಲುವೆ ದೀಪಿಕಾ ದಾಸ್ ಅವರ ಅಭಿನಯಕ್ಕೆ ಮನಸೋಲದವರಿಲ್ಲ.

ದೀಪಿಕಾ ದಾಸ್​​​

ನಾಗಿಣಿ ಭಾಗ ಒಂದು ಸೀಸನ್ ಮುಗಿದು, ಇದೀಗ ಎರಡನೇ ಸೀಸನ್ ಪ್ರಸಾರ ಕಾಣುತ್ತಿದೆ. ಈಗೇಕೆ ದೀಪಿಕಾ ದಾಸ್ ಹೆಸರು ಎಂದು ಆಶ್ಚರ್ಯ ಆಗುತ್ತಿದೆಯಾ? ಇಲ್ಲಿದೆ ನೋಡಿ ಟ್ವಿಸ್ಟ್! ಅಮೃತಾಳಾಗಿ ಮೋಡಿ ಮಾಡಿದ್ದ ದೀಪಿಕಾ ದಾಸ್ ಮಗದೊಮ್ಮೆ ಕಿರುತೆರೆಗೆ ಮರಳಿ ಬರುತ್ತಿದ್ದಾರೆ. ಅದು ಕೂಡ ನಾಗಿಣಿಯಾಗಿ!ಅಂದ ಮಾತ್ರಕ್ಕೆ ನಾಗಿಣಿ ಪಾತ್ರಧಾರಿ ಬದಲಾಗುತ್ತಾರಾ? ನಮ್ರತಾ ಜಾಗಕ್ಕೆ ದೀಪಿಕಾ ಬರುತ್ತಾರಾ ಎಂದು ಆಲೋಚಿಸುತ್ತಿದ್ದರೆ ಅದು ಅಕ್ಷರಶಃ ಸುಳ್ಳು.

ದೀಪಿಕಾ ದಾಸ್​​​

ಅರೇ ಕನ್‌ಫ್ಯೂಸ್ ಆಗಬೇಡಿ. ದೀಪಿಕಾ ದಾಸ್ ನಾಗಿಣಿಯಾಗಿ ಬರುತ್ತಿರುವುದೇನೋ ನಿಜ. ಆದರೆ, ಅವರು ಬರುತ್ತಿರುವುದು ಕತೆಯಲ್ಲಿ ಟ್ವಿಸ್ಟ್ ನೀಡಲು‌‌. ಮಾತ್ರವಲ್ಲ ತ್ರಿಶೂಲ್ ಹಾಗೂ ತ್ರಿವಿಕ್ರಮ್ ಇವರಿಬ್ಬರಲ್ಲಿ ನಾಗಲೋಕದ ರಾಜಕುಮಾರ ಆದಿಶೇಷ ಯಾರು ಎಂಬ ಗಾಢ ಸತ್ಯ ತಿಳಿಸಲು.

ದೀಪಿಕಾ ದಾಸ್​​​

ತ್ರಿಶೂಲ್ ಹಾಗೂ ತ್ರಿವಿಕ್ರಮ್ ಅವರಿಬ್ಬರಲ್ಲಿ ತನ್ನ ಪ್ರೀತಿಯ ಆದಿಶೇಷ ಯಾರು ಎಂದು ಹುಡುಕಾಡಲು ಶಿವಾನಿ ಕಷ್ಟಪಡುತ್ತಿದ್ದಾಳೆ. ಇಷ್ಟು ದಿನದ ಅವಳ ಹೋರಾಟಕ್ಕೆ ಫುಲ್ ಸ್ಟಾಪ್ ಹಾಕಲು, ನಿಜವಾದ ಆದಿಶೇಷ ಯಾರು ಎಂದು ಪತ್ತೆ ಹಚ್ಚಲು ಶಿವಾನಿಯ ಸಹಾಯಕ್ಕಾಗಿ ಅಮೃತಾ ಕಿರುತೆರೆಗೆ ಬರುತ್ತಿದ್ದಾಳೆ. ಇದೇ ಸೋಮವಾರದಿಂದ ದೀಪಿಕಾ ದಾಸ್ ಬರುವ ಸಂಚಿಕೆ ಪ್ರಸಾರ ಕಾಣಲಿದ್ದು, ಶಿವಾನಿಯ ಜೊತೆಗೆ ವೀಕ್ಷಕರಿಗೂ ಆದಿಶೇಷ ಯಾರೂ ಎಂಬ ವಿಚಾರ ತಿಳಿಯಲಿದೆ.

ದೀಪಿಕಾ ದಾಸ್​​​

ABOUT THE AUTHOR

...view details