ಕರ್ನಾಟಕ

karnataka

ETV Bharat / sitara

ಸಿದ್ದಗಂಗಾ ಮಠಕ್ಕೆ ದರ್ಶನ್​ ಅಭಿಮಾನಿಗಳಿಂದ ದವಸ ಧಾನ್ಯ ವಿತರಣೆ! - undefined

ಈ ಬಾರಿ ಹುಟ್ಟುಹಬ್ಬಕ್ಕೆ ಕೇಕ್​, ಹೂವಿನ ಹಾರಗಳನ್ನು ತರುವ ಬದಲಿಗೆ ದವಸ ಧಾನ್ಯಗಳನ್ನು ತರುವಂತೆ ದರ್ಶನ್ ತಮ್ಮ ಅಭಿಮಾನಿಗಳಿಗೆ ಮನವಿ ಮಾಡಿದ್ದರು. ಅದರಂತೆ ಅಭಿಮಾನಿಗಳು ತಂದುಕೊಟ್ಟಿದ್ದ ದವಸ ಧಾನ್ಯಗಳನ್ನು ದರ್ಶನ್ ಅಭಿಮಾನಿಗಳ ಮೂಲಕವೇ ಸಿದ್ದಗಂಗಾ ಮಠಕ್ಕೆ ತಲುಪಿಸಿದ್ದಾರೆ.

ದರ್ಶನ್ ಅಭಿಮಾನಿಗಳು

By

Published : Feb 20, 2019, 11:01 AM IST

ಕಳೆದ ವರ್ಷ ನವೆಂಬರ್​​​ನಲ್ಲಿ ರೆಬಲ್ ಸ್ಟಾರ್ ಅಂಬರೀಶ್ ನಿಧನರಾದ್ದರಿಂದ ನಟ ದರ್ಶನ್ ಈ ಬಾರಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರಲಿಲ್ಲ. ಆದರೆ ಅಭಿಮಾನಿಗಳು ದರ್ಶನ್ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಆಚರಿಸಿದ್ದರು.

ದರ್ಶನ್ ಅಭಿಮಾನಿಗಳಿಂದ ದವಸಧಾನ್ಯ ವಿತರಣೆ

ಈ ಬಾರಿ ನನಗೆ ಕೇಕ್​, ಹಾರಗಳನ್ನು ತರುವ ಬದಲು ದವಸ ಧಾನ್ಯಗಳನ್ನು ನನಗೆ ನೀಡಿದರೆ ಖುದ್ದಾಗಿ ಅದನ್ನು ಸಿದ್ಧಗಂಗಾ ಮಠಕ್ಕೆ ನೀಡುವುದಾಗಿ ಹೇಳಿದ್ದರು. ಅದರಂತೆ ಸಾವಿರಾರು ಅಭಿಮಾನಿಗಳು ದರ್ಶನ್ ನಿವಾಸಕ್ಕೆ ಬಂದು ದವಸ ಧಾನ್ಯಗಳನ್ನು ನೀಡಿ ಹೋಗಿದ್ದರು. ಇದೀಗ ದರ್ಶನ್ ಆಪ್ತರು, ಅಭಿಮಾನಿಗಳು ತಂದ ಈ ವಸ್ತುಗಳನ್ನು ನಿನ್ನೆ ತುಮಕೂರಿನ ಸಿದ್ಧಗಂಗಾ ಮಠಕ್ಕೆ ತಲುಪಿಸಿದ್ದಾರೆ.

ದರ್ಶನ್ ಅಭಿಮಾನಿಗಳು

ಸಿದ್ಧಗಂಗಾ ಮಠದ ಕಿರಿಯ ಸ್ವಾಮೀಜಿಗಳನ್ನು ಭೇಟಿ ಮಾಡಿದ ದರ್ಶನ್ ಅಭಿಮಾನಿಗಳು, ದವಸ ಧಾನ್ಯಗಳನ್ನು ಅವರಿಗೆ ನೀಡುವುದರ ಜೊತೆಗೆ ಅದರ ಕ್ವಾಲಿಟಿ ಪತ್ರವನ್ನು ಪಡೆದಿದ್ದಾರೆ. ಸಾವಿರಾರು ವಿದ್ಯಾರ್ಥಿಗಳ ಅನ್ನ ದಾಸೋಹ ಕಾರ್ಯಕ್ರಮಕ್ಕೆ ದರ್ಶನ್ ಅಭಿಮಾನಿಗಳು ದಾನ ನೀಡುವ ಮೂಲಕ ದರ್ಶನ್ ಸಮಾಜಮುಖಿ ಕೆಲಸಕ್ಕೆ ಜೊತೆಯಾಗಿದ್ದಾರೆ. ನಂತರ ರಾಜ್ಯದ ಇತರ ಅನಾಥಾಶ್ರಮ, ವೃದ್ಧಾಶ್ರಮಗಳಿಗೂ ದವಸ ಧಾನ್ಯಗಳನ್ನು ತಲುಪಿಸುವ ಕಾರ್ಯ ನಡೆಯಲಿದೆ.

For All Latest Updates

TAGGED:

ABOUT THE AUTHOR

...view details