ಕರ್ನಾಟಕ

karnataka

ಮೈಸೂರಿಗಿಲ್ಲ ಫಿಲ್ಮ್ ಸಿಟಿ ಭಾಗ್ಯ... ಹಾಗಿದ್ರೆ ಯಾವ ನಗರದಲ್ಲಿ ನಿರ್ಮಾಣ.?

By

Published : Nov 18, 2019, 6:12 AM IST

ಮೈಸೂರಿನಲ್ಲಿ ಫಿಲ್ಮ್ ಸಿಟಿ ನಿರ್ಮಾಣ ಮಾಡಬೇಕು ಎಂಬುದು ಇಲ್ಲಿನವರ ಬಹುದಿನಗಳ ಬೇಡಿಕೆ. ಆದರೆ, ಉಪಮುಖ್ಯಮಂತ್ರಿ ಡಾ.ಸಿ.ಎನ್​​.ಅಶ್ವತ್ಥ್​​ನಾರಾಯಣ ಅವರು, ಬೆಂಗಳೂರಿನಲ್ಲೇ ಫಿಲ್ಮ್​​ ಸಿಟಿ ನಿರ್ಮಿಸುವುದಾಗಿ ಹೇಳಿದ್ದಾರೆ.

ಡಿಸಿಎಂ ಅಶ್ವತ್ಥ್​​ನಾರಾಯಣ ಘೋಷಣೆ

ಬೆಂಗಳೂರು:ರಾಜ್ಯ ರಾಜಧಾನಿ ಬೆಂಗಳೂರಿನಲ್ಲೇ ಫಿಲ್ಮ್​​ ಸಿಟಿ ನಿರ್ಮಿಸುವುದಾಗಿ ಉಪಮುಖ್ಯಮಂತ್ರಿ ಡಾ.ಸಿ.ಎನ್​​. ಅಶ್ವತ್ಥ್​​ನಾರಾಯಣ ಹೇಳಿದ್ದಾರೆ.

ಭಾರತೀಯ ವಿದ್ಯಾಭವನದಲ್ಲಿ ಡಾ.ಬಿ. ಸರೋಜದೇವಿ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಹಲವು ವರ್ಷಗಳಿಂದ ಎಷ್ಟೋ ಸರ್ಕಾರಗಳು ಫಿಲ್ಮ್​​ ಸಿಟಿ ನಿರ್ಮಿಸುತ್ತೇವೆ ಎಂದು ಹೇಳಿವೆ. ಆದರೆ, ಅದು ಇದುವರೆಗೂ ಕಾರ್ಯ ಸಾಧ್ಯವಾಗಿಲ್ಲ. ನಮ್ಮ ಸರ್ಕಾರ ಫಿಲ್ಮ್​ ಸಿಟಿ ನಿರ್ಮಾಣಕ್ಕೆ ಬದ್ಧವಾಗಿರಲಿದೆ. ಆದರೆ, ಅದನ್ನು ಬೆಂಗಳೂರಿನಲ್ಲಿ ನಿರ್ಮಿಸಲಿದೆ ಎಂದರು.

ಡಾ.ಬಿ. ಸರೋಜದೇವಿ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಸುಮಲತಾ, ಡಿಸಿಎಂ ಡಾ.ಸಿ.ಎನ್​​.ಅಶ್ವತ್ಥ್​​ನಾರಾಯಣ

ಮುಖ್ಯಮಂತ್ರಿ ಬಿ.ಎಸ್​​. ಯಡಿಯೂರಪ್ಪ ಅವರು ಅಧಿಕಾರಕ್ಕೆ ಬಂದ ದಿನವೇ ಈ ಜವಾಬ್ದಾರಿ ನನಗೆ ವಹಿಸಿದ್ದಾರೆ. ಅಲ್ಲದೆ, ಇದಕ್ಕಾಗಿ ಬೆಂಗಳೂರಿನಲ್ಲಿ ಜಾಗ ಕೂಡ ಗುರುತಿಸಿದ್ದೆವು. ಆದರೆ, ಕಾರಣಾಂತರಗಳಿಂದ ಸಾಧ್ಯವಾಗಲಿಲ್ಲ. ಆದಷ್ಟು ಬೇಗ ಪೂರಕವಾದ ಸ್ಥಳವನ್ನು ಗುರುತಿಸಿ ಬೆಂಗಳೂರಿನಲ್ಲೇ ಫಿಲ್ಮ್​​ ಸಿಟಿ ನಿರ್ಮಾಣ ಮಾಡುತ್ತೇವೆ ಎಂದು ಹೇಳಿದರು.

ಬಿಜೆಪಿ ಸರ್ಕಾರ ಚಿತ್ರರಂಗದ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡುತ್ತದೆ. ಅಲ್ಲದೆ, ಈಗಾಗಲೇ ಬೆಂಗಳೂರಿನಲ್ಲಿ ಫಿಲ್ಮ್​​ ಸಿಟಿ ಸ್ಥಾಪಿಸುವುದಕ್ಕೆ ಅಂತಾರಾಷ್ಟ್ರೀಯ ಮಟ್ಟದ ದೊಡ್ಡ ದೊಡ್ಡ ಸಂಸ್ಥೆಗಳೂ ಹೆಜ್ಜೆ ಇಟ್ಟಿವೆ. ಅವರಿಗೆ ಸ್ಥಳವನ್ನು ನಿಗದಿಪಡಿಸುವುದಷ್ಟೇ ಬಾಕಿ. ಆದಷ್ಟು ಬೇಗ ಪೂರ್ಣಗೊಳಿಸುತ್ತೇವೆ ಎಂದು ಹೇಳಿದರು.

ABOUT THE AUTHOR

...view details