‘ಕೆಮಿಸ್ಟ್ರಿ ಆಫ್ ಕರಿಯಪ್ಪ’ ಸಿನಿಮಾ ಇಂದಿಗೆ 50 ದಿನಗಳನ್ನು ಪೂರೈಸಿದೆ. ಆರಂಭದಲ್ಲಿ ಸ್ಪೀಡ್ ಆಗಿದ್ದ ಕಲೆಕ್ಷನ್ ಆಮೇಲೆ ಸ್ವಲ್ಪ ನಿಧಾನಗತಿಯಲ್ಲಿ ಸಾಗಿ 50 ದಿನಗಳನ್ನು ತಲುಪವಲ್ಲಿ ಯಶಸ್ಸು ಕಂಡಿದೆ. ಡಾ.ಮಂಜುನಾಥ್ ಡಿ.ಎಸ್ ಈ ಸಿನಿಮಾವನ್ನು ನಿರ್ಮಿಸಿದ್ದಾರೆ.
ನಿಜ ಜೀವನದಲ್ಲಿ ನಡೆದ ಘಟನೆಯೊಂದನ್ನು ಆಧರಿಸಿ ಕುಮಾರ್ ಈ ಸಿನಿಮಾದ ಕಥೆ, ಚಿತ್ರಕಥೆ, ಗೀತ ಸಾಹಿತ್ಯ, ಸಂಭಾಷಣೆ ಬರೆದು ನಿರ್ದೇಶನ ಕೂಡಾ ಮಾಡಿದ್ದರು. ತಬಲಾ ನಾಣಿ ಈ ಚಿತ್ರದ ಪ್ರಮುಖ ಆಕರ್ಷಣೆ . ಮಗನನ್ನು ಸಂರಕ್ಷಿಸುವ ಪಾತ್ರ, ಮನೆಯ ಗೌರವ ಕಾಪಾಡುವ ಪಾತ್ರ, ಮನೆಗೆ ಬಂದ ಸೊಸೆ ಯಾರದೋ ಮಾತು ಕೇಳಿ ಗಂಡನಿಗೆ ಡೈವೋರ್ಸ್ ಕೊಡುವ ಸ್ಥಿತಿಯನ್ನು ಕರಿಯಪ್ಪ ಹೇಗೆ ಕೋರ್ಟಿನ ಕಟಕಟೆಯಲ್ಲಿ ನಿರ್ವಹಿಸುತ್ತಾನೆ ಎಂಬುದು ಚಿತ್ರದ ಕ್ಲೈಮಾಕ್ಸ್.