ಕರ್ನಾಟಕ

karnataka

By

Published : May 29, 2020, 8:39 PM IST

ETV Bharat / sitara

ಲಾಕ್​ಡೌನ್​ ಸಮಯದಲ್ಲಿ ಸಾಕಷ್ಟು ತಾಳ್ಮೆ ಕಲಿತೆ: ಬಿಗ್ ಬಾಸ್ ಬೆಡಗಿ ಚೈತ್ರಾ ವಾಸುದೇವನ್

'ಕನ್ನಡದ ಬಿಗ್ ಬಾಸ್ ಸೀಸನ್ 7' ಸ್ಪರ್ಧಿ, ನಿರೂಪಕಿ ಚೈತ್ರಾ ವಾಸುದೇವನ್ ಲಾಕ್​​ಡೌನ್ ಸಮಯದಲ್ಲಿ ಸಾಕಷ್ಟು ತಾಳ್ಮೆ ಕಲಿತಿರುವುದಾಗಿ ತಿಳಿಸಿದ್ದಾರೆ.

Chaitra Vasudevan is learn Patience during the lockdown
ಲಾಕ್​ಡೌನ್​ ಸಮಯದಲ್ಲಿ ಸಾಕಷ್ಟು ತಾಳ್ಮೆ ಕಲ್ತಿದಾರಂತೆ ಚೈತ್ರಾ ವಾಸುದೇವನ್

'ಕನ್ನಡ ಬಿಗ್ ಬಾಸ್ ಸೀಸನ್ 7' ಸ್ಪರ್ಧಿ, ನಿರೂಪಕಿ ಚೈತ್ರಾ ವಾಸುದೇವನ್ ಬಿಗ್​ಬಾಸ್‌ನಿಂದಾಗಿ ಸಾಕಷ್ಟು ಜನಪ್ರಿಯತೆ ಪಡೆದಿದ್ದಾರೆ. ಇವೆಂಟ್ ಮ್ಯಾನೇಜ್‌ಮೆಂಟ್ ಕಂಪನಿ ಹೊಂದಿರುವ ಅವರು ಈಗಾಗಲೇ ಸಾಕಷ್ಟು ರಿಯಾಲಿಟಿ ಶೋಗಳ ನಿರೂಪಣೆ ಮಾಡಿದ್ದಾರೆ.

ಬಿಗ್ ಬಾಸ್ ಸೀಸನ್ 7 ಸ್ಪರ್ಧಿ ಚೈತ್ರಾ ವಾಸುದೇವನ್ (ಸಂಗ್ರಹ ಚಿತ್ರ)

ಲಾಕ್​ಡೌನ್ ಸಮಯದಲ್ಲಿ ತಮ್ಮ ಚಟುವಟಿಕೆಗಳ ಬಗ್ಗೆ ಹಂಚಿಕೊಂಡಿರುವ ಚೈತ್ರಾ, ಈ ಸಮಯದಲ್ಲಿ ಸಾಕಷ್ಟು ತಾಳ್ಮೆ ಕಲಿತಿದ್ದಾರಂತೆ. ಮಾತ್ರವಲ್ಲ, ಅವರ ಪ್ರಕಾರ ಬಿಗ್​ಬಾಸ್​ಗೂ, ಲಾಕ್​ಡೌನ್​ಗೂ ಇರುವ ಒಂದೇ ಒಂದು ಸಾಮ್ಯತೆ ಎಂದರೆ ಮನೆಯೊಳಗೆ ಇರಬೇಕು. ಅಲ್ಲಿ ದೊಡ್ಮನೆ, ಇಲ್ಲಿ ನಮ್ಮನೆ ಎನ್ನುವುದೊಂದೇ ವ್ಯತ್ಯಾಸ. ಅಲ್ಲಿ ನಮಗೆ ಪರಿಚಯವಿಲ್ಲದವರ ಜೊತೆ ವಾಸಿಸಬೇಕು. ಫೋನ್ ಕೊಡಲ್ಲ, ನಮಗೆ ಬೇಕಾದ ಆಹಾರ ಸಿಗಲ್ಲ, ನಮ್ಮನ್ನು ಪ್ರೀತಿಸುವವರು ಇರೋದಿಲ್ಲ ಎಂದು ಆ ದನಕ್ಕೂ ಈ ದಿನಕ್ಕೂ ಇರುವ ವ್ಯಾತ್ಯಾಸ ಹಂಚಿಕೊಂಡರು.

ಬಿಗ್ ಬಾಸ್ ಸೀಸನ್ 7 ಸ್ಪರ್ಧಿ ಚೈತ್ರಾ ವಾಸುದೇವನ್ (ಸಂಗ್ರಹ ಚಿತ್ರ)

ಲಾಕ್​ಡೌನ್​ನಿಂದಾಗಿ ನಮ್ಮ ಇವೆಂಟ್ ಮ್ಯಾನೇಜ್​ಮೆಂಟ್ ಮೇಲೆ ಸಣ್ಣ ಪರಿಣಾಮ ಬೀರಿದೆ. ಲಾಕ್​ಡೌನ್​ 4.0ದಲ್ಲಿ 50 ಜನರು ಸೇರುವ ಕಾರ್ಯಕ್ರಮ ಆರ್ಗನೈಸ್ ಮಾಡಲು ಅನುಮತಿ ಸಿಕ್ಕಿದೆ. ನಾವು ಇದನ್ನು ಹೇಗೆ ಮಾಡೋದು ಎಂದು ಯೋಚಿಸುತ್ತಿದ್ದೇವೆ, ಆದರೆ ಪರಿಹಾರ ಸಿಕ್ಕಿಲ್ಲ ಎಂದರು.

ಬಿಗ್ ಬಾಸ್ ಸೀಸನ್ 7 ಸ್ಪರ್ಧಿ ಚೈತ್ರಾ ವಾಸುದೇವನ್ (ಸಂಗ್ರಹ ಚಿತ್ರ)

ಇನ್ನು, ನಾನು ಬಹುಬೇಗ ಬಿಗ್​ಬಾಸ್‌ ಮನೆಯಿಂದ ಹೊರಬಂದೆ. ಬಿಗ್​ಬಾಸ್ ಸ್ಪರ್ಧಿಗಳ ವಾಟ್ಸಪ್ ಗ್ರೂಪ್ ಮಾಡಿದ್ದೇನೆ. ಆ ಗ್ರೂಪ್‌ನಲ್ಲಿ ಯಾರದ್ದಾದರೂ ಹುಟ್ಟುಹಬ್ಬ ಇದ್ದಾಗ ಶುಭಾಶಯ ತಿಳಿಸುತ್ತೇವೆ, ಫನ್ ಮಾಡುತ್ತೇವೆ. ಎಲ್ಲರೂ ಮೀಟ್ ಆಗಲು ಪ್ರಯತ್ನಪಡುತ್ತೇವೆ. ನಾನು ಲಾಕ್​ಡೌನ್ ಸಮಯದಲ್ಲಿ ಸ್ಟ್ರೀಟ್​ಫುಡ್ ಬಹಳ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಮಾತ್ರವಲ್ಲ, ನಾನು ನಡೆಸಿಕೊಡುತ್ತಿದ್ದ ಶೋ, ಮೈಕ್ರೋಫೋನ್​ಗಳನ್ನ ಕೂಡಾ ಬಹಳವಾಗಿ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ತಮ್ಮ ನೆನಪುಗಳನ್ನು ಹಂಚಿಕೊಂಡಿದ್ದಾರೆ.

ಬಿಗ್ ಬಾಸ್ ಸೀಸನ್ 7 ಸ್ಪರ್ಧಿ ಚೈತ್ರಾ ವಾಸುದೇವನ್ (ಸಂಗ್ರಹ ಚಿತ್ರ)

ABOUT THE AUTHOR

...view details