ಕರ್ನಾಟಕ

karnataka

By

Published : Sep 21, 2019, 9:23 PM IST

ETV Bharat / sitara

ಮತ್ತೆ ಒಂದಾದ್ರು ಸೆಂಚುರಿ ಸ್ಟಾರ್ - ರೋರಿಂಗ್ ಸ್ಟಾರ್​​​​​, ಏನಿದರ ಗುಟ್ಟು​?

ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ 'ಭರಾಟೆ' ಸಿನಿಮಾಗೆ ಸೆಂಚುರಿ ಸ್ಟಾರ್ ಶಿವರಾಜ್​​​​ಕುಮಾರ್ ಧ್ವನಿ ನೀಡಿದ್ದಾರೆ. ಇಂದು ಆಕಾಶ್ ಸ್ಟುಡಿಯೋದಲ್ಲಿ ಶಿವಣ್ಣ ಚಿತ್ರದ ನಿರೂಪಣೆಗೆ ತಮ್ಮ ಧ್ವನಿ ನೀಡಿದ್ದಾರೆ. ಈ ವೇಳೆ ಚಿತ್ರದ ನಿರ್ದೇಶಕ ಚೇತನ್ ಕುಮಾರ್ ಹಾಗೂ 'ಅಯೋಗ್ಯ' ಸಿನಿಮಾ ನಿರ್ದೇಶಕ ಮಹೇಶ್ ಕೂಡಾ ಹಾಜರಿದ್ದರು.

ಶಿವಣ್ಣ, ಮುರಳಿ

ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಜೊತೆ ರೋರಿಂಗ್​​ ಸ್ಟಾರ್​​​​​​​​​​​​​​​​​​​​​ ಶ್ರೀಮುರಳಿ ತೆರೆ ಹಂಚಿಕೊಂಡಿದ್ದ ಸಿನಿಮಾ 'ಮಫ್ತಿ'. ನರ್ತನ್ ನಿರ್ದೇಶನದ ಈ ಸಿನಿಮಾ ಮೂಲಕ ಸ್ಯಾಂಡಲ್​​​ವುಡ್​​​​​​​​​​​​ನಲ್ಲಿ ಹವಾ ಸೃಷ್ಟಿಸಿದ್ದ, ಶಿವರಾಜ್ ಕುಮಾರ್ ಹಾಗೂ ಶ್ರೀ ಮುರಳಿ ಮತ್ತೆ ಒಂದಾಗಿದ್ದಾರೆ.

ಚೇತನ್ ಕುಮಾರ್, ಶಿವರಾಜ್​​​ಕುಮಾರ್, ಮಹೇಶ್​​

ಹಾಗಾದ್ರೆ ಇವರಿಬ್ಬರೂ ಯಾವ ಸಿನಿಮಾದಲ್ಲಿ ಮತ್ತೆ ಒಟ್ಟಿಗೆ ನಟಿಸುತ್ತಿದ್ದಾರೆ ಅಂತೀರಾ...? ಅದೇ 'ಭರಾಟೆ'. ಈ ಸಿನಿಮಾದಲ್ಲಿ ಶಿವರಾಜ್​​​​​​​​​ಕುಮಾರ್ ಯಾವ ಪಾತ್ರ ಮಾಡ್ತಿದ್ದಾರೆ ಅಂತಾ ಯೋಚನೆ ಮಾಡ್ತಾ ಇದ್ದೀರಾ‌..? ಕನ್ಫ್ಯೂಸ್​​ ಆಗಬೇಡಿ, ಶಿವರಾಜ್ ಕುಮಾರ್ ಭರಾಟೆ ಸಿನಿಮಾದಲ್ಲಿ ನಟಿಸುತ್ತಿಲ್ಲ. ಬದಲಾಗಿ ಈ ಸಿನಿಮಾಕ್ಕೆ ಧ್ವನಿಯಾಗಿದ್ದಾರೆ. ಅಂದ್ರೆ ಭರಾಟೆ ಸಿನಿಮಾದ ಕಥೆಯನ್ನು ಶಿವರಾಜ್ ಕುಮಾರ್ ತಮ್ಮ ಧ್ವನಿಯಲ್ಲಿ ಹೇಳಲಿದ್ದಾರೆ.‌ ಹೀಗಾಗಿ ಇಂದು ಆಕಾಶ್ ಸ್ಟುಡಿಯೋದಲ್ಲಿ, 'ಭರಾಟೆ' ಚಿತ್ರದ ನಿರೂಪಣೆ ಧ್ವನಿ ನೀಡಿದ್ದಾರೆ ಶಿವಣ್ಣ. ಈ ವೇಳೆ 'ಅಯೋಗ್ಯ' ಚಿತ್ರದ ನಿರ್ದೇಶಕ ಮಹೇಶ್ ಕೂಡಾ ಹಾಜರಿದ್ದರು. ನಿರ್ದೇಶಕ ಚೇತನ್ ಕುಮಾರ್ ನಿರ್ದೇಶನದ ಭರಾಟೆ ಚಿತ್ರಕ್ಕೆ, ಸೆಂಚುರಿ ಸ್ಟಾರ್ ಧ್ವನಿ ನೀಡಿರೋದು ವಿಶೇಷ. ಈ ಹಿಂದೆ ಚೇತನ್ ನಿರ್ದೇಶನದ 'ಬಹದ್ದೂರ್' ಸಿನಿಮಾಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಧ್ವನಿ ನೀಡಿದ್ದರು. ಇನ್ನು 'ಭರ್ಜರಿ' ಸಿನಿಮಾಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಧ್ವನಿ ನೀಡಿದ್ದರು. ಬಹುತೇಕ ಶೂಟಿಂಗ್ ಮುಗಿಸಿರುವ 'ಭರಾಟೆ' ಚಿತ್ರ ಸದ್ಯದಲ್ಲೇ ತೆರೆಗೆ ಬರಲಿದೆ.

'ಭರಾಟೆ' ಚಿತ್ರಕ್ಕೆ ಡಬ್ ಮಾಡುತ್ತಿರುವ ಶಿವರಾಜ್​​ಕುಮಾರ್​​​

ABOUT THE AUTHOR

...view details