ಬೆಂಗಳೂರಿನ ಶೇಷಾದ್ರಿಪುರಂ ಇನ್ಸ್ಟಿಟ್ಯೂಟ್ ಆಫ್ ಕಾಮರ್ಸ್ ಅ್ಯಂಡ್ ಮ್ಯಾನೇಜ್ಮೆಂಟ್ ಕಾಲೇಜಿನಲ್ಲಿ ಜರುಗಿದ 'ಸಂಸೃಷ್ಟಿ 2020 ಅಂತರ ಕಾಲೇಜು ಫೆಸ್ಟಿವಲ್ಗೆ ಬಿಗ್ಬಾಸ್ ಖ್ಯಾತಿಯ ಭುವನ್ ಪೊನ್ನಣ್ಣ ಉದ್ಘಾಟನೆ ಮಾಡುವ ಮೂಲಕ ಚಾಲನೆ ನೀಡಿದರು. ಭುವನ್ ಜೊತೆ ಭಜರಂಗಿ ಲೋಕಿ ಕೂಡಾ ಭಾಗವಹಿಸಿ ವಿದ್ಯಾರ್ಥಿಗಳ ಜೊತೆ ಎಂಜಾಯ್ ಮಾಡಿದರು.
ಕಾರ್ಯಕ್ರಮದಲ್ಲಿ ಇಬ್ಬರೂ ನಟರು ತಮ್ಮ ಕಾಲೇಜು ದಿನಗಳನ್ನು ಮೆಲುಕು ಹಾಕಿದರು. 'ಕಾಲೇಜು ಡೇಸ್ ಎಂದರೆ ವಿದ್ಯಾರ್ಥಿ ಜೀವನದಲ್ಲಿ ಬಹಳ ಪ್ರಮುಖ ಘಟ್ಟ. ಅದನ್ನು ಎಂಜಾಯ್ ಮಾಡಿ, ಜೊತೆಗೆ ಓದಿನ ಕಡೆ ಗಮನ ಹರಿಸಿ' ಎಂದು ಕಾಲೇಜು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಕಾರ್ಯಕ್ರಮದಲ್ಲಿ ಭುವನ್ ಪೊನ್ನಣ್ಣ, ಕಿಚ್ಚ ಸುದೀಪ್ ಅಭಿನಯದ 'ಜಸ್ಟ್ ಮಾತ್ ಮಾತಲ್ಲಿ' ಚಿತ್ರದ ಟೈಟಲ್ ಟ್ರ್ಯಾಕ್ ಹಾಡುವ ಮೂಲಕ ವಿದ್ಯಾರ್ಥಿಗಳನ್ನು ರಂಜಿಸಿದರು. ಭಜರಂಗಿ ಲೋಕಿ ಕುರಿತಾದ ಒಂದು ಎವಿಯನ್ನು ಕಾಲೇಜು ಆಡಳಿತ ಮಂಡಳಿ ಪ್ರದರ್ಶನ ಮಾಡಿತು. ಇದಕ್ಕೆ ಫಿದಾ ಆದ ಭಜರಂಗಿ ಲೋಕಿ, ಕಾಲೇಜು ಆಡಳಿತ ಮಂಡಳಿಗೆ ಧನ್ಯವಾದ ಹೇಳಿದರು. ಅಲ್ಲದೆ ತಮ್ಮ ಕಾಲೇಜು ದಿನಗಳನ್ನು ವೇದಿಕೆ ಮೇಲೆ ಮೆಲುಕು ಹಾಕಿದರು. ವಿದ್ಯಾರ್ಥಿಗಳ ಒತ್ತಾಯಕ್ಕೆ ಮಣಿದು 'ಭಜರಂಗಿ' ಹಾಗೂ 'ರಥಾವರ' ಚಿತ್ರದ ಖಡಕ್ ಡೈಲಾಗ್ ಹೇಳಿ ಶಿಳ್ಳೆ, ಚಪ್ಪಾಳೆ ಗಿಟ್ಟಿಸಿದರು.