ಮನರಂಜನೆಯ ವಾಹಿನಿ ಸ್ಟಾರ್ ಸುವರ್ಣ ಇದೀಗ ಹೊಸತನದೊಂದಿಗೆ ಬದಲಾಗಲಿದೆ. ವಾಹಿನಿಯ ಹೊಸ ಲುಕ್ ಇದೀಗ 'ಬದಲಾವಣೆಯ ಬೆಳಕು' ಎಂಬ ಟ್ಯಾಗ್ ಲೈನ್ ಮೂಲಕ ಬೆಳಗಲು ಮುಂದಾಗಿದೆ.
ಸ್ಟಾರ್ ಸುವರ್ಣದಲ್ಲಿ ನ. 22ರಂದು 'ಬದಲಾವಣೆಯ ಬೆಳಕು' ನವೆಂಬರ್ 22ರಂದು ಸಂಜೆ 6 ಗಂಟೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಅದ್ಧೂರಿ ಕಾರ್ಯಕ್ರಮ ಪ್ರಸಾರವಾಗಲಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಬದಲಾವಣೆಯ ಬೆಳಕಿಗೆ ಚಾಲನೆ ನೀಡಲಿದ್ದಾರೆ.
ಇತ್ತೀಚೆಗೆ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ನಟಿಯರಾದ ರಚಿತಾ ರಾಮ್ ಮತ್ತು ಹರಿಪ್ರಿಯ ಹಾಗೂ ಸ್ಟಾರ್ ಸುವರ್ಣ ವಾಹಿನಿಯ ಕಲಾವಿದರು ಬದಲಾವಣೆಯ ಬೆಳಕು ಹಚ್ಚಿದರು. ಇನ್ಮುಂದೆ ಸ್ಟಾರ್ ಸುವರ್ಣ ವಾಹಿನಿಯ ಪ್ರತಿ ಫ್ರೇಮಿನಲ್ಲೂ ಬದಲಾವಣೆಯ ಬೆಳಕಿನ ಝಲಕ್ ಕಾಣಿಸಿಲಿದೆ. ಇದೇ ವೇಳೆ ಮುಖ್ಯಮಂತ್ರಿ ಯಡಿಯೂರಪ್ಪನವರು ಯಡಿಯೂರು ಶ್ರೀ ಸಿದ್ದಲಿಂಗೇಶ್ವರ ಧಾರಾವಾಹಿಯ ಟೀಸರ್ ಲಾಂಚ್ ಮಾಡಿದ್ದಾರೆ.
ಸ್ಟಾರ್ ಸುವರ್ಣದಲ್ಲಿ ನ. 22ರಂದು 'ಬದಲಾವಣೆಯ ಬೆಳಕು' ಪುನೀತ್ ರಾಜ್ಕುಮಾರ್, ರಚಿತಾ ರಾಮ್, ಹರಿಪ್ರಿಯಾ ಮತ್ತು ಸ್ಟಾರ್ ಸುವರ್ಣ ವಾಹಿನಿಯ ಕಲಾವಿದರ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮ ನ. 22ರಂದು ಪ್ರಸಾರವಾಗಲಿದೆ.
ಸ್ಟಾರ್ ಸುವರ್ಣದಲ್ಲಿ ನ. 22ರಂದು 'ಬದಲಾವಣೆಯ ಬೆಳಕು'