ಕರ್ನಾಟಕ

karnataka

ETV Bharat / sitara

ಶಿವಣ್ಣನ 'ಆಯುಷ್ಮಾನ್‌​​​ಭವ' ಚಿತ್ರವನ್ನು ಅದ್ಧೂರಿಯಾಗಿ ಬರಮಾಡಿಕೊಂಡ ಜನತೆ - ಇಂದು ಆಯುಷ್ಮಾನ್​ಭವ ಬಿಡುಗಡೆ

'ಆಯುಷ್ಮಾನ್​​​ಭವ' ಸಿನಿಮಾ ಇಂದು ರಾಜ್ಯಾದ್ಯಂತ 200 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು ಸಿನಿಮಾವನ್ನು ಜನರು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ.

'ಆಯುಷ್ಮಾನ್​​​ಭವ'

By

Published : Nov 15, 2019, 7:31 PM IST

'ಶಿವಲಿಂಗ' ಸಿನಿಮಾ ನಂತರ ಸೆಂಚುರಿ ಸ್ಟಾರ್​​​​ ಶಿವರಾಜ್ ಕುಮಾರ್ ಹಾಗೂ ನಿರ್ದೇಶಕ ಪಿ. ವಾಸು ಕಾಂಬಿನೇಷನ್​​ನಲ್ಲಿ ಮೂಡಿ ಬಂದಿರುವ ಬಹುನಿರೀಕ್ಷಿತ ಚಿತ್ರ 'ಆಯುಷ್ಮಾನ್​​​ಭವ'. ಕೇವಲ ಟ್ರೇಲರ್​​​​​​​​​​​​​​​​​​​​​​ನಿಂದಲೇ ಒಂದಷ್ಟು ಕುತೂಹಲ ಹುಟ್ಟುಹಾಕಿದ್ದ ಸಿನಿಮಾ ಇಂದು ರಾಜ್ಯಾದ್ಯಂತ ಸುಮಾರು 200 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ.

ಶಿವಣ್ಣನ 'ಆಯುಷ್ಮಾನ್​​​ಭವ' ಚಿತ್ರವನ್ನು ಅದ್ಧೂರಿಯಾಗಿ ಬರಮಾಡಿಕೊಂಡ ಜನತೆ

ಶಿವಣ್ಣನ ಚಿತ್ರವನ್ನು ಅಭಿಮಾನಿಗಳು ಕೂಡಾ ಭರ್ಜರಿಯಿಂದ ಬರಮಾಡಿಕೊಂಡಿದ್ದಾರೆ. ನಿರ್ದೇಶಕ ಪಿ. ವಾಸು ಮತ್ತೆ ಸೈಕಾಲಜಿಕಲ್ ಸಿನಿಮಾ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಕೆ.ಜಿ. ರಸ್ತೆಯಲ್ಲಿರುವ ಸಂತೋಷ್ ಚಿತ್ರಮಂದಿರದಲ್ಲಿ ಸಿನಿಮಾವನ್ನು ಜನರು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. ಇನ್ನು ಸೆಂಚುರಿಸ್ಟಾರ್ ಶಿವರಾಜ್​ಕುಮಾರ್ ಆ್ಯಕ್ಟಿಂಗ್ ಬಗ್ಗೆ ಹೇಳುವ ಅಗತ್ಯವೇ ಬೇಡ. ತಮ್ಮ ಪಾತ್ರಕ್ಕಾಗಿ ಶಿವಣ್ಣ ಪರಕಾಯ ಪ್ರವೇಶ ಮಾಡಿದ್ದಾರೆ. ಇನ್ನು ಮಾನಸಿಕ ಅಸ್ವಸ್ಥೆ ಪಾತ್ರದಲ್ಲಿ ರಚಿತಾ ರಾಮ್ ಅಭಿನಯ ಕೂಡಾ ಚೆನ್ನಾಗಿದೆ. ಎವರ್​​​ಗ್ರೀನ್ ಹೀರೋ ಅನಂತ್​​​ನಾಗ್​​​ ಎಂದೆಂದಿಗೂ ಎವರ್​​ಗ್ರೀನ್. ಅವರ ಅಭಿನಯಕ್ಕೆ ಎಲ್ಲರೂ ಫಿದಾ ಆಗಿದ್ದಾರೆ.

ABOUT THE AUTHOR

...view details