ಕರ್ನಾಟಕ

karnataka

ಮಂಡ್ಯ ಜಿಲ್ಲೆಯ ಸಂಸ್ಕೃತಿ ಬಿಂಬಿಸುವ 'ಆನೆಬಲ' ಆಡಿಯೋ ಔಟ್​​​​

By

Published : Oct 26, 2019, 8:50 AM IST

ಮಂಡ್ಯ ಜಿಲ್ಲೆಯ ಎಲ್ಲಾ ತಾಲೂಕುಗಳ ಭಾಷಾ ವೈವಿಧ್ಯತೆ, ಜಾನಪದ ಹಾಗೂ ಹಾಸ್ಯವನ್ನು ಹದವಾಗಿ ಮಿಶ್ರಣ ಮಾಡಲಾಗಿರುವ ಆನೆಬಲ ಸಿನಿಮಾದ ಆಡಿಯೋ ಬಿಡುಗಡೆಯಾಗಿದೆ.

'ಆನೆಬಲ' ಆಡಿಯೋ ರಿಲೀಸ್​​ ಕಾರ್ಯಕ್ರಮ​​

ಜನತಾ ಟಾಕೀಸ್ ಬ್ಯಾನರ್ ಅಡಿಯಲ್ಲಿ ಎ.ವಿ.ವೇಣುಗೋಪಾಲ್ ನಿರ್ಮಾಣ ಮಾಡಿರುವ "ಆನೆಬಲ" ಚಿತ್ರದ ಆಡಿಯೋ ಬಿಡುಗಡೆಯಾಗಿದೆ. ಆನೆ‌ಬಲ ಚಿತ್ರವನ್ನು ಹೊಸ ನಿರ್ದೇಶಕ ಸೂನಗನಹಳ್ಳಿ ರಾಜು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಮಂಡ್ಯದ ಸುತ್ತಮುತ್ತಲ ಪ್ರದೇಶದ ಜೀವನವನ್ನು ನೈಜತೆಯಿಂದ ಕಟ್ಟಿಕೊಡುವ ಪ್ರಯತ್ನವಾಗಿದೆ ಎಂದು ಚಿತ್ರತಂಡ ತಿಳಿಸಿದೆ.

ಮಂಡ್ಯ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಭಾಷಾ ವೈವಿಧ್ಯತೆ ಇದ್ದು, ಹರೆಯದ ಯುವಕರು ಹಳ್ಳಿಯನ್ನು ಕಟ್ಟಲು ಯಾವ ರೀತಿ ಪಾಲ್ಗೊಳ್ಳಬೇಕು ಎಂಬ ಅಂಶವನ್ನು ತೋರಿಸಲಾಗಿದೆ. ಜೊತೆಗೆ ಜಾನಪದ ಹಾಗೂ ಹಾಸ್ಯವನ್ನು ಹದವಾಗಿ ಮಿಶ್ರಣ ಮಾಡಲಾಗಿದೆ ಎನ್ನುತ್ತಾರೆ ನಿರ್ದೇಶಕ ರಾಜು.

'ಆನೆಬಲ' ಆಡಿಯೋ ರಿಲೀಸ್​​ ಕಾರ್ಯಕ್ರಮ​​

ಈ ಚಿತ್ರದ ನಾಲ್ಕು ಹಾಡಿಗಳಿಗೆ ಲೂಸಿಯಾ ಖ್ಯಾತಿಯ ಪೂರ್ಣ ಚಂದ್ರ ತೇಜಸ್ವಿ ಸಂಗೀತ ನೀಡಿದ್ದಾರೆ. ಸಿನಿಮಾದಲ್ಲಿ ನಾಯಕನಾಗಿ ಸಾಗರ್, ನಾಯಕಿಯಾಗಿ ರಾಮನಗರದ ರಕ್ಷಿತಾ ಕಾಣಿಸಿಕೊಂಡಿದ್ದಾರೆ.

ABOUT THE AUTHOR

...view details