ಕರ್ನಾಟಕ

karnataka

By

Published : Jun 17, 2019, 9:27 AM IST

ETV Bharat / sitara

ಉಪೇಂದ್ರ ಮನೆಗೆ‌ ಭೇಟಿ ನೀಡಿದ ಜ್ಯೋತಿಷಿ ಆನಂದ್​​​​ ಗುರೂಜಿ!

ಆರ್​​. ಚಂದ್ರು ನಿರ್ಮಿಸಿ, ನಿರ್ದೇಶಿಸಿರುವ 'ಐ ಲವ್​ ಯು' ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ನಡುವೆ ಜ್ಯೋತಿಷಿ ಆನಂದ್ ಗುರೂಜಿ ಉಪೇಂದ್ರ ಮನೆಗೆ ಭೇಟಿ ನೀಡಿ ಉಪೇಂದ್ರ ಹಾಗೂ ಅವರ ಚಿತ್ರಕ್ಕೆ ಶುಭ ಕೋರಿದ್ದಾರೆ.

ಜ್ಯೋತಿಷಿ ಆನಂದ್ ಗುರೂಜಿ

ಉಪೇಂದ್ರ ಹಾಗೂ ರಚಿತಾ ರಾಮ್​ ಅಭಿನಯದ 'ಐ ಲವ್​ ಯು' ಸಿನಿಮಾ ಕಳೆದ ವಾರ ಬಿಡುಗಡೆಯಾಗಿದ್ದು, ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಚಿತ್ರ ಗೆದ್ದಿರುವುದಕ್ಕೆ ಉಪೇಂದ್ರ, ನಿರ್ದೇಶಕ ಚಂದ್ರು ಸೇರಿ ಚಿತ್ರತಂಡ ಖುಷಿ ವ್ಯಕ್ತಪಡಿಸಿದೆ.

ಉಪೇಂದ್ರ ಮನೆಗೆ‌ ಭೇಟಿ ನೀಡಿದ ಜ್ಯೋತಿಷಿ ಆನಂದ್ ಗುರೂಜಿ

ಜ್ಯೋತಿಷಿ ಆನಂದ್ ಗುರೂಜಿ ಕೂಡಾ ಉಪೇಂದ್ರ ಮನೆಗೆ ಭೇಟಿ ನೀಡಿ ಉಪೇಂದ್ರ ಹಾಗೂ ಚಿತ್ರತಂಡಕ್ಕೆ ವಿಶ್ ಮಾಡಿದ್ದಾರೆ. ಇತ್ತೀಚೆಗೆ ಉಪೇಂದ್ರ ನಿವಾಸಕ್ಕೆ ಭೇಟಿ ನೀಡಿದ್ದ ಆನಂದ್ ಗುರೂಜಿ ಉಪೇಂದ್ರ ಅವರಿಗೆ ಹೂವಿನ ಹಾರ ಹಾಕಿ ಆಶೀರ್ವದಿಸಿದ್ದಾರೆ. ಈ ಸಿನಿಮಾದಿಂದ ದೊಡ್ಡ ಯಶಸ್ಸು ನಿಮಗೆ ಲಭಿಸಲಿದೆ. ಶ್ರೀನಿವಾಸ ಮೆಚ್ಚಿ ನಿಮ್ಮನ್ನ ಹರಸುತ್ತಾನೆ ಎಂದು ಹಾರೈಸಿದ್ದಾರೆ. ಈ ವೇಳೆ ಚಿತ್ರದ ನಿರ್ದೇಶಕ ಆರ್. ಚಂದ್ರು ಕೂಡಾ ಹಾಜರಿದ್ದರು. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಆನಂದ್ ಗುರೂಜಿ, ಉಪೇಂದ್ರ ಹಾಗೂ ಆರ್​. ಚಂದ್ರು ಮಾತುಕತೆ ನಡೆಸಿದರು. ಗುರೂಜಿ ಮನೆವರೆಗೂ ಬಂದು ನಮ್ಮನ್ನು ಹರಸಿರುವುದು ನಮಗೆ ಮತ್ತಷ್ಟು ಖುಷಿ ನೀಡಿದೆ ಎಂದು ಉಪೇಂದ್ರ ಹಾಗೂ ಆರ್. ಚಂದ್ರು ಸಂತೋಷ ವ್ಯಕ್ತಪಡಿಸಿದ್ದಾರೆ.

ಆರ್​​.ಚಂದ್ರು, ಆನಂದ್ ಗುರೂಜಿ, ಉಪೇಂದ್ರ

For All Latest Updates

TAGGED:

ABOUT THE AUTHOR

...view details