ಬಾಲಿವುಡ್ ನಟ ಅಕ್ಷಯ್ ಕುಮಾರ್ ಮಂಗಳಮುಖಿಯರಿಗೆ ನೆಲೆ ಕಲ್ಪಿಸಲು ಬರೋಬ್ಬರಿ 1.5 ಕೋಟಿ ರುಪಾಯಿ ಹಣವನ್ನು ಕೊಟ್ಟಿದ್ದಾರೆ.
ಮಂಗಳಮುಖಿಯರ ಮನೆ ನಿರ್ಮಾಣಕ್ಕೆ ₹1.5 ಕೋಟಿ ಕೊಟ್ರು ಅಕ್ಷಯ್ ಕುಮಾರ್ ಬಾಲಿವುಡ್ ಕಿಲಾಡಿಯ ಈ ಮಹತ್ಕಾರ್ಯವನ್ನು ನಿರ್ದೇಶಕ ರಾಘವ ಲಾರೆನ್ಸ್ ತಮ್ಮ ಫೇಸ್ಬುಕ್ನಲ್ಲಿ ಶೇರ್ ಮಾಡಿ ಅಕ್ಷಯ್ಗೆ ಧನ್ಯವಾದ ತಿಳಿಸಿದ್ದಾರೆ. ಸದ್ಯ ಅಕ್ಷಯ್ ಕುಮಾರ್ ಲಕ್ಷ್ಮಿ ಬಾಂಬ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರ ತಮಿಳಿನ ಕಾಂಚನ ಸಿನಿಮಾದ ರಿಮೇಕ್. ಈ ಸಿನಿಮಾದಲ್ಲಿ ಮಂಗಳ ಮುಖಿಯರ ಮೇಲೆ ಬೆಳಕು ಚೆಲ್ಲಲಾಗಿದೆ.
ಮಂಗಳಮುಖಿಯರ ಮನೆ ನಿರ್ಮಾಣಕ್ಕೆ ₹1.5 ಕೋಟಿ ಕೊಟ್ರು ಅಕ್ಷಯ್ ಕುಮಾರ್ ನಿರ್ದೇಶಕ ರಾಘವ ಲಾರೆನ್ಸ್ ಕೇವಲ ನಿರ್ದೇಶನಕ್ಕೆ ಮಾತ್ರ ಸೀಮಿತವಾಗಿರದೆ ಸಮಾಜಮುಖಿ ಕೆಲಸಗಳಲ್ಲಿಯೂ ತೊಡಗಿದ್ದಾರೆ. ಲಾರೆನ್ಸ್ ಚಾರಿಟೇಬಲ್ ಟ್ರಸ್ಟ್ ತೆರೆದು ಅಸಹಾಯಕರ ಏಳಿಗೆಗೆ ಶ್ರಮಿಸುತ್ತಿದ್ದಾರೆ. ಈ ಬಗ್ಗೆ ಫೇಸ್ಬುಕ್ನಲ್ಲಿ ಬರೆದಿರುವ ರಾಘವ, ನಮ್ಮ ಸಂಸ್ಥೆ ಇದೀಗ 15 ನೇ ವರ್ಷಕ್ಕೆ ಕಾಲಿಡುತ್ತಿದೆ. ಈ ಹಿನ್ನೆಲೆಯಲ್ಲಿ ನಾವೊಂದು ಯೋಜನೆ ಹಾಕಿಕೊಂಡಿದ್ದು ಮಂಗಳಮುಖಿಯರಿಗೆ ಮನೆ ಕಟ್ಟಿಸಿಕೊಡುವ ಯೋಚನೆ ಮಾಡಿದ್ದೇವೆ.
ಈ ಬಗ್ಗೆ ಅಕ್ಷಯ್ರನ್ನು ಕೇಳಿದಾಗ ಹಿಂದೆ ಮುಂದೆ ಯೋಚನೆ ಮಾಡದೆ 1.5 ಕೋಟಿಯನ್ನು ನೀಡಿ ಸಹಾಯ ಮಾಡಿದ್ದಾರೆ. ಧನ್ಯವಾದಗಳು ಅಕ್ಷಯ್ ಕುಮಾರ್ ಸಾರ್. ನಾವು ಮನೆ ನಿರ್ಮಾಣದ ಭೂಮಿ ಪೂಜೆ ದಿನಾಂಕವನ್ನು ಆದಷ್ಟು ಬೇಗ ತಿಳಿಸುತ್ತೇವೆ ಎಂದು ರಾಘವ ತಮ್ಮ ಫೇಸ್ಬುಕ್ನಲ್ಲಿ ಬರೆದಿದ್ದಾರೆ.