ಚೆನ್ನೈ (ತಮಿಳು ನಾಡು): ರಜನಿಕಾಂತ್ ರಾಜಕೀಯ ಸೇರುವುದಿಲ್ಲ ಎಂದು ಹೇಳುವ ಮೂಲಕ ಅಭಿಮಾನಿಗಳಿಗೆ ನಿರಾಸೆಯಾಗಿದೆ. ಅದರ ಜೊತೆಗೆ ರಜನಿಕಾಂತ್ ಮೇಲೆ ಭಾರಿ ಭರವಸೆ ಹೊಂದಿದ್ದ ಬಿಜೆಪಿ ಪಕ್ಷಕ್ಕೂ ತೀವ್ರ ನಿರಾಸೆಗೊಂಡಿದೆ.
ರಜನಿಕಾಂತ್ ಆಸ್ಪತ್ರೆಗೆ ದಾಖಲಾದಾಗಿನಿಂದ ಮತ್ತು ಅವರ ಇತ್ತೀಚಿನ ಪ್ರಾಜೆಕ್ಟ್ ಅಣ್ಣಾಥೆ ಚಿತ್ರದ ಚಿತ್ರೀಕರಣವನ್ನು ನಿಲ್ಲಿಸಿದಾಗಿನಿಂದಲೂ, 'ತಲೈವಾರ್' ಹೊಸ ವರ್ಷದ ಮುನ್ನಾದಿನದಂದು ತಮ್ಮ ಪಕ್ಷದ ನಾಮಕರಣ ಮತ್ತು ಮುಂದಿನ ಕಾರ್ಯಕ್ರಮಗಳನ್ನು ಘೋಷಿಸುವ ಕುರಿತು ಸಂದೇಹಗಳು ಹುಟ್ಟಿಕೊಂಡಿದ್ದವು. ಇದೀಗ ರಜನಿಕಾಂತ್ ರಾಜಕೀಯಕ್ಕೆ ವಿದಾಯ ಹೇಳುವ ಮೂಲಕ ಎಲ್ಲಾ ಸಂದೇಹಗಳಿಗೆ ತೆರೆ ಎಳೆದಿದ್ದಾರೆ.