ಕರ್ನಾಟಕ

karnataka

By

Published : Nov 3, 2019, 7:45 PM IST

ETV Bharat / sitara

ಅಗ್ನಿಸಾಕ್ಷಿ ಧಾರಾವಾಹಿಯ ವಿಜಯ್​ ಸೂರ್ಯ ಇದೀಗ ಪಕ್ಕಾ ಹಳ್ಳಿ ಹೈದ!

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಪ್ರೇಮಲೋಕ' ಧಾರಾವಾಹಿಯಲ್ಲಿ ನಾಯಕನಾಗಿ ಅಭಿನಯಿಸುವ ಮೂಲಕ ವಿಜಯ್​ ಸೂರ್ಯ ಕಿರುತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದಾರೆ. ಈ ಧಾರವಾಹಿಯಲ್ಲಿ ರೈತನ ಗೆಟಪ್​​​ನಲ್ಲಿ ಮಿಂಚಿದ್ದು, ಎಲ್ಲರ ಮನ ಗೆದ್ದಿದ್ದಾರೆ.

ವಿಜಯ್​ ಸೂರ್ಯ

ಕಿರುತೆರೆಯ ಚಾಕೊಲೇಟ್ ಹುಡುಗ ಎಂದೇ ಜನಪ್ರಿಯವಾಗಿರುವ ಗುಳಿ ಕೆನ್ನೆಯ ಚೆಲುವ ವಿಜಯ್ ಸೂರ್ಯ ಬಗ್ಗೆ ಗೊತ್ತಿಲ್ಲದವರಿಲ್ಲ. ಕಲರ್ಸ್ ಕನ್ನಡ ಧಾರಾವಾಹಿಯಲ್ಲಿ ಪ್ರಸಾರವಾಗುತ್ತಿರುವ ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ನಾಯಕ ಸಿದ್ಧಾರ್ಥ್ ಆಗಿ ಮೋಡಿ ಮಾಡಿದ್ದ ವಿಜಯ್ ಸೂರ್ಯ ಅಭಿನಯಕ್ಕೆ ಫಿದಾ ಆಗದವರಿಲ್ಲ.

ಮನೋಜ್ಞ ಅಭಿನಯದ ಮೂಲಕ ಹುಡುಗಿಯರ ಮನ ಕದ್ದ ಗುಳಿ ಕೆನ್ನೆಯ ಚೆಲುವ ಮುಂದೆ ಅಗ್ನಿಸಾಕ್ಷಿಯಿಂದ ಹೊರಬಂದಿದ್ದು ಕಿರುತೆರೆ ವೀಕ್ಷಕರಿಗೆ ಬೇಸರ ತಂದಿತ್ತು. ಆದ್ರೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಪ್ರೇಮಲೋಕ' ಧಾರಾವಾಹಿಯಲ್ಲಿ ನಾಯಕನಾಗಿ ಅಭಿನಯಿಸುವ ಮೂಲಕ ಕಿರುತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದಾರೆ.

ವಿಜಯ್​ ಸೂರ್ಯ

ಹಳ್ಳಿಯಲ್ಲಿ ವಿಜಯ್ ಸೂರ್ಯ!

ಪ್ರೇಮಲೋಕ ಧಾರಾವಾಹಿಯಲ್ಲಿ ನಾಯಕ ಸೂರ್ಯಕಾಂತ್ ಪಾತ್ರಕ್ಕೆ ಜೀವ ತುಂಬುತ್ತಿರುವ ವಿಜಯ್ ಸೂರ್ಯ ಇದೇ ಮೊದಲ ಬಾರಿಗೆ ಹಳ್ಳಿಯ ಕಾಸ್ಟ್ಯೂಮ್ ನಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಧಾರವಾಹಿಯಲ್ಲಿ ನವೀನ್ ಒಡೆಯರ್ ಜೊತೆ ನಾಯಕಿ ಪ್ರೇರಣಾಳ ನಿಶ್ಚಿತಾರ್ಥ ನಡೆದಿದೆ. ನವೀನ್ ಒಡೆಯರ್ ಮತ್ತು ಪ್ರೇರಣಾ ಮದುವೆಯನ್ನು ತಪ್ಪಿಸುವ ಕಾರಣಕ್ಕೆ ಪ್ರೇರಣಾಳನ್ನು ಕಿಡ್ನಾಪ್ ಮಾಡುವ ಸೂರ್ಯ ಮುಂದೆ ಒಂದು ಹಳ್ಳಿಗೆ ಹೋಗುವ ಆಲೋಚನೆ ಮಾಡುತ್ತಾನೆ. ಜೊತೆಗೆ ತಾನು ಮತ್ತು ಪ್ರೇರಣಾ ಹಳ್ಳಿಯಲ್ಲಿರುವ ವಿಷಯ ಯಾರಿಗೂ ತಿಳಿಯಬಾರದು ಎಂಬ ಕಾರಣಕ್ಕೆ ಸಂಪೂರ್ಣವಾಗಿ ಹೊರ ಜಗತ್ತಿನ ಸಂಪರ್ಕದಿಂದ ದೂರವಿರುತ್ತಾನೆ.

ಇದೆಲ್ಲದರ ನಡುವೆ ಹಳ್ಳಿಗೆ ತೆರಳಿರುವ ಸೂರ್ಯನಿಗೆ ಪ್ರೇರಣಾಳ ಮೇಲಿರುವ ಪ್ರೀತಿ ಇನ್ನಷ್ಟು ಹೆಚ್ಚಾಗುತ್ತದೆ. ತಾನು ಪ್ರೇರಣಾಳನ್ನ ಪ್ರೀತಿಸುವ ವಿಷಯವನ್ನು ಸೂರ್ಯ ಹೇಳುತ್ತಾನೆಯೇ ಇಲ್ಲವೇ ಎಂಬುದನ್ನು ಕಾದು ನೋಡಬೇಕಷ್ಟೇ.

ABOUT THE AUTHOR

...view details