ಕರ್ನಾಟಕ

karnataka

ETV Bharat / sitara

ಆಸ್ಪತ್ರೆಯಿಂದ ಇದ್ದಕ್ಕಿದ್ದಂತೆ ಡಿಸ್ಚಾರ್ಜ್​ ಮಾಡಲಾಗಿದೆ: ನಟಿ ವಿಜಯಲಕ್ಷ್ಮಿ ಆರೋಪ

ಇಲ್ಲದ ಕಾರಣ ಹೇಳಿ ನಾನು ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆಯವರು ನನ್ನನ್ನು ಇದ್ದಕ್ಕಿದ್ದಂತೆ ಡಿಸ್ಚಾರ್ಜ್ ಮಾಡಿದ್ದಾರೆ ಎಂದು ನಟಿ ವಿಜಯಲಕ್ಷ್ಮಿ ಆರೋಪಿಸಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದು ಹಣದ ಸಹಾಯ ಬಯಸಿದ್ದ ವಿಜಯಲಕ್ಷ್ಮಿಗೆ ಚಿತ್ರರಂಗದ ಕೆಲವರು ಧನಸಹಾಯ ಮಾಡಿದ್ದರು.

By

Published : Mar 1, 2019, 7:28 PM IST

ವಿಜಯಲಕ್ಷ್ಮಿ

ಅನಾರೋಗ್ಯದಿಂದ ಬಳಲುತ್ತಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಟಿ ವಿಜಯಲಕ್ಷ್ಮಿ, ಆಸ್ಪತ್ರೆಯಿಂದ ನನ್ನನ್ನು ಇದ್ದಕ್ಕಿದ್ದಂತೆ ಡಿಸ್ಚಾರ್ಜ್​ ಮಾಡಿ ಕಳಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಸೆಲ್ಫಿ ವಿಡಿಯೋ ಮಾಡಿರುವ ವಿಜಯಲಕ್ಷ್ಮಿ ತಮ್ಮ ಅಳಲು ತೋಡಿಕೊಂಡಿದ್ದಾರೆ.

ವಿಜಯಲಕ್ಷ್ಮಿ

ನನಗೆ ಆಸ್ಪತ್ರೆಯವರು ಕಿರುಕುಳ ನೀಡಿದ್ದಾರೆ. ನಿನ್ನೆ ಸರ್ಜರಿ ಮಾಡುವುದಾಗಿ ನನಗೆ ಹೇಳಿದ್ದರಿಂದ ನಾವು 50 ಸಾವಿರ ರೂಪಾಯಿ ಹಣ ಕಟ್ಟಿದ್ದೆವು. ಆದರೆ ನಾಳೆ ಸರ್ಜರಿ ಮಾಡುತ್ತೇವೆ ಎಂದು ಮತ್ತೆ ಬಂದು ಹೇಳಿದರು. ಆದರೆ ಇಂದು ಬೆಳಗ್ಗೆ ನನ್ನ ಬಳಿ ಬಂದು ನೀವು ಆರೋಗ್ಯವಾಗಿದ್ದೀರಿ, ನಿಮಗೆ ಸರ್ಜರಿ ಅವಶ್ಯಕತೆಯಿಲ್ಲ ಎಂದು ಹೇಳಿ ಇದ್ದಕ್ಕಿದ್ದಂತೆ ಡಿಸ್ಚಾರ್ಜ್ ಮಾಡಿದ್ದಾರೆ. ಮಾಧ್ಯಮಗಳಿಗೆ ಮಾಹಿತಿ ನೀಡಿದ ಕಾರಣ ಆಸ್ಪತ್ರೆ ವೈದ್ಯರು ನನ್ನ ಮೇಲೆ ಕೋಪಗೊಂಡಿದ್ದಾರೆ ಎಂದು ವಿಜಯಲಕ್ಷ್ಮಿ ಆರೋಪಿಸಿದ್ದಾರೆ.

ನನ್ನ ಹಾಗೂ ಆಸ್ಪತ್ರೆ ಸಿಬ್ಬಂದಿ ಮಧ್ಯೆ ಮಾತಿನ ಚಕಮಕಿ ನಡೆಯಿತು. ಆಗ ನನಗೆ ಶ್ರೀರಾಮಸೇನೆಯವರು ಬಂದು ಸಹಾಯ ಮಾಡಿದರು. ನನಗೆ ಇನ್ನೂ 3-4 ದಿನಗಳ ಕಾಲ ನಿದ್ರೆ ಅವಶ್ಯಕತೆ ಇದೆ. ನಂತರ ಮಾಧ್ಯಮಗಳ ಮುಂದೆ ಘಟನೆ ಬಗ್ಗೆ ಸಂಪೂರ್ಣ ವಿವರಣೆ ಕೊಡುವುದಾಗಿ ವಿಜಯಲಕ್ಷ್ಮಿ ಹೇಳಿದ್ದಾರೆ.

ABOUT THE AUTHOR

...view details