ಕರ್ನಾಟಕ

karnataka

ETV Bharat / sitara

ಗೆಳೆಯರ ಹೊಡೆದಾಟ: ಬೇಸತ್ತು ದುಬೈಗೆ ಹಾರಿದ್ರಾ ತುಪ್ಪದ ಬೆಡಗಿ? - undefined

ಪ್ರೇಮಿಗಳಿಬ್ಬರ ಹೊಡೆದಾಟಕ್ಕೆ ಬೇಸತ್ತ ನಟಿ ಯಾರಿಗೂ ಸಿಗದೆ ದುಬೈಗೆ ಹಾರಿದ್ದಾರೆ ಎನ್ನಲಾಗುತ್ತಿದೆ. ನಿನ್ನೆ ಖಾಸಗಿ ಹೋಟೆಲ್​​​ನಲ್ಲಿ ನಟಿ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರು ಪ್ರೇಮಿಗಳು ಆಕೆಯ ಎದುರಲ್ಲೇ ಹೊಡೆದಾಡಿಕೊಂಡಿದ್ದರು.

ಶಿವಪ್ರಕಾಶ್​

By

Published : Mar 17, 2019, 8:06 PM IST

ಗೆಳೆಯರಿಬ್ಬರ ಹೊಡೆದಾಟ ಪ್ರಕರಣದಿಂದ ಬೇಸತ್ತ ನಟಿ ರಾಗಿಣಿ ದ್ವಿವೇದಿ ಯಾರಿಗೂ ಸಿಗದೆ ರಾತ್ರೋ ರಾತ್ರಿ ದುಬೈಗೆ ಹಾರಿದ್ದಾರೆ ಎನ್ನಲಾಗುತ್ತಿದೆ.

ನಟಿ ವಾಸವಿರುವ ಅಪಾರ್ಟ್​ಮೆಂಟ್​

ನಟಿ ದುಬೈಗೆ ಹೋಗಿದ್ದಾರೆ ಎಂದು ಅವರ ಮನೆಯ ಸೆಕ್ಯೂರಿಟಿ ಮಾಧ್ಯಮದವರಿಗೆ ತಿಳಿಸಿದ್ದಾರೆ. ಖಾಸಗಿ ಹೋಟೆಲ್​​​​ನಲ್ಲಿ ರಾಗಿಣಿ ವಿಚಾರವಾಗಿ ಇಬ್ಬರು ಜಗಳವಾಡಿದ್ದರು ಎಂಬ ಮಾಹಿತಿ ಹೊರಬರುತ್ತಿದ್ದಂತೆ ನಟಿ ಯಾರಿಗೂ ಕಾಣದಂತೆ ದುಬೈಗೆ ಹಾರಿದ್ದಾರೆ ಎನ್ನಲಾಗುತ್ತಿದೆ. ಆರ್​ಟಿಓ ಅಧಿಕಾರಿ ರವಿ ಮೇಲೆ ಶಿವ ಪ್ರಕಾಶ್ ಎಂಬುವವರು ಹಲ್ಲೆ ಮಾಡಿದ್ದಾರೆ ಎಂದು ದೂರು ದಾಖಲಾಗಿದೆ. ಆದರೆ ಇದುವರೆಗೂ ಘಟನೆ ಬಗ್ಗೆ ನಟಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ರಾಗಿಣಿ ಮುಂದೆಯೇ ಇಬ್ಬರೂ ಹೊಡೆದಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ವಿಚಾರವಾಗಿ ಮೂವರೂ ಶೀಘ್ರದಲ್ಲೇ ಪ್ರೆಸ್​​​​​​​​​ಮೀಟ್ ಮಾಡುತ್ತೇನೆ ಎಂದು ಹೇಳಿದ್ದ ಶಿವಪ್ರಕಾಶ್ ಕೂಡಾ ಕಾಣುತ್ತಿಲ್ಲ, ಯಾವ ಕರೆಗಳನ್ನೂ ಸ್ವೀಕರಿಸುತ್ತಿಲ್ಲ ಎನ್ನಲಾಗಿದೆ.

For All Latest Updates

TAGGED:

ABOUT THE AUTHOR

...view details