ಕರ್ನಾಟಕ

karnataka

ETV Bharat / sitara

ಆಧ್ಯಾತ್ಮದತ್ತ ಬಿಗ್ ಬಾಸ್ ಮಾಜಿ ಸ್ಪರ್ಧಿ.. ಧ್ಯಾನ ಶಿಬಿರ ಸೇರಿ ಹೆಸರು ಬದಲಿಸಿಕೊಂಡ್ರು ಚೈತ್ರಾ ಕೊಟ್ಟೂರು! - ಚೈತ್ರಾ ಕೊಟ್ಟೂರು ಲೇಟೆಸ್ಟ್​​ ನ್ಯೂಸ್​

ಮದುವೆ ವಿಚಾರದಲ್ಲಿ ಆರೋಪ ಪ್ರತ್ಯಾರೋಪಗಳಿಂದ ಬೇಸತ್ತಿದ್ದ ಬಿಗ್ ಬಾಸ್ ಮಾಜಿ ಸ್ಪರ್ಧಿ ಚೈತ್ರ ಕೊಟ್ಟೂರು ದಿಢೀರ್ ಅಂತಾ ಆಧ್ಯಾತ್ಮದ ಕಡೆ ಮುಖ ಮಾಡಿದ್ದಾರೆ.

Actress chaithra kotoor joined osho meditation camp
ಆಧ್ಯಾತ್ಮದ ಹಾದಿ ಹಿಡಿದ ನಟಿ ಚೈತ್ರ ಕೊಟ್ಟೂರು

By

Published : Jul 22, 2021, 7:03 PM IST

ಸೂಜಿದಾರ ಚಿತ್ರದ ಮೂಲಕ ನಟಿಯಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ ಚೈತ್ರಾ ಕೊಟ್ಟೂರು. ಈ ಚಿತ್ರ ಬಿಡುಗಡೆ ಮುನ್ನವೇ ಕನ್ನಡದ ಬಿಗ್ ಬಾಸ್ ಸೀಸನ್ 7ರ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆ ಸೇರಿಕೊಂಡು, ಈ ಶೋನಲ್ಲಿ ವಿಚಿತ್ರ ಮಾತುಗಾರಿಕೆಯಿಂದ ಗಮನ ಸೆಳೆದಿದ್ದರು. ಕಳೆದ ಮಾರ್ಚ್​ 28ರಂದು ನಾಗಾರ್ಜುನ ಎಂಬುವರ ಜೊತೆ ಮದುವೆ ಸಹ ಆಗಿದ್ದರು.

ಓಶೋ ಧ್ಯಾನ ಶಿಬಿರದಲ್ಲಿ ಚೈತ್ರಾ ಕೊಟ್ಟೂರು

ಆದರೆ ಈ ಮದುವೆ ವಿಚಾರವಾಗಿ ನಾರ್ಗಾರ್ಜುನ್ ಜತೆ ಗಲಾಟೆ ಮಾಡಿಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದರು. ಇದೀಗ ಮದುವೆ, ಸಂಸಾರ ಜಂಜಾಟಗಳಿಂದ ಬೇಸತ್ತಿರುವ ಅವರು, ದಿಢೀರ್ ಅಂತಾ ಆಧ್ಯಾತ್ಮದ ಕಡೆ ಮುಖ ಮಾಡಿದ್ದಾರೆ. ಅಲ್ಲದೆ, ತಮ್ಮ ಹೆಸರನ್ನ ಕೂಡ ಬದಲಾಯಿಸಿಕೊಂಡಿದ್ದಾರೆ.

ಆಧ್ಯಾತ್ಮದ ಹಾದಿ ಹಿಡಿದ ನಟಿ ಚೈತ್ರ ಕೊಟ್ಟೂರು

ಸದ್ಯ ಓಶೋ ಧ್ಯಾನ ಶಿಬಿರ ಸೇರಿಕೊಂಡು ಧ್ಯಾನ ಮಾಡುತ್ತಿದ್ದಾರೆ. ಆಧ್ಯಾತ್ಮಕ್ಕೆ ಸಂಬಂಧಿಸಿದ ಹಲವು ಕಾರ್ಯಕ್ರಮಗಳಲ್ಲಿ ಚೈತ್ರಾ ಭಾಗವಹಿಸಿದ್ದು, ತಮ್ಮ ಹೆಸರನ್ನು ಮಾ ಪ್ರಗ್ಯಾ ಭಾರತಿ ಅಂತಾ ಬದಲಾಯಿಸಿಕೊಂಡಿದ್ದಾರೆ.

ಸ್ವಾಮಿ ಗೋಪಾಲ ಭಾರತಿ ಅವರೊಂದಿಗೆ ಚೈತ್ರಾ ಕೊಟ್ಟೂರು

ಚೈತ್ರಾ ಅವರು ಸ್ವಾಮಿ ಗೋಪಾಲ ಭಾರತಿ ಅವರೊಂದಿಗಿನ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು, ಅದಕ್ಕೆ ಪ್ರೀತಿಯ ಗುರುಗಳಾದ ಸ್ವಾಮಿ ಗೋಪಾಲ ಭಾರತಿ ಜತೆ ಮಾ ಪ್ರಗ್ಯಾ ಭಾರತಿ ಎಂದು ಬರೆದುಕೊಂಡಿದ್ದಾರೆ.

ಓಶೋ ಧ್ಯಾನ ಶಿಬಿರದಲ್ಲಿ ಚೈತ್ರಾ ಕೊಟ್ಟೂರು

ಇದನ್ನೂ ಓದಿ:ಮದುವೆ ವಿವಾದದ ಬೆನ್ನಲ್ಲೇ ಬಿಗ್​ ಬಾಸ್​ ಖ್ಯಾತಿಯ ಚೈತ್ರಾ ಕೊಟ್ಟೂರು ಆತ್ಮಹತ್ಯೆ ಯತ್ನ

ABOUT THE AUTHOR

...view details