ಕರ್ನಾಟಕ

karnataka

ETV Bharat / sitara

ನಮ್ಮ ಭಾಷೆಯನ್ನು ಬಿಟ್ಟುಕೊಡಬಾರದು, ಕನ್ನಡವನ್ನು ನಾವು ಉಳಿಸಬೇಕು: ನಟಿ ಭವ್ಯ - ಹಿರಿಯ ನಟಿ ಭವ್ಯ

ಕನ್ನಡ ರಾಜ್ಯೋತ್ಸವ ಬಂದಾಗಲ್ಲೆಲ್ಲ ಕನ್ನಡವನ್ನು ಬೆಳೆಸಬೇಕು ಅಂತ ನೆನಪಿಸುತ್ತೆ. ಎಲ್ಲರೂ ಕನ್ನಡ ಭಾಷೆಯನ್ನು ಉತ್ತೇಜಿಸಿ ಪ್ರೋತ್ಸಾಹಿಸಬೇಕು. ಕನ್ನಡ ಭಾಷೆ ಮಾತನಾಡಬೇಕು. ಕರ್ನಾಟಕದಲ್ಲಿ ಕನ್ನಡ ಉಳಿಯಬೇಕು ಅಂತ ನಟಿ ಭವ್ಯ ತಿಳಿಸಿದರು.

actress bhavya speak about  kannada  rajyotsava
ನಮ್ಮ ಭಾಷೆಯನ್ನ ನಾವು ಬಿಟ್ಟುಕೊಡಬಾರದು, ಕನ್ನಡವನ್ನ ಉಳಿಸಬೇಕು : ನಟಿ ಭವ್ಯ

By

Published : Oct 30, 2020, 5:25 PM IST

ಬೆಂಗಳೂರು : ಕನ್ನಡ ರಾಜ್ಯೋತ್ಸವಕ್ಕೆ ಇನ್ನು ಒಂದೇ ದಿನ ಬಾಕಿ ಇದೆ. ಈ ಬಗ್ಗೆ ದಕ್ಷಿಣ ಭಾರತದ ಹಿರಿಯ ನಟಿ ಭವ್ಯ ಈಟಿವಿ ಭಾರತದೊಂದಿಗೆ ಮಾತನಾಡಿದರು.

ನಮ್ಮ ಭಾಷೆಯನ್ನು ನಾವು ಬಿಟ್ಟುಕೊಡಬಾರದು, ಕನ್ನಡವನ್ನು ಉಳಿಸಬೇಕು : ನಟಿ ಭವ್ಯ

ಕರ್ನಾಟಕದಲ್ಲಿ ಕನ್ನಡ ಭಾಷೆಯನ್ನು ಉಳಿಸಬೇಕೆಂದಿರುವ ಭವ್ಯ, ಅನ್ಯ ಭಾಷೆಯ ಮೇಲೆ ಕನ್ನಡಿಗರಿಗೆ ಹೆಚ್ಚು ವ್ಯಾಮೋಹವಿದೆ. ಕನ್ನಡ ರಾಜ್ಯೋತ್ಸವ ಬಂದಾಗಲೆಲ್ಲ ಕನ್ನಡ ಬೆಳೆಸಬೇಕು ಅಂತ ನೆನಪಿಸುತ್ತೆ. ಎಲ್ಲರೂ ಕನ್ನಡ ಭಾಷೆಯನ್ನು ಉತ್ತೇಜಿಸಿ ಪ್ರೋತ್ಸಾಹಿಸಬೇಕು. ಕನ್ನಡ ಭಾಷೆ ಮಾತನಾಡಬೇಕು. ಕರ್ನಾಟಕದಲ್ಲಿ ಕನ್ನಡ ಉಳಿಯಬೇಕು ಎಂದರು.

‌ಇನ್ನು ಕನ್ನಡಿಗರೇ ಕನ್ನಡ ಭಾಷೆ ಮಾತಾಡೋದಿಲ್ವಲ್ಲ ಅಂತ ಮರು ಪ್ರಶ್ನೆ ಕೇಳಿದಾಗ, ಕರ್ನಾಟಕದಲ್ಲಿ ಎಲ್ಲ ಭಾಷೆಯ ಜನರಿದ್ದಾರೆ. ಮಾತನಾಡುವಾಗ ಬೇರೆ ಬೇರೆ ಭಾಷೆಗಳ ಪದಗಳನ್ನು ಬಳಸೋದು ಸಾಮಾನ್ಯ. ಆದರೆ ನಮ್ಮ‌ ಭಾಷೆಯನ್ನು ನಾವು ಬಿಟ್ಟು ಕೊಡಬಾರದು. ನಮ್ಮ ಭಾಷೆಯನ್ನು ಉತ್ತೇಜಿಸಿ ಬೆಳೆಸಬೇಕು ಅಂತ ತಿಳಿಸಿದರು.

ABOUT THE AUTHOR

...view details