ಕರ್ನಾಟಕ

karnataka

By

Published : Aug 22, 2019, 11:05 PM IST

ETV Bharat / sitara

2 ಸಾವಿರ ನೆರೆ ಸಂತ್ರಸ್ತ ಕುಟುಂಬಗಳಿಗೆ ನಟ ವಶಿಷ್ಠ ಸಿಂಹ ನೆರವು

ನಟ ವಶಿಷ್ಠ ಸಿಂಹ ಎರಡು ಸಾವಿರ ನೆರೆ ಸಂತ್ರಸ್ತ ಕುಟುಂಬಗಳಿಗೆ ಅಗತ್ಯ ಸಾಮಗ್ರಿಗಳನ್ನು ಮತ್ತೆ ಕಳುಹಿಸಿದ್ದಾರೆ.

Actor Vashishtha

ಬೆಂಗಳೂರು: ಅತಿವೃಷ್ಟಿಗೆ ಒಳಗಾಗಿರುವ ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕ ಭಾಗದ ನೆರೆ ಸಂತ್ರಸ್ತರಿಗೆ ನಟ ವಶಿಷ್ಠ ಸಿಂಹ ಮತ್ತೆ ನೆರವು ನೀಡಿದ್ದಾರೆ. ಕಳೆದ ನಾಲ್ಕು ದಿನಗಳ ಹಿಂದೆ ಎರಡು ಲಾರಿಗಳಲ್ಲಿ ಪರಿಹಾರ ಸಾಮಗ್ರಿ ಕಳುಹಿಸಿದ್ದ ಅವರು, ಇದೀಗ ಮತ್ತೆರಡು ವಾಹನಗಳನ್ನು ಕಳುಹಿಸಿದ್ದಾರೆ.

ನಟ ವಶಿಷ್ಠ ಸಿಂಹ

ಜಲಪ್ರಳಯದಿಂದ ನಲುಗಿರುವ ನೆರೆ ಸಂತ್ರಸ್ತರಿಗೆ ಅಭಿಮಾನಿಗಳು, ಸ್ನೇಹಿತರು ಹಾಗೂ ಬೆಸ್ಕಾಂ ಜತೆ ಕೈಜೋಡಿಸಿ ಅಗತ್ಯ ವಸ್ತುಗಳನ್ನು ರವಾನಿಸಿದ್ದಾರೆ. ಈ ಎಲ್ಲ ವಸ್ತುಗಳನ್ನು ಕಿಟ್​ ರೂಪದಲ್ಲಿ 2000 ಕುಟುಂಬಗಳಿಗೆ ನೀಡುವ ಉದ್ದೇಶ ಹೊಂದಿದ್ದಾರೆ. ಸ್ವತಃ ತಾವೇ ಮುಂದೆ ನಿಂತು ಕಿಟ್​ ತಯಾರಿಸಿದ್ದಾರೆ.

ನೆರೆ ಸಂತ್ರಸ್ತ ಕುಟುಂಬಗಳಿಗೆ ನಟ ವಶಿಷ್ಠ ಸಿಂಹ ನೆರವು

ಈ ಬಗ್ಗೆ ಮಾತಾಡಿರುವ ನಟ ವಶಿಷ್ಠ, ಸುಮಾರು 2 ಸಾವಿರ ಕುಟುಂಬಗಳಿಗೆ ಅಗತ್ಯ ವಸ್ತುಗಳನ್ನು ನೀಡುತ್ತಿದ್ದೇವೆ. ಈ ಕಿಟ್​ನಲ್ಲಿ ಒಂದು ವಾರಕ್ಕೆ ಆಗುವಷ್ಟು ವಸ್ತುಗಳಿವೆ. ನಮ್ಮ ಹುಡುಗರೇ ಪ್ರತಿ ಮನೆ ಮನೆಗೆ ತೆರಳಿ ಈ ಕಿಟ್​ ವಿತರಿಸಲಿದ್ದಾರೆ ಎಂದು ತಿಳಿಸಿದರು.

ABOUT THE AUTHOR

...view details