ಕರ್ನಾಟಕ

karnataka

ಮದಗಜ ಚಿತ್ರದ ಶೂಟಿಂಗ್​ ವೇಳೆ ನಟ ಶ್ರೀಮುರಳಿ ಕಾಲಿಗೆ ಗಾಯ

By

Published : Apr 7, 2021, 4:39 PM IST

ನಿನ್ನೆ ರಾತ್ರಿ ಶ್ರೀಮುರಳಿ ಆ್ಯಕ್ಷನ್ ಸಿಕ್ವೇನ್ಸ್ ಚಿತ್ರೀಕರಣ ಮಾಡುವ ಸಂದರ್ಭದಲ್ಲಿ ಮೇಲಿಂದ ಕೆಳಗೆ ಹಾರುವ ಸನ್ನಿವೇಶದಲ್ಲಿ ಆಯ ತಪ್ಪಿ ಬಿದ್ದು ಕಾಲಿಗೆ ಗಾಯವಾಗಿದೆ‌. ತಕ್ಷಣ ಚಿತ್ರತಂಡ ಶ್ರೀಮುರಳಿಗೆ ಚಿಕಿತ್ಸೆ ಕೊಡಿಸಿದೆ.

ಶ್ರೀಮುರಳಿ ಕಾಲಿಗೆ ಗಾಯ
ಶ್ರೀಮುರಳಿ ಕಾಲಿಗೆ ಗಾಯ

ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಮದಗಜ ಚಿತ್ರದ ಶೂಟಿಂಗ್ ಸೆಟ್​​ನಲ್ಲಿ ಅವಘಡ ನಡೆದಿದೆ‌. ಕೆಲ ದಿನಗಳ ಹಿಂದೆ ಈ ಸಿನಿಮಾದ ನಾಲ್ಕನೇ ಶೆಡ್ಯೂಲ್ ಚಿತ್ರೀಕರಣ ಆರಂಭವಾಗಿತ್ತು. ನಿರ್ದೇಶಕ ಮಹೇಶ್ ಕುಮಾರ್ ಅಂಡ್ ಮದಗಜ ಚಿತ್ರತಂಡ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಅದ್ಧೂರಿ ಸೆಟ್​​ ಹಾಕಿ ಚಿತ್ರೀಕರಣ ಮಾಡುತ್ತಿತ್ತು.

ನಿನ್ನೆ ರಾತ್ರಿ ಶ್ರೀಮುರಳಿ ಆ್ಯಕ್ಷನ್ ಸಿಕ್ವೇನ್ಸ್ ಚಿತ್ರೀಕರಣ ಮಾಡುವ ಸಂದರ್ಭದಲ್ಲಿ ಮೇಲಿಂದ ಕೆಳಗೆ ಹಾರುವ ಸನ್ನಿವೇಶದಲ್ಲಿ ಆಯ ತಪ್ಪಿ ಬಿದ್ದು ಕಾಲಿಗೆ ಗಾಯವಾಗಿದೆ‌. ತಕ್ಷಣ ಚಿತ್ರತಂಡ ಶ್ರೀಮುರಳಿಗೆ ಚಿಕಿತ್ಸೆ ಕೊಡಿಸಿದೆ. ಸದ್ಯ ಶ್ರೀಮುರಳಿ ವಿಶ್ರಾಂತಿಯಲ್ಲಿ ಇರಬೇಕು ಎಂದು 15 ದಿನಗಳ ಕಾಲ ರೆಸ್ಟ್ ಮಾಡಲು ಸೂಚಿಸಿದ್ದಾರೆ.

ಶೂಟಿಂಗ್​ ವೇಳೆ ನಟ ಶ್ರೀಮುರಳಿ ಕಾಲಿಗೆ ಗಾಯ

ರಾಬರ್ಟ್ ಖ್ಯಾತಿಯ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಮದಗಜ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಅಯೋಗ್ಯ ಸಿನಿಮಾ ಬಳಿಕ ನಿರ್ದೇಶಕ ಮಹೇಶ್ ಕುಮಾರ್ ನಿರ್ದೇಶನ ಮಾಡುತ್ತಿರುವ ಎರಡನೇ ಚಿತ್ರ ಇದಾಗಿದೆ.

ಇದನ್ನೂ ಓದಿ..ಪತಿ ವಿರಾಟ್ ಲಿಫ್ಟ್​​ ಮಾಡಿದ ನಟಿ ಅನುಷ್ಕಾ ಶರ್ಮಾ!

ABOUT THE AUTHOR

...view details