ವರನಟ ಡಾ. ರಾಜ್ ಕುಮಾರ್ ನಮ್ಮೆನ್ನೆಲ್ಲಾ ಅಗಲಿ ಇಂದಿಗೆ 15 ವರ್ಷಗಳು ಕಳೆದಿದೆ. ಈ ಹಿನ್ನೆಲೆಯಲ್ಲಿ ಕಂಠೀರವ ಸ್ಟುಡಿಯೋದಲ್ಲಿರುವ ಡಾ. ರಾಜ್ ಅವರ ಸಮಾಧಿ ಬಳಿ ಆಗಮಿಸಿದ ರಾಜ್ ಕುಟುಂಬದ ಸದಸ್ಯರು ಪೂಜೆ ಸಲ್ಲಿಸಿದ್ದಾರೆ.
ಬಳಿಕ ಮಾತನಾಡಿದ ನಟ ಶಿವರಾಜ್ ಕುಮಾರ್, "ಅಪ್ಪಾಜಿ ಅಗಲಿ 15 ವರ್ಷ ಕಳೆದಿವೆ. ಕೊರೊನಾ ಭೀತಿಯಿಂದ ಆಡಂಬರ ಬೇಡ ಎಂದು ಸರಳವಾಗಿ ಪೂಜೆ ಮಾಡುತ್ತಿದ್ದೇವೆ. ಅಭಿಮಾನಿಗಳು ಹುಷಾರಾಗಿರಬೇಕು. ಎಲ್ಲರಿಗೂ ಕುಟುಂಬ ಇದೆ. ಮಾಸ್ಕ್ ಹಾಕಿಕೊಂಡು, ಸಾಮಾಜಿಕ ಅಂತರ ಕಾಯ್ದುಕೊಳ್ಳಿ. ಯುಗಾದಿಗೆ ಮುನ್ನಾ ದಿನ ಅಪ್ಪಾಜಿ ಪುಣ್ಯಸ್ಮರಣೆಯ ದಿನ ಬಂದಿದೆ. ನಾವು ಯುಗಾದಿ ಹಬ್ಬವನ್ನು ಆಚರಿಸುತ್ತೇವೆ. ಇಡೀ ಕುಟಂಬ ಈ ಹಬ್ಬದ ದಿನ ಸೇರುತ್ತೇವೆ" ಎಂದರು.