ಅಂತಾರಾಷ್ಟ್ರೀಯ ಕಾರ್ಮಿಕರ ದಿನಾಚರಣೆಯಾದ ಇಂದು ಕೊರೊನಾ ಸಂದರ್ಭದಲ್ಲಿಯೂ ಕೆಲಸ ನಿರ್ವಹಿಸುತ್ತಿರುವ ಸಾವಿರಾರು ಕಾರ್ಮಿಕರಿಗೆ ಸ್ಯಾಂಡಲ್ ವುಡ್ ಅಧ್ಯಕ್ಷ, ನಟ ಶರಣ್ ಮನಃಪೂರ್ವಕವಾಗಿ ಶುಭಾಶಯ ಹೇಳಿದ್ದಾರೆ.
ಕೊರೊನಾ ಭೀತಿ ಮಧ್ಯೆ ಕೆಲಸ ಮಾಡುವ ಕಾರ್ಮಿಕರಿಗೆ ಸಲಾಂ ಎಂದ ಅಧ್ಯಕ್ಷ ಶರಣ್
ಸಿನಿಮಾ ರಂಗದಲ್ಲಿರುವ, ಮೇಕಪ್ ಡಿಪಾರ್ಟ್ಮೆಂಟ್, ಲೈಟ್ಸ್ ಡಿಪಾರ್ಟ್ಮೆಂಟ್, ವಾಹನ ಚಾಲಕರು, ಹೀಗೆ ಎಲ್ಲಾ ವಿಭಾಗದಲ್ಲಿ ಕೆಲಸ ಮಾಡುವ ಪ್ರತಿಯೊಬ್ಬ ಕಾರ್ಮಿಕರನ್ನು ನಟ ಶರಣ್ ಸ್ಮರಿಸಿದರು.
Actor sharan
ಈ ಸಂದರ್ಭದಲ್ಲಿ ಸಿನಿಮಾ ರಂಗದಲ್ಲಿರುವ, ಮೇಕಪ್ ಡಿಪಾರ್ಟ್ಮೆಂಟ್, ಲೈಟ್ಸ್ ಡಿಪಾರ್ಟ್ಮೆಂಟ್, ವಾಹನ ಚಾಲಕರು, ಹೀಗೆ ಎಲ್ಲಾ ವಿಭಾಗದಲ್ಲಿ ಕೆಲಸ ಮಾಡುವ ಪ್ರತಿಯೊಬ್ಬ ಕಾರ್ಮಿಕರನ್ನು ನಟ ಶರಣ್ ಸ್ಮರಿಸಿದರು. ಅಷ್ಟೇ ಅಲ್ಲದೇ, ಕೊರೊನಾದಿಂದ ಎಲ್ಲರೂ ಸುರಕ್ಷಿತರಾಗಿರುವಂತೆ ಕಿವಿ ಮಾತನ್ನ ಹೇಳಿದರು.
ಸದ್ಯ ಶರಣ್ ಗುರು ಶಿಷ್ಯರು ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದರು. ಆದರೆ, ಕೊರೊನಾಯಿಂದಾಗಿ ಶೂಟಿಂಗ್ ಸ್ಟಾಪ್ ಆಗಿದ್ದು, ಸಧ್ಯ ಫ್ಯಾಮಿಲಿ ಜೊತೆ ಶರಣ್ ಕಾಲ ಕಳೆಯುತ್ತಿದ್ದಾರೆ.
Last Updated : May 1, 2021, 7:05 PM IST