ಕರ್ನಾಟಕ

karnataka

ETV Bharat / sitara

ಸಹಾಯ ಮಾಡಲು ಹೋಗಿ ಸಿಲುಕಿದರೇ ರವಿಪ್ರಕಾಶ್..? ನಟಿ ವಿಜಯಲಕ್ಷ್ಮಿ ವಿರುದ್ಧ ಈಗ ಕಂಪ್ಲೇಂಟ್

ನಟಿ ವಿಜಯಲಕ್ಷ್ಮಿ ಮತ್ತು ಆಕೆಯ ಸೋದರಿ ಉಷಾದೇವಿ ವಿರುದ್ಧ ನಟ ರವಿ ಪ್ರಕಾಶ್​ ಬೆಂಗಳೂರಿನ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

By

Published : Mar 22, 2019, 11:02 PM IST

ನಟ ರವಿ ಪ್ರಕಾಶ್​ ದೂರು

ತಮ್ಮ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿರುವ ವಿಜಯಲಕ್ಷ್ಮಿ ವಿರುದ್ಧ ದೂರು ನೀಡಿರುವ ರವಿ, ಠಾಣೆಗೆ ಸಲ್ಲಿಸಿರುವ ಎಲ್ಲ ಸಾಕ್ಷಾಧಾರಗಳನ್ನು ಇಂದು ವಿಡಿಯೋ ಮೂಲಕ ಬಹಿರಂಗ ಪಡಿಸಿದ್ದಾರೆ.

ರವಿಪ್ರಕಾಶ್​​, ವಿಜಯಲಕ್ಷ್ಮಿ ಆಸ್ಪತ್ರೆ ಖರ್ಚಿಗೆ ಒಂದು ಲಕ್ಷ ರೂಪಾಯಿ ಸಹಾಯ ಮಾಡಿದ್ದರು. ಆದರೆ, ಇವರಿಂದ ಸಹಾಯ ಪಡೆದ ವಿಜಯಲಕ್ಷ್ಮಿ ಇವರ ವಿರುದ್ಧವೇ ತಿರುಗಿ ಬಿದ್ದು, ಆತನಿಂದ ನಮಗೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿದ್ದರು. ಇದರಿಂದ ತಮಗಾಗಿರುವ ನೋವು ಮತ್ತು ಅವಮಾನಗಳ ಬಗ್ಗೆ ವಿಡಿಯೋದಲ್ಲಿ ರವಿ ಪ್ರಕಾಶ್​ ಹೇಳಿಕೊಂಡಿದ್ದಾರೆ.

ನಟ ರವಿ ಪ್ರಕಾಶ್​ ದೂರು

'ವಿಜಯಲಕ್ಷ್ಮಿ ನನ್ನಿಂದ ಸಹಾಯ ಪಡೆದು ಸಮಾಜದಲ್ಲಿ ನನಗೆ ಅವಮಾನವಾಗುವ ರೀತಿ ವಿಡಿಯೋಗಳನ್ನ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದಾರೆ. ಈ ಕುರಿತು ಈಗಾಗಲೇ ಫಿಲ್ಮ್ ಚೇಂಬರ್​​ನಲ್ಲಿ ದೂರು ದಾಖಲಿಸಿದ್ದೇನೆ. ಈಗ ಚನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ವಂಚನೆ ಮತ್ತು ಘನತೆಗೆ ಧಕ್ಕೆತಂದಿರೋ ಆರೋಪದಡಿ ಮಾರ್ಚ್ 19 ರಂದು ದೂರು ನೀಡಿದ್ದೇನೆ' ಎಂದಿದ್ದಾರೆ ರವಿ.

For All Latest Updates

TAGGED:

ABOUT THE AUTHOR

...view details