ಕರ್ನಾಟಕ

karnataka

ETV Bharat / sitara

ಸಿಎಂ ಸರ್‌, ಪುತ್ರಿಯ ಆರತಕ್ಷತೆ.. ನೀವು ದಯವಿಟ್ಟು ಬರಬೇಕು.. ಬಿಎಸ್‌ವೈಗೆ ನಟ ರಮೇಶ್‌ ಆಮಂತ್ರಣ! - ramesh aravind daughter married news

ಜನವರಿ 16 ರಂದು ರಮೇಶ್ ಅರವಿಂದ್ ಪುತ್ರಿ ಆರತಕ್ಷತೆ ಕಾರ್ಯಕ್ರಮ ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ನಡೆಯಲಿದೆ. ಈ ಹಿನ್ನೆಲೆ ಇಂದು ರಮೇಶ್ ಅರವಿಂದ್ ಮತ್ತು ಪತ್ನಿ ಅರ್ಚನಾ ಎಂ ಅವರು ಸಿಎಂ ಅವರನ್ನ ಆರತಕ್ಷತೆಗೆ ಆಹ್ವಾನಿಸಿದ್ದಾರೆ..

ಸಿಎಂ ಭೇಟಿ ಮಾಡಿದ ನಟ ರಮೇಶ್ ಅರವಿಂದ್
ಸಿಎಂ ಭೇಟಿ ಮಾಡಿದ ನಟ ರಮೇಶ್ ಅಸಿಎಂ ಭೇಟಿ ಮಾಡಿದ ನಟ ರಮೇಶ್ ಅರವಿಂದ್ರವಿಂದ್

By

Published : Jan 4, 2021, 4:07 PM IST

ನಟ ರಮೇಶ್ ಅರವಿಂದ್ ಇಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು ಭೇಟಿಯಾಗಿದ್ದು, ತಮ್ಮ ಮಗಳ ಮದುವೆಯ ಆರತಕ್ಷತೆ ಕಾರ್ಯಕ್ರಮಕ್ಕೆ ಸಿಎಂಗೆ ಆಹ್ವಾನ ನೀಡಿದ್ದಾರೆ.

ಸಿಎಂ ಭೇಟಿ ಮಾಡಿದ ನಟ ರಮೇಶ್ ಅರವಿಂದ್

ಜನವರಿ 16ರಂದು ರಮೇಶ್ ಅರವಿಂದ್ ಪುತ್ರಿ ಆರತಕ್ಷತೆ ಕಾರ್ಯಕ್ರಮ ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ನಡೆಯಲಿದೆ. ಈ ನಿಟ್ಟಿನಲ್ಲಿ ಚಿತ್ರರಂಗದ ಗಣ್ಯರು, ಆಪ್ತರು ಮತ್ತು ರಾಜಕಾರಣಿಗಳನ್ನ ಆಹ್ವಾನಿಸಲಾಗಿದೆ. ಹೀಗಾಗಿ ಇಂದು ಸಿಎಂ ಬಿ ಎಸ್ ಯಡಿಯೂರಪ್ಪ ಅವರನ್ನು ರಮೇಶ್ ಅರವಿಂದ್ ಮತ್ತು ಪತ್ನಿ ಅರ್ಚನಾ ಎಂ ಭೇಟಿ ಮಾಡಿದ್ದು, ಆರತಕ್ಷತೆಗೆ ಆಹ್ವಾನಿಸಿದ್ದಾರೆ.

ಸಿಎಂ ಭೇಟಿ ಮಾಡಿದ ನಟ ರಮೇಶ್ ಅರವಿಂದ್

ಓದಿ:ಸಹೋದ್ಯೋಗಿ ಅಕ್ಷಯ್​ ಜೊತೆ ಸಪ್ತಪದಿ ತುಳಿದ ರಮೇಶ್ ಅರವಿಂದ್ ಪುತ್ರಿ ನಿಹಾರಿಕಾ

ಡಿಸೆಂಬರ್ 28ರಂದು ರಮೇಶ್​​ ಅರವಿಂದ್​​ ಪುತ್ರಿ ನಿಹಾರಿಕಾ ಬಹುಕಾಲದ ಗೆಳೆಯ ಅಕ್ಷಯ್ ಜೊತೆ ಹಸೆಮಣೆ ಏರಿದ್ರು. ಕುಟುಂಬದವರು ಮತ್ತು ತೀರ ಆಪ್ತರ ಸಮ್ಮುಖದಲ್ಲಿ ನಿಹಾರಿಕಾ ಹಾಗೂ ಅಕ್ಷಯ್ ಮದುವೆ ನೆರವೇರಿತ್ತು.

ಬನ್ನೇರುಘಟ್ಟ ರಸ್ತೆಯಲ್ಲಿರುವ ಖಾಸಗಿ ರೆಸಾರ್ಟ್​ನಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಅಕ್ಷಯ್, ನಿಹಾರಿಕಾ ಕೊರಳಿಗೆ ಮಾಂಗಲ್ಯ ಧಾರಣೆ ಮಾಡಿದ್ದರು. ನಿಹಾರಿಕಾ ಮದುವೆ ಸಮಾರಂಭದಲ್ಲಿ ಕುಟುಂಬದವರು, ಸ್ನೇಹಿತರು ಮತ್ತು ಚಿತ್ರರಂಗದ ಕೆಲವೇ ಕೆಲ ಗಣ್ಯರು ಭಾಗಿಯಾಗಿ, ನವ ಜೋಡಿಗೆ ಶುಭ ಹಾರೈಯಿಸಿದ್ರು.

ABOUT THE AUTHOR

...view details