ಕರ್ನಾಟಕ

karnataka

ETV Bharat / sitara

ಪುನೀತ್​ ರಾಜಕುಮಾರ್ 'ಕನ್ನಡದ ಕೋಟ್ಯಧಿಪತಿ' ಒಪ್ಪಲು ಕಾರಣ ಏನ್​ ಗೊತ್ತೆ? - undefined

ಕನ್ನಡದ ಕೋಟ್ಯಧಿಪತಿ ನಾಲ್ಕನೇ ಸೀಸನ್​ ಕಲರ್ಸ್​​ ಕನ್ನಡ ವಾಹಿನಿಯಲ್ಲಿ ಇದೇ 22 ರಿಂದ ರಾತ್ರಿ 8 ಗಂಟೆಗೆ ಶನಿವಾರ ಹಾಗೂ ಭಾನುವಾರ ಪ್ರಸಾರ ಆಗಲಿದೆ. ಈ ಸೀಸನ್​​ನ್ನು ಪವರ್ ಸ್ಟಾರ್ ಪುನೀತ್​ ರಾಜಕುಮಾರ್​ ನಡೆಸಿಕೊಡಲಿದ್ದಾರೆ.

ಪುನೀತ್​ ರಾಜಕುಮಾರ್

By

Published : Jun 18, 2019, 4:19 PM IST

ಪವರ್​ ಸ್ಟಾರ್​ ಪುನೀತ್ ರಾಜಕುಮಾರ್ 'ಕನ್ನಡದ ಕೋಟ್ಯಧಿಪತಿ' ರಿಯಾಲಿಟಿ ಶೋಗೆ ವಾಪಸ್​ ಆಗಿದ್ದಾರೆ. ಯಶಸ್ವಿಯಾಗಿ ಎರಡು ಸೀಸನ್​​​ ಹೋಸ್ಟ್ ಮಾಡಿದ್ದ ಪುನೀತ್​ ಕಾರಣಾಂತರಗಳಿಂದ ಮೂರನೇ ಸೀಸನ್​​​​​ನಿಂದ ಹೊರಗುಳಿದಿದ್ದರು. ಇದೀಗ ನಾಲ್ಕನೇ ಸೀಸನ್​​​​ಗೆ ಕಮ್​ಬ್ಯಾಕ್ ಆಗಿದ್ದಾರೆ.

ಅಪ್ಪು, ಕನ್ನಡದ ಈ ಜನಪ್ರಿಯ ಕಾರ್ಯಕ್ರಮದ ಮೂಲಕ ಕಿರುತೆರೆಗೆ ಬಂದವರು. ಬೆಳ್ಳಿ ಪರದೆಯಲ್ಲಿ ಸಿಕ್ಕ ಯಶಸ್ಸನ್ನು ಇಲ್ಲಿಯೂ ಪಡೆದುಕೊಂಡರು. ಅವರು ಈ ಕಾರ್ಯಕ್ರಮದ ನಿರೂಪಣೆಗೆ ಬರಲು ಪ್ರಮುಖ ಕಾರಣ ಅವರ ತಂದೆ ರಾಜಕುಮಾರ್ ಅಂತೆ. ಇಂದು ನಡೆದ ಮಾಧ್ಯಮಗೋಷ್ಟಿಯಲ್ಲಿ ಈ ವಿಚಾರವನ್ನು ಪುನೀತ್​ ಹಂಚಿಕೊಂಡಿದ್ದಾರೆ.

ಅಣ್ಣಾವ್ರು ತಪ್ಪದೆ ಅಮಿತಾಭ್ ಬಚ್ಚನ್ ನಡೆಸಿಕೊಡುವ 'ಕೌನ್​ ಬನೇಗಾ ಕರೋಡಪತಿ' ಕಾರ್ಯಕ್ರಮ ನೋಡುತ್ತಿದ್ದರಂತೆ. ಅವರ ಜೊತೆ ಪುನೀತ್​ ಸಹ ವೀಕ್ಷಿಸುತ್ತಿದ್ದರಂತೆ. 2011ರಲ್ಲಿ ಕೋಟ್ಯಧಿಪತಿ ಮೊದಲ ಸೀಸನ್​ ನಡೆಸಿಕೊಡಬೇಕು ಎಂದು ಕೇಳಿದಾಗ ರಾಜಕುಮಾರ್ ಅವರು ಇರಲಿಲ್ಲ. ಆದರೆ, ಅವರ ತಾಯಿ ಪಾರ್ವತಮ್ಮ ಅವರು ಪುನೀತ್​ಗೆ ಆತ್ಮವಿಶ್ವಾಸ ತುಂಬಿದ್ದರಂತೆ. ಶಿವಣ್ಣ ಮಾರ್ಗದರ್ಶನ, ರಾಘಣ್ಣ ಸಲಹೆ ಸಹ ಇವರಿಗೆ ದೊರಕಿತಂತೆ. ಇವರೆಲ್ಲರ ಪ್ರೋತ್ಸಾಹದಿಂದ ಕಿರುತೆರೆಗೆ ಕಾಲಿಟ್ಟರಂತೆ ಅಪ್ಪು.

For All Latest Updates

TAGGED:

ABOUT THE AUTHOR

...view details