ಕರ್ನಾಟಕ

karnataka

ಬೀದಿನಾಯಿಗಳ ಹೊಟ್ಟೆ ತುಂಬಿಸಲು ಹೊರಟ ನಟ ಸತೀಶ್​ !

By

Published : Jun 20, 2019, 10:11 PM IST

ಸ್ಯಾಂಡಲ್​​ವುಡ್ ಬ್ರಹ್ಮಚಾರಿ ನಟ ಸತೀಶ್ ನೀನಾಸಂ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. 34 ನೇ ವಸಂತಕ್ಕೆ ಕಾಲಿಟ್ಟ ಅವರು ಅಭಿಮಾನಿಗಳ ಜೊತೆ ಕೇಕ್ ಕತ್ತರಿಸಿ ಸರಳವಾಗಿ ಜನ್ಮದಿನ ಆಚರಿಸಿಕೊಂಡ್ರು.

ನಟ ಸತೀಶ

ಸತೀಶ್​, ಜನ್ಮದಿನದ ಉಡುಗೊರೆಯಾಗಿ ಅಭಿಮಾನಿಗಳಿಗೆ 100 ಸಸಿಗಳನ್ನು ನೀಡಿ ಪರಿಸರ ಕಾಳಜಿ ಮೆರೆದರು. ಇದರ ಜತೆಗೆ ಮತ್ತೊಂದು ಸಾಮಾಜಿಕ ಕಾರ್ಯಕ್ಕೆ ಮುಂದಾಗಿರುವ ಅವರು, ಇಂದು ರಾತ್ರಿ ಹಾಗೂ ನಾಳೆ ಬೆಂಗಳೂರಿನಲ್ಲಿರುವ ಬೀದಿ ನಾಯಿಗಳಿಗೆ ಹೊಟ್ಟೆತುಂಬಾ ಊಟ ಹಾಕಲಿದ್ದಾರೆ. ಈ ಬಗ್ಗೆ ಮಾತಾಡಿರುವ ಸತೀಶ್​, ನಾವು ಮನೆಗಳಲ್ಲಿ ಫಾರಿನ್ ಬ್ರೀಡ್​​ಗಳ ನಾಯಿಗಳನ್ನು ಸಾಕುತ್ತೇವೆ. ಆದರೆ, ಬೀದಿನಾಯಿಗಳು ಹೊಟ್ಟೆಗಿಲ್ಲದೇ ಸಾಯುತ್ತಿವೆ. ಅವುಗಳಿಗೆ ಊಟ ಹಾಕುವ ಕೆಲಸ ಮಾಡುತ್ತೇನೆ ಎಂದರು.

ಹುಟ್ಟುಹಬ್ಬ ಆಚರಿಸಿಕೊಂಡ ನಟ ಸತೀಶ್​

ಸತೀಶ್ ಅವರಿಗೆ ಜನ್ಮದಿನದ ಉಡುಗೊರೆಯಾಗಿ ಅವರು ನಟಿಸುತ್ತಿರುವ ಬ್ರಹ್ಮಚಾರಿ ಚಿತ್ರದ ಟೀಸರ್ ಇಂದು ರಿಲೀಸ್ ಆಗಿದೆ. ಒಂದೂವರೆ ನಿಮಿಷದ ಈ ಟೀಸರ್ ಸಖತ್ ಆಗಿ ಮೂಡಿ ಬಂದಿದೆ.

For All Latest Updates

TAGGED:

ABOUT THE AUTHOR

...view details