ಮುಂಬರುವ ಲೋಕಸಭಾ ಚುನಾವಣೆಯ ಅಖಾಡಕ್ಕಿಳಿಯಲು ಸಕಲ ಸಿದ್ಧತೆ ನಡೆಸಿರುವ ಸಿಎಂ ಕುಮಾರಸ್ವಾಮಿ ಪುತ್ರ, ನಟ ನಿಖಿಲ್ ಗೌಡ ಇಂದು ಧರ್ಮಸ್ಥಳಕ್ಕೆ ಭೇಟಿ ನೀಡಿದ್ರು.
ಲೋಕ ಸಮರಕ್ಕೆ ಸಿದ್ಧತೆ...ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆಶೀರ್ವಾದ ಪಡೆದ ಸಿಎಂ ಪುತ್ರ - ಧರ್ಮಸ್ಥಳ ಮಂಜುನಾಥ ಸ್ವಾಮಿ,
ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಗೌಡ ಬಣ್ಣದ ಲೋಕದಿಂದ ರಾಜಕೀಯಕ್ಕೆ ಜಂಪ್ ಮಾಡುತ್ತಿದ್ದಾರೆ. ಮಂಡ್ಯದ ಕ್ಷೇತ್ರದ ಟಿಕೆಟ್ ಪಕ್ಕಾ ಆಗಿದ್ದು, ಜೆಡಿಸ್ನ ಅಧಿಕೃತ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ನಿಖಿಲ್ ಸಖಲ ತಯಾರಿ ನಡೆಸಿದ್ದಾರೆ.
ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಜತೆ ನಟ ನಿಖಿಲ್ ಕುಮಾರ ಸ್ವಾಮಿ
ಇಲ್ಲಿಯ ಮಂಜುನಾಥ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ, ದೇವರ ಆಶೀರ್ವಾದ ಪಡೆದ ನಿಖಿಲ್, ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವ್ರರನ್ನು ಭೇಟಿ ಮಾಡಿದ್ರು. ಬಳಿಕ ಸ್ನೇಹಿತರ ಜತೆ ಸೇರಿ ಸರತಿ ಸಾಲಿನಲ್ಲಿ ಕುಳಿತು ದೇವರ ಪ್ರಸಾದ ಸ್ವೀಕರಿಸಿದರು.
ಸ್ನೇಹಿತರೊಂದಿಗೆ ಪ್ರಸಾದ ಸೇವಿಸುತ್ತಿರುವ ನಿಖಿಲ್