ಕರ್ನಾಟಕ

karnataka

ETV Bharat / sitara

ನಾಳೆ ಅದ್ಧೂರಿ ಹುಡುಗನ ಹುಟ್ಟುಹಬ್ಬದ ಸಂಭ್ರಮ.. ಅಭಿಮಾನಿಗಳಿಗೆ ‘ಧ್ರುವ’ ಸಂದೇಶ..!

ನಾಳೆ ಆ್ಯಕ್ಷನ್ ಪ್ರಿನ್ಸ್​ ಧ್ರುವ ಸರ್ಜಾ ಹುಟ್ಟುಹಬ್ಬ ಇದ್ದು, ಈ ಬಾರಿ ಬರ್ತ್​ಡೇ ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದಾರೆ. ಹಾಗಾಗಿ ಅದ್ಧೂರಿ ಹುಡುಗ ಅಭಿಮಾನಿಗಳಿಗೆ ಸಂದೇಶ ನೀಡಿದ್ದಾರೆ.

By

Published : Oct 5, 2020, 6:43 PM IST

dhruva-sarja-birthday
ಅಭಿಮಾನಿಗಳಿಗೆ ‘ಧ್ರುವ’ ಸಂದೇಶ..!

ಬೆಂಗಳೂರು:ಅದ್ಧೂರಿ, ಬಹದ್ಧೂರ್ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿರುವ ನಟ ಧ್ರುವ ಸರ್ಜಾ. ಅಕ್ಟೋಬರ್ 6 ಬಂತು ಎಂದರೆ ಆ್ಯಕ್ಷನ್ ಪ್ರಿನ್ಸ್ ಅಭಿಮಾನಿಗಳಿಗೆ ಖುಷಿಯೋ ಖುಷಿ. ಏಕೆಂದರೆ, ಅಂದು ಭರ್ಜರಿ ಹುಡುಗನ ಹುಟ್ಟುಹಬ್ಬದ ಸಂಭ್ರಮ.

ಪ್ರತಿ ವರ್ಷ ಬನಶಂಕರಿಯಲ್ಲಿರುವ ತಮ್ಮ ನಿವಾಸದಲ್ಲಿ ಅದ್ದೂರಿಯಾಗಿ, ಅಭಿಮಾನಿಗಳ ಜೊತೆ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದ ಧ್ರುವ, ಈ ಬಾರಿ ಹುಟ್ಟು ಹಬ್ಬ ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದಾರೆ.

ರಾಮನಂತೆ ಇದ್ದ ಅಣ್ಣನ ಅಗಲಿಕೆ ಹಾಗೂ ಕೊರೊನಾ ಇರುವ ಕಾರಣ ಧ್ರುವ ಈ ನಿರ್ಧಾರ ಕೈಗೊಂಡಿದ್ದು, ಅಭಿಮಾನಿಗಳಿಗೆ ಸಂದೇಶವನ್ನ ನೀಡಿದ್ದಾರೆ. ‘ಅಭಿಮಾನಿಗಳೇ ನಮ್ಮ ಅನ್ನದಾತರು, ನೀವೇ ನಮ್ಮ ಶಕ್ತಿ, ಪ್ರತಿವರ್ಷ ಹುಟ್ಟು ಹಬ್ಬಕ್ಕೆ ನೀವು ನಮ್ಮ ಮನೆಗೆ ಬಂದು ತೋರಿಸೋ ಪ್ರೀತಿ, ಅಭಿಮಾನಿ ವರ್ಣನಾತೀತ. ಈ ವರ್ಷ ಎಲ್ಲ ಬೆಳವಣಿಗೆಗಳು ನಿಮಗೆ ಗೊತ್ತಿರೋದೇ. ಎಲ್ಲೂ ಸಂಭ್ರಮವಿಲ್ಲ. ಅಭಿಮಾನಿಗಳನ್ನ ಮನೆಯ ಬಳಿ ಬರಬೇಡಿ ಎನ್ನಲು ಮನಸಿಲ್ಲ. ನೀವು ಇರುವ ಕಡೆಯಿಂದಲೇ ಹಾರೈಸಿ. ಅದೇ ನನಗೆ ಶ್ರೀ ರಕ್ಷೆ. ಜೈ ಆಂಜನೇಯ’ ಅಂತಾ ಅಭಿಮಾನಿಗಳಿಗೆ ಪ್ರೀತಿಯ ಸಂದೇಶ ನೀಡಿದ್ದಾರೆ.

ABOUT THE AUTHOR

...view details