ಕರ್ನಾಟಕ

karnataka

By

Published : Jul 14, 2021, 1:52 PM IST

ETV Bharat / sitara

ವಂಚನೆ ಪ್ರಕರಣ ಸುಖಾಂತ್ಯ: ಸಿನಿಮಾ ಚರ್ಚೆಯಲ್ಲಿ ಬ್ಯುಸಿಯಾದ ನಟ ದರ್ಶನ್

ಕಳೆದ ಕೆಲ ದಿನಗಳಿಂದ ತಮ್ಮ ಹೆಸರಿನಲ್ಲಿ ನಡೆದ ವಂಚನೆ ಯತ್ನದ ಗೊಂದಲದಲ್ಲಿದ್ದ ನಟ ದರ್ಶನ್, ಇಂದು ಮುಂದಿನ ಸಿನಿಮಾ ಮಾತುಕತೆಯಲ್ಲಿ ಬ್ಯುಸಿಯಾಗಿದ್ದಾರೆ. ದರ್ಶನ್ ನಿವಾಸಕ್ಕೆ ನಿರ್ಮಾಪಕಿ ಶೈಲಜಾ ನಾಗ್ ಆಗಮಿಸಿದ್ದಾರೆ.

Actor Darshan Discussion With Producer Shailaja Nag over next film
ನಿರ್ಮಾಪಕಿ ಶೈಲಜಾ ನಾಗ್ ನಟ ದರ್ಶನ್

ನಟ ದರ್ಶನ್ ಹೆಸರಲ್ಲಿ 25 ಕೋಟಿ ರೂಪಾಯಿ ನಕಲಿ ಶ್ಯೂರಿಟಿ ಪ್ರಕರಣ ನಿನ್ನೆಯಷ್ಟೇ ಸುಖಾಂತ್ಯ ಕಂಡಿದೆ. ಇದೇ ಚಿಂತೆಯಲ್ಲಿರುವ ನಿರ್ಮಾಪಕ ಉಮಾಪತಿ ಟೆಂಪಲ್ ರನ್ ಮಾಡಿದ್ರೆ, ಇತ್ತ ರಾಜರಾಜೇಶ್ವರಿ ನಗರದಲ್ಲಿರುವ ದರ್ಶನ್ ಮನೆಯಲ್ಲಿ ಸಿನಿಮಾ ಬೆಳವಣಿಗೆಗಳು ನಡೆಯುತ್ತಿವೆ.

ಕಳೆದ ಎರಡು ದಿನಗಳಿಂದ ನಡೆದ ಹೈಡ್ರಾಮಾ ಬಳಿಕ, ದರ್ಶನ್ ಸಿನಿಮಾಗಳ ಚರ್ಚೆಯಲ್ಲಿ ಬ್ಯುಸಿಯಾಗಿದ್ದಾರೆ. ಯಜಮಾನ ಸಿನಿಮಾದ ನಂತರ, ಮತ್ತೆ ನಿರ್ಮಾಪಕಿ ಶೈಲಜಾ ನಾಗ್ ಜೊತೆ ಮತ್ತೊಂದು ಸಿನಿಮಾ ಮಾಡುವುದಾಗಿ ದರ್ಶನ್ ಹೇಳಿದ್ದರು. ಈಗ ಸಿನಿಮಾ ಚರ್ಚೆಯಲ್ಲಿ ದರ್ಶನ್ ತೊಡಗಿಸಿಕೊಂಡಿದ್ದಾರೆ.

ನಿರ್ಮಾಪಕಿ ಶೈಲಜಾ ನಾಗ್ ಜೊತೆ ನಟ ದರ್ಶನ್

ಓದಿ : ವಂಚನೆ ಯತ್ನ ಪ್ರಕರಣದಿಂದ ರಿಲೀಫ್: ಬನಶಂಕರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ಉಮಾಪತಿ

ಇಂದು ದರ್ಶನ್ ಮನೆಗೆ ವಿ.ಹರಿಕೃಷ್ಣ, ನಿರ್ಮಾಪಕಿ ಶೈಲಜಾ ನಾಗ್ ಭೇಟಿ ನೀಡಿದ್ದಾರೆ. ಶೈಲಜಾ ನಾಗ್​ಗೆ ಸಿನಿಮಾ ಡೇಟ್​ ಕೊಟ್ಟಿರುವ ಕಾರಣ, ಇಂದು ದರ್ಶನ್ ಮನೆಯಲ್ಲಿ ಸಿನಿಮಾ ಬಗ್ಗೆ ಮಾತುಕತೆ ನಡೆಯುತ್ತಿದೆ.

ABOUT THE AUTHOR

...view details