ಕರ್ನಾಟಕ

karnataka

ETV Bharat / sitara

ಹೈದರಾಬಾದ್​ಗೆ ತೆರಳಲಾಗದೆ ಯಾರಿವಳು ಧಾರಾವಾಹಿಯಿಂದ ಹೊರಬಂದ ಆರವ್ ಸೂರ್ಯ! - ನಟ ಆರವ್ ಸೂರ್ಯ,

ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಯಾರಿವಳು ಧಾರಾವಾಹಿಯಲ್ಲಿ ನಾಯಕ ಡಾ. ನಿಖಿಲ್ ಆಗಿ ಅಭಿನಯಿಸುತ್ತಿರುವ ಆರವ್ ಸೂರ್ಯ ಇದೀಗ ಪಾತ್ರದಿಂದ ಹೊರ ಬಂದಿದ್ದಾರೆ.

Aarav Surya walkout, Aarav Surya walkout from Yarivalu Serial, actor Aarav Surya, actor Aarav Surya news, ಹೊರಬಂದ ಆರವ್ ಸೂರ್ಯ, ಯಾರಿವಳು ಧಾರಾವಾಹಿಯಿಂದ ಹೊರಬಂದ ಆರವ್ ಸೂರ್ಯ, ನಟ ಆರವ್ ಸೂರ್ಯ, ನಟ ಆರವ್ ಸೂರ್ಯ ಸುದ್ದಿ,
ಯಾರಿವಳು ಧಾರಾವಾಹಿಯಿಂದ ಹೊರಬಂದ ಆರವ್ ಸೂರ್ಯ

By

Published : Jun 5, 2021, 8:37 AM IST

ಕೊರೊನಾ ಹಾವಳಿ ಜಾಸ್ತಿಯಾದ ಕಾರಣದಿಂದ ಕರ್ನಾಟಕದಲ್ಲಿ ಸಂಪೂರ್ಣ ಲಾಕ್​ಡೌನ್ ಘೋಷಣೆಯಾಗಿದೆ. ಲಾಕ್​ಡೌನ್ ಕಾರಣದಿಂದಾಗಿ ಕನ್ನಡದ ಧಾರಾವಾಹಿ ತಂಡಗಳು ಹೈದರಬಾದ್​ಗೆ ತೆರಳಿ ಅಲ್ಲಿ ಶೂಟಿಂಗ್ ಮಾಡುತ್ತಿವೆ.

ಈಗಾಗಲೇ ಒಂದಷ್ಟು ಧಾರಾವಾಹಿ ತಂಡಗಳು ಹೈದರಬಾದ್​ಗೆ ತೆರಳಿದ್ದು, ಶೂಟಿಂಗ್ ಕೂಡ ಶುರುವಾಗಿದೆ. ಇದೀಗ ಯಾರಿವಳು ಧಾರಾವಾಹಿ ತಂಡ ಕೂಡ ಹೋಗಲಿದ್ದು, ಅದೇ ಕಾರಣದಿಂದ ಆರವ್ ಸೂರ್ಯ ಧಾರಾವಾಹಿಯಿಂದ ಹೊರ ಬಂದಿದ್ದಾರೆ.

ಹೈದರಾಬಾದ್​ಗೆ ತೆರಳಿ ಶೂಟಿಂಗ್​ನಲ್ಲಿ ಭಾಗವಹಿಸುವುದು ಅಸಾಧ್ಯವಾದ ಕಾರಣ ನಿಖಿಲ್ ಪಾತ್ರಕ್ಕೆ ವಿದಾಯ ಹೇಳಿದ್ದರು ಆರವ್ ಸೂರ್ಯ. ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಇವಳೇ ವೀಣಾಪಾಣಿ ಧಾರಾವಾಹಿಯಲ್ಲಿ ನಾಯಕನಾಗಿ ನಟಿಸುವ ಮೂಲಕ ಕಿರುತೆರೆಗೆ ಕಾಲಿಟ್ಟ ಆರವ್ ಸೂರ್ಯ, ಬಳಿಕ ನಂದಿನಿ, ಮರಳಿ ಬಂದಳು ಸೀತೆ ಧಾರಾವಾಹಿಯಲ್ಲಿ ಅಭಿನಯಿಸಿದ್ದರು.

ABOUT THE AUTHOR

...view details