ಕರ್ನಾಟಕ

karnataka

ETV Bharat / sitara

'ಒಂದು ಹೆಡ್ ಫೋನ್ ಕೊಳ್ಳಲೂ ಹಣ ಇರಲಿಲ್ಲ'​.. ಕಷ್ಟದ ದಿನ ನೆನೆದ ಸಂಗೀತ ಮಾಂತ್ರಿಕ

ಖ್ಯಾತ ಸಂಗೀತ ನಿರ್ದೇಶಕ ಎ.ಆರ್​​. ರೆಹಮಾನ್​ಗೆ ಈಗ 'ಜೆಎಲ್​​​ಬಿ' ಹರ್ಮನ್ ಕಂಪನಿಯ ಭಾರತದ ರಾಯಭಾರಿ. ಆದರೆ, ಹಿಂದೊಂದು ದಿನ ಜೆಎಲ್​​​ಬಿ ಹೆಡ್​ಪೋನ್​ ಖರೀದಿಸಲೂ ಇವರ ಬಳಿ ಹಣವಿರಲಿಲ್ಲ.

By

Published : Apr 27, 2019, 1:53 PM IST

ಎ.ಆರ್​​. ರೆಹಮಾನ್

ಆಸ್ಕರ್​ ಅವಾರ್ಡ್​ ಪುರಸ್ಕೃತ ಎ.ಆರ್​​.ರೆಹಮಾನ್​ ವೃತ್ತಿ ಆರಂಭಿಸಿದ್ದು ಬೆಂಗಳೂರಿನಲ್ಲಿ ಎಂಬುದು ಎಲ್ಲರಿಗೂ ತಿಳಿದ ವಿಷಯ. ಅವರು ಅನೇಕ ಬಾರಿ ಬೆಂಗಳೂರಿಗೆ ಬಂದಿದ್ದಾರೆ. ಮೊನ್ನೆಯಷ್ಟೇ ನವೀಕರಣಗೊಂಡ ಶಂಕರ್​ ನಾಗ್​ ಚಿತ್ರಮಂದಿರದ ಉದ್ಘಾಟನೆಗೆ ರೆಹಮಾನ್ ಆಗಮಿಸಿದ್ದರು.

ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ 'ಶಂಕರ್ ನಾಗ್' ಚಿತ್ರಮಂದಿರಕ್ಕೆ ಹೆಸರಾಂತ ಹರ್ಮನ್ ಕಂಪನಿಯ 'ಜೆಎಲ್​​ಬಿ' ಸೌಂಡ್ ಸ್ಪೀಕರ್ ಅಳವಡಿಸಿದೆ. ಇದನ್ನು ನೋಡಿದ ರೆಹಮಾನ್ ತಮ್ಮ ಜೀವನದ ಕಷ್ಟದ ದಿನಗಳನ್ನು ನೆನೆದರು.

ಒಂದು ಕಾಲದಲ್ಲಿ ಜೆಎಲ್​​ಬಿ ಸ್ಪೀಕರ್, ಹೆಡ್ ಫೋನ್ ಇವರಿಗೆ ಹುಚ್ಚು ಹಿಡಿಸಿದನ್ನು ಹೇಳಿಕೊಂಡ ಸಂಗೀತ ಮಾಂತ್ರಿಕ, ಅದನ್ನು ಕೊಳ್ಳಲು ನನ್ನ ಜೇಬಿನಲ್ಲಿ ಹಣ ಇರಲಿಲ್ಲ. ಐದು ತಿಂಗಳು ಹಣ ಕೂಡಿಹಾಕಿ ಆ ಸ್ಪೀಕರ್​​ ಖರೀದಿಸಿದ್ದೆ ಎಂದರು.

ಅಂದು ಒಂದು ಇಯರ್​ಪೋನ್​ ಕೊಂಡುಕೊಳ್ಳಲು ಪರದಾಡಿದ್ದ ರೆಹಮಾನ್​​, ಇಂದು ಅದೇ 'ಜೆಎಲ್​​​ಬಿ' ಹರ್ಮನ್ ಕಂಪನಿಯ ಭಾರತದ ರಾಯಭಾರಿ ಆಗಿದ್ದಾರೆ. ಅದಕ್ಕೇ ಹೇಳೋದು ಕಾಲಾಯ ತಸ್ಮೈ ನಮಃ!

ಎ.ಆರ್​​.ರೆಹಮಾನ್ ಅವರ ಬೆಳವಣಿಗೆ ಇಡೀ ವಿಶ್ವವೆ ಇಂದು ಮೆಚ್ಚುವಂತಹುದು. ಇವರು ಆಸ್ಕರ್ ಪ್ರಶಸ್ತಿ ವಿಜೇತ, ಭಾರತೀಯ ಚಿತ್ರ ರಂಗದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ಸಂಗೀತ ನಿರ್ದೇಶಕ ಎಂಬ ಖ್ಯಾತಿಯಿದೆ.

For All Latest Updates

TAGGED:

ABOUT THE AUTHOR

...view details