ಕರ್ನಾಟಕ

karnataka

ETV Bharat / sitara

ವಿಜಯ್​ ದೇವರಕೊಂಡ ಜೊತೆ ಮತ್ತೆ ಕಾಣಿಸಿಕೊಂಡ ಕೊಡವತಿ... ಅಭಿಮಾನಿಗಳ ಮನದಲಿ ಸಂದೇಹದ ಅಲೆ! - ಮುಂಬೈನಲ್ಲಿ ವಿಜಯ್​ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ

ಕೊಡಗಿನ ಸಿಂಗಾರಿ ರಶ್ಮಿಕಾ ಮಂದಣ್ಣ ಮಂಗಳವಾರ ಸಂಜೆ ಮುಂಬೈನಲ್ಲಿ ವಿಜಯ್​ ದೇವರಕೊಂಡ ಮತ್ತೆ ಕಾಣಿಸಿಕೊಂಡಿದ್ದು, ಅಭಿಮಾನಿಗಳ ಎದೆಯಲ್ಲಿ ಸಂದೇಹದ ಅಲೆ ಮೂಡಿದೆ.

ವಿಜಯ್​ ದೇವರಕೊಂಡ ಮತ್ತೆ ಕಾಣಿಸಿಕೊಂಡ ಕೊಡವಿನ ಸಿಂಗಾರಿ

By

Published : Sep 4, 2019, 7:29 PM IST

ಟಾಲಿವುಡ್​ ಯುವ ಹೀರೋ ವಿಜಯ್​ ದೇವರಕೊಂಡ ಮತ್ತು ರಶ್ಮಿಕಾ ಮಂಗಳವಾರ ಸಂಜೆ ಮುಂಬೈನಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಮತ್ತೊಮ್ಮೆ ಇವರಿಬ್ಬರು ಜೊತೆಯಾಗಿ ಕಾಣಿಸಿಕೊಂಡಿದ್ದರಿಂದ ಅಭಿಮಾನಿಗಳ ತಲೆಯಲ್ಲಿ ಹುಳಬಿಟ್ಟಂತಾಗಿದೆ.

ವಿಜಯ್​ ದೇವರಕೊಂಡ ಮತ್ತೆ ಕಾಣಿಸಿಕೊಂಡ ಕೊಡವಿನ ಸಿಂಗಾರಿ

ಅಸಲಿ ಸಂಗತಿಯೇ ಏನಂದ್ರೆ ಇವರಿಬ್ಬರು ಇತ್ತೀಚೆಗೆ ನಟಿಸಿರುವ ಚಿತ್ರ ‘ಡಿಯರ್​ ಕಾಮ್ರೇಡ್​’ ಪ್ರೇಕ್ಷಕರ ಮುಂದೆ ಬಂದಿತ್ತು. ಆ ಸಿನಿಮಾ ಪ್ರತ್ಯೇಕ ಪ್ರದರ್ಶನ ಮುಂಬೈನಲ್ಲಿ ಏರ್ಪಾಟು ಮಾಡಲಾಗಿದೆ. ಹೀಗಾಗಿ ಈ ಕಾರ್ಯಕ್ರಮಕ್ಕೆ ನಟ-ನಟಿ ಇಬ್ಬರು ಹಾಜರಾಗಿದ್ದರು.

ವಿಜಯ್​ ದೇವರಕೊಂಡ ಮತ್ತೆ ಕಾಣಿಸಿಕೊಂಡ ಕೊಡವಿನ ಸಿಂಗಾರಿ

ದಕ್ಷಿಣ ಭಾರತದ ನಾಲ್ಕು ಭಾಷೆಯಲ್ಲಿ ಬಿಡುಗಡೆಗೊಂಡಿದ್ದ ಈ ಚಿತ್ರ ಪ್ರೇಕ್ಷಕರ ಮನ ಗೆಲ್ಲಲು ವಿಫಲವಾಗಿತ್ತು. ಮೈತ್ರಿ ಮೂವಿ ಮೇಕರ್ಸ್​ ನಿರ್ಮಿಸಿರುವ ಈ ಚಿತ್ರಕ್ಕೆ ಭರತ್​ ಕಮ್ಮ ನಿರ್ದೇಶಿಸಿದ್ದರು. ಬಾಲಿವುಡ್​ನ ಪ್ರಮುಖ ನಿರ್ದೇಶಕ ಮತ್ತು ನಿರ್ಮಾಪಕ ಕರಣ್​ ಜೋಹಾರ್​ ಈ ಚಿತ್ರದ ಹಿಂದಿ ರಿಮೇಕ್​ ಹಕ್ಕನ್ನು ಪಡೆದಿದ್ದಾರೆ.

ABOUT THE AUTHOR

...view details