ಕರ್ನಾಟಕ

karnataka

ETV Bharat / sitara

ಸುಶಾಂತ್ ಸಿಂಗ್ ಕೇಸ್; ಸಾಮಾಜಿಕ ಜಾಲತಾಣದಿಂದ ಹೊರನಡೆದ ಸೂರಜ್ ಪಾಂಚೋಲಿ - ಇನ್​ಸ್ಟಾಗ್ರಾಮ್​ಗೆ ವಿದಾಯ

ನಟ ಸುಶಾಂತ ಸಿಂಗ್ ರಾಜಪೂತ್ ಹಾಗೂ ಅವರ ಮ್ಯಾನೇಜರ್ ದಿಶಾ ಸಾವಿನ ಪ್ರಕರಣದಲ್ಲಿ ಸೂರಜ್ ಪಾಂಚೋಲಿ ಅವರ ಹೆಸರು ಪ್ರಮುಖವಾಗಿ ಕೇಳಿ ಬಂದಿತ್ತು. ಹಲವು ಊಹಾಪೋಹಗಳಿಗೆ ಉತ್ತರ ಸಹ ನೀಡಿದ್ದರು. ಇನ್ನು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಬಗ್ಗೆ ಹರಿದಾಡುತ್ತಿದ್ದ ಅನೇಕ ವದಂತಿಗಳಿಂದ ಬೇಸತ್ತಿದ್ದರು. ಇದರಿಂದಲೇ ಇಂದು ಇನ್​ಸ್ಟಾಗ್ರಾಂ ಗೆ ವಿದಾಯ ಹೇಳಿದ್ದಾರೆ ಎನ್ನಲಾಗುತ್ತಿದೆ.

Sooraj Pancholi quits Instagram, deletes post
ನಟ ಸೂರಜ್ ಪಾಂಚೋಲಿ

By

Published : Aug 22, 2020, 11:37 PM IST

ಮುಂಬೈ: ಬಾಲಿವುಡ್​ ನಟ ಸೂರಜ್ ಪಾಂಚೋಲಿ ಅವರು ಜನಪ್ರಿಯ ಸಾಮಾಜಿಕ ಜಾಲತಾಣ ಇನ್​ಸ್ಟಾಗ್ರಾಂ ಗೆ ವಿದಾಯ ಹೇಳಿದ್ದಾರೆ.

ಸೀ ಯೂ ಇನ್​ಸ್ಟಾಗ್ರಾಂ ಎಂದು ಬರೆದುಕೊಂಡಿರುವ ಸೂರಜ್ ಪಾಂಚೋಲಿ, ಜಗತ್ತು ಉತ್ತಮ ಸ್ಥಳದಲ್ಲಿದ್ದರೆ ಮುಂದೊಂದಿನ ಯಾವತ್ತಾದರೂ ನಿನ್ನನ್ನು ಮತ್ತೆ ನೋಡುವುದಾಗಿ ತಿಳಿಸಿದ್ದಾರೆ. ಅಲ್ಲದೇ 28ನೇ ಹುಟ್ಟುಹಬ್ಬದ ನವೆಂಬರ್ 9, 2018 ರಂದು ಪೋಸ್ಟ್ ಮಾಡಿದ್ದನ್ನು ಹೊರತುಪಡಿಸಿ ಅವರ ಎಲ್ಲಾ ಇನ್​ಸ್ಟಾಗ್ರಾಂ​ ಪೋಸ್ಟ್‌ಗಳನ್ನು ಸೂರಜ್ ಇಂದು ಅಳಿಸಿ ಹಾಕುವ ಮೂಲಕ ಅದಕ್ಕೆ ಬೈ ಹೇಳಿದ್ದಾರೆ.

ನಟ ಸೂರಜ್ ಪಾಂಚೋಲಿ ಕೊನೆ ಇನ್​ಸ್ಟಾಗ್ರಾಮ್​

ನಟ ಸುಶಾಂತ ಸಿಂಗ್ ರಾಜಪೂತ್ ಹಾಗೂ ಅವರ ಮ್ಯಾನೇಜರ್ ದಿಶಾ ಸಾವಿನ ಪ್ರಕರಣದಲ್ಲಿ ಸೂರಜ್ ಪಾಂಚೋಲಿ ಅವರ ಹೆಸರು ಪ್ರಮುಖವಾಗಿ ಕೇಳಿ ಬಂದಿತ್ತು. ಹಲವು ಊಹಾಪೋಹಗಳಿಗೆ ಉತ್ತರ ಸಹ ನೀಡಿದ್ದರು. ಇನ್ನು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಬಗ್ಗೆ ಹರಿದಾಡುತ್ತಿದ್ದ ಅನೇಕ ವದಂತಿಗಳಿಂದ ಬೇಸತ್ತಿದ್ದರು. ಇದರಿಂದಲೇ ಇಂದು ಇನ್​ಸ್ಟಾಗ್ರಾಂ ಗೆ ವಿದಾಯ ಹೇಳಿದ್ದಾರೆ ಎನ್ನಲಾಗುತ್ತಿದೆ.

ABOUT THE AUTHOR

...view details