ಕರ್ನಾಟಕ

karnataka

By

Published : Feb 20, 2021, 12:59 PM IST

ETV Bharat / sitara

ನಾನು ರಜಪೂತ ಮಹಿಳೆ, ಮೂಳೆ ಮುರಿಯುತ್ತೇನೆ: 'ನಾಚನೆ ಗಾನೆ ವಾಲಿ' ಹೇಳಿಕೆಗೆ ಕಂಗನಾ ರಿಯಾಕ್ಟ್

ನಟಿ ಕಂಗನಾ ರಣಾವತ್​ ಅವರನ್ನು "ನಾಚ್ನಿ ಗಾನೆ ವಾಲಿ" (ಡ್ಯಾನ್ಸರ್​)ಎಂದು ಹೀಯಾಳಿಸಿದ್ದ ​ ಮಧ್ಯಪ್ರದೇಶದ ಮಾಜಿ ಸಚಿವ ಸುಖದೇವ್ ಪಾನ್ಸೆ ಅವರ ಅವಹೇಳನಕಾರಿ ಹೇಳಿಕೆಗೆ ಕಂಗನಾ ರಣಾವತ್​ ಪ್ರತಿಕ್ರಿಯಿಸಿದ್ದು, ಮೂಳೆ ಮುರಿಯುತ್ತೇನೆ ಎಂದು ಟ್ವೀಟ್​ ಮಾಡಿದ್ದಾರೆ.

I am a Rajput woman I break bone
ಕಂಗನಾ ರಿಯಾಕ್ಟ್

ಮುಂಬೈ:ನಟಿ ಕಂಗನಾ ರಣಾವತ್ ರನ್ನು "ನಾಚ್ನಿ ಗಾನೆ ವಾಲಿ" (ಡ್ಯಾನ್ಸರ್​)ಎಂದು ಕರೆದಿದ್ದ ​ಮಧ್ಯಪ್ರದೇಶದ ಮಾಜಿ ಸಚಿವ ಸುಖದೇವ್ ಪಾನ್ಸೆ ಅವರ ಅವಹೇಳನಕಾರಿ ಹೇಳಿಕೆಗೆ ಬಾಲಿವುಡ್​ ನಟಿ ಕಂಗನಾ ಬಹಳ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಪಾನ್ಸೆ ಅವರ ಕಾಮೆಂಟ್ ಬಗ್ಗೆ ಐಎಎನ್ಎಸ್ ಟ್ವೀಟ್ ಆಧರಿಸಿ ನಟಿ ಕಂಗನಾ ಈ ಟ್ವೀಟ್ ಮಾಡಿದ್ದಾರೆ. ಈ ಮೂರ್ಖ ಯಾರೇ ಆಗಲಿ ನಾನು ದೀಪಿಕಾ ಕತ್ರಿನಾ ಅಥವಾ ಆಲಿಯಾ ಅಲ್ಲ ಎಂದು ಅವನಿಗೆ ತಿಳಿದಿದೆ.

ನಾನು ಮಾತ್ರ ಐಟಂ ಸಾಂಗ್​ಗಳನ್ನು ಮಾಡಲು ನಿರಾಕರಿಸಿದ್ದೇನೆ, ದೊಡ್ಡ - ದೊಡ್ಡ ಹಿರೋಗಳ (ಖಾನ್ / ಕುಮಾರ್) ಜೊತೆ ಸಿನಿಮಾ ಮಾಡಲು ನಿರಾಕರಿಸಿದ್ದೇನೆ . ನಾನು ರಜಪೂತ ಮಹಿಳೆ, ನಾನು ಅಲುಗಾಡಿಸುವುದಿಲ್ಲ , ಮೂಳೆ ಮುರಿಯುತ್ತೇನೆ "ಎಂದು ಕಂಗನಾ ಆಕ್ರೋಶಭರಿತವಾಗಿ ಟ್ವೀಟ್​ ಮಾಡಿದ್ದಾರೆ.

ಇದನ್ನೂ ಓದಿ:'ಪೊಗರು' ಹವಾ ಹೇಗಿದೆ ನೋಡಿ!

ABOUT THE AUTHOR

...view details