ಕರ್ನಾಟಕ

karnataka

By

Published : Nov 28, 2020, 11:41 AM IST

Updated : Nov 28, 2020, 11:49 AM IST

ETV Bharat / sitara

ಹೈದರಾಬಾದ್​​​​​​ನಲ್ಲಿರುವ ಅಧೀರನನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ ಕಂಗನಾ

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್​​-2 ಬಾಕಿ ಚಿತ್ರೀಕರಣ ಹೈದರಾಬಾದ್​​​ನಲ್ಲಿ ನಡೆಯುತ್ತಿದೆ. ಇತ್ತೀಚೆಗಷ್ಟೇ ಯಶ್ ಹೈದರಾಬಾದ್​​ಗೆ ಬಂದಿದ್ದು. ಸಂಜಯ್ ದತ್ ಕೂಡಾ ಬಾಕಿ ಇರುವ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ಹೈದರಾಬಾದ್​​​​​​ಗೆ ಬಂದಿಳಿದಿದ್ದಾರೆ. ಶ್ವಾಸಕೋಶದ ಕ್ಯಾನ್ಸರ್​​​​​ಗಾಗಿ ಚಿಕಿತ್ಸೆ ಪಡೆಯಲು ವಿದೇಶಕ್ಕೆ ತೆರಳಿದ್ದ ಸಂಜಯ್ ದತ್ ಈಗ ಬಾಕಿ ಇರುವ ತಮ್ಮ ಭಾಗದ ಚಿತ್ರೀಕರಣ ಮುಗಿಸಲು ಚಿತ್ರತಂಡ ಸೇರಿಕೊಂಡಿದ್ದಾರೆ.

Kangana Ranaut met Adheera
ಕಂಗನಾ ರಣಾವತ್​​​​​

ನಟಿ ಕಂಗನಾ ರಣಾವತ್ ಹೈದರಾಬಾದ್​​​​ನಲ್ಲಿ ಸಂಜಯ್ ದತ್​​ ಅವರನ್ನು ಭೇಟಿಯಾಗಿ ಅವರ ಆರೋಗ್ಯ ವಿಚಾರಿಸಿದ್ದಾರೆ. ಅರೆ ಇದೇನಪ್ಪಾ ಸಂಜಯ್ ದತ್ ಹೈದರಾಬಾದ್​​ನಲ್ಲಿದ್ದಾರೆ. ಕಂಗನಾ ರಣಾವತ್ ಅಲ್ಲಿಗೆ ಏಕೆ ಹೋದ್ರು...ಕಂಗನಾ ಏನಾದ್ರೂ ಕೆಜಿಎಫ್ ಚಿತ್ರದಲ್ಲಿ ...,ಖಂಡಿತ ಇಲ್ಲ. ಕಂಗನಾ ಬೇರೆ ಕೆಲಸದ ಮೇಲೆ ಹೈದರಾಬಾದ್​​ಗೆ ಬಂದಿದ್ದು ಸಂಜಯ್ ದತ್ ಉಳಿದುಕೊಂಡಿರುವ ಹೋಟೆಲ್​​​​ಗೆ ಬಂದಿದ್ದಾರೆ. ಅದೇ ಹೋಟೆಲ್​​ನಲ್ಲಿ ಸಂಜಯ್ ದತ್ ಇದ್ದಾರೆ ಎಂಬ ವಿಚಾರ ತಿಳಿದ ಕಂಗನಾ ರಣಾವತ್, ಕೂಡಲೇ ಅವರ ರೂಮ್​ಗೆ ಹೋಗಿ ಆರೋಗ್ಯ ವಿಚಾರಿಸಿದ್ದಾರೆ.

ಸಂಜಯ್ ದತ್ ಜೊತೆಗೆ ಫೋಟೋ ತೆಗೆಸಿಕೊಂಡು ಅದನ್ನು ಸೋಷಿಯಲ್ ಮೀಡಿಯಾಗೆ ಅಪ್​​​ಲೋಡ್​ ಮಾಡಿದ್ದಾರೆ. "ಸಂಜಯ್ ದತ್ ಹಾಗೂ ನಾನು ಒಂದೇ ಹೋಟೆಲ್​​​​​​​​​​​ನಲ್ಲಿ ತಂಗಿದ್ದೇವೆ ಎಂದು ತಿಳಿಯುತ್ತಿದ್ದಂತೆ ಸಂಜು ಸರ್​​​​​​​ ಭೇಟಿಯಾಗಿ ಅವರ ಆರೋಗ್ಯ ವಿಚಾರಿಸಿದೆ. ಅವರನ್ನು ನೋಡುತ್ತಿದ್ದಂತೆ ನನಗೆ ಬಹಳ ಸರ್ಪ್ರೈಸ್ ಆಯ್ತು. ಚಿಕಿತ್ಸೆ ನಂತರ ಬಹಳ ಸೊರಗಿದ್ದ ಅವರು ಈಗ ಮತ್ತೆ ಆರೋಗ್ಯವಾಗಿ ಹಾಗೂ ಬಹಳ ಹ್ಯಾಂಡ್​​ಸಮ್ ಆಗಿ ಕಾಣುತ್ತಿದ್ದಾರೆ. ದೇವರು ಅವರಿಗೆ ಧೀರ್ಘಾಯಸ್ಸು ಹಾಗೂ ಹೆಚ್ಚಿನ ಆರೋಗ್ಯ ಕೊಟ್ಟು ಕಾಪಾಡಲಿ" ಎಂದು ಪ್ರಾರ್ಥಿಸಿದ್ದಾರೆ.

Last Updated : Nov 28, 2020, 11:49 AM IST

ABOUT THE AUTHOR

...view details