ಕರ್ನಾಟಕ

karnataka

'ತೇಜಸ್'​ ನಿರ್ದೇಶಕರ ಸಾಧನೆ ಕೊಂಡಾಡಿದ ಕಂಗನಾ

By

Published : Mar 4, 2021, 9:24 AM IST

ಕಂಗನಾ ರಣಾವತ್​​ ಅಭಿನಯದ ತೇಜಸ್​ ಸಿನಿಮಾದ ಚಿತ್ರೀಕರಣ ಮಾ.3ರಿಂದ ಪ್ರಾರಂಭವಾಗಿದೆ. ಈ ವೇಳೆ ಟ್ವೀಟ್​ ಮಾಡಿ ಕಂಗನಾ ಶುಭಾಶಯ ತಿಳಿಸಿದ್ದಾರೆ.

Kangana
ಬಾಲಿವುಡ್ ನಟಿ ಕಂಗನಾ ರನೌತ್

ಮುಂಬೈ:ಬಾಲಿವುಡ್ ನಟಿ ಕಂಗನಾ ರಣಾವತ್​ ಅವರು ತಮ್ಮ ತೇಜಸ್ ಸಿನಿಮಾದ ಬಗ್ಗೆ ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ. ಈ ವೇಳೆ ನಿರ್ದೇಶಕ ಸರ್ವೇಶ್ ಮೇವಾರಾ ಅವರನ್ನು ಹೊಗಳಿದ್ದಾರೆ. ಸದ್ಯ ತೇಜಸ್​ ಸಿನಿಮಾ ಚಿತ್ರೀಕರಣ ನಿನ್ನೆಯಿಂದ ಪ್ರಾರಂಭವಾಗಿದೆ.

"ತೇಜಸ್​ ಸಿನಿಮಾದ ಬರಹಗಾರ, ನಿರ್ದೇಶಕರಾದ ಸರ್ವೇಶ್ ಮೇವಾರ ಉತ್ತಮ ಚಿತ್ರವನ್ನು ನೀಡಲು ಸುಮಾರು 1 ದಶಕದಿಂದ ಶ್ರಮ ವಹಿಸುತ್ತಿದ್ದಾರೆ. ನಿನ್ನೆ ಚಿತ್ರೀಕರಣದ ಮೊದಲ ದಿನ. ಅಂದು ಸರ್ವೇಶ್​ ತಾಯಿ ಮಗನ ಛಲ ಕಂಡು ಸಂತೋಷ ಪಟ್ಟರು. ಬೆಳ್ಳಿಪರದೆಯ ಮೇಲೆ ಮಗನ ಸಾಧನೆ ಕಾಣುವ ತವಕ ಕಂಡು ನನ್ನ ಕುಟುಂಬ ನನಗೆ ನೆನಪಾಯಿತು" ಎಂದು ಟ್ವೀಟ್​ ಮಾಡಿದ್ದಾರೆ.

ಭಾನುವಾರದಂದು ಕಂಗನಾ, ತೇಜಸ್​ ಸಿನಿಮಾ ನಿರ್ದೇಶಕರು ಮತ್ತು ಸಿಬ್ಬಂದಿಯನ್ನು ಆಹ್ವಾನಿಸಿದ್ದರು. ಈ ವೇಳೆ, ತೆಗೆದುಕೊಂಡ ಭಾವಚಿತ್ರವನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. "ಬಹಳ ವಿಶೇಷವಾದ ಭಾನುವಾರ. ನನ್ನ ತೇಜಸ್ ತಂಡದ ಜೊತೆ ಮಾತುಕತೆ ನಡೆಸಿದೆ. ಮುಂಬರುವ ತಿಂಗಳಿನಿಂದ ಇದು ನನ್ನ ಕುಟುಂಬ. ಹ್ಯಾಪಿ ಜರ್ನಿ ಸರ್ವೇಶ್​ ಮೇವಾರ" ಎಂದು ಬರೆದಿದ್ದಾರೆ.

ABOUT THE AUTHOR

...view details