ಕರ್ನಾಟಕ

karnataka

By

Published : Mar 18, 2022, 1:06 PM IST

ETV Bharat / sitara

'ದಿ ಕಾಶ್ಮೀರ್​​ ಫೈಲ್ಸ್​​' ನಿರ್ದೇಶಕ ಅಗ್ನಿಹೋತ್ರಿಗೆ 'ವೈ' ಶ್ರೇಣಿಯ ಭದ್ರತೆ

ಸಿನಿಮಾ ಮಾಡಲು ಶುರು ಮಾಡಿದಾಗಿನಿಂದ ಕೊಲೆ ಬೆದರಿಕೆ ಕರೆಗಳು, ಸಂದೇಶಗಳು ಬರುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ ತರಹೇವಾರಿ ಕಮೆಂಟ್​ಗಳು ಬರುತ್ತಿವೆ ಎಂದಿದ್ದಾರೆ ನಿರ್ದೇಶಕ ಅಗ್ನಿಹೋತ್ರಿ..

Film director Vivek Agnihotri has been given 'Y' category security with CRPF
ನಿರ್ದೇಶಕ ವಿವೇಕ್ ಅಗ್ನಿಹೋತ್ರಿಗೆ ಭದ್ರತೆ ನೀಡಿದ ಸರ್ಕಾರ

ಮುಂಬೈ :ಮಾ.11ರಂದು ಬಿಡುಗಡೆಯಾದ ವಿವೇಕ್ ಅಗ್ನಿಹೋತ್ರಿ ನಿರ್ದೇಶನದ 'ದಿ ಕಾಶ್ಮೀರ್​​ ಫೈಲ್ಸ್​​' ಸಿನಿಮಾಗೆ ಪಿಎಂ ಮೋದಿ ಸೇರಿದಂತೆ ಎಲ್ಲೆಡೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ. ಗಲ್ಲಾ ಪೆಟ್ಟಿಗೆಯಲ್ಲಿ ಸದ್ದು ಮಾಡ್ತಿದೆ. ಇದರ ನಡುವೆ ನಿರ್ದೇಶಕ ಚಿತ್ರದ ಕುರಿತಂತೆ ಆಸಕ್ತಿದಾಯಕವಾದ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಚಿತ್ರವು 90ರ ದಶಕದಲ್ಲಿ ಕಾಶ್ಮೀರಿ ಪಂಡಿತರು ಎದುರಿಸಿದ ನೋವು, ಸಂಕಟ, ಹೋರಾಟ ಮತ್ತು ಆಘಾತದ ಕುರಿತ ಹೃದಯ ವಿದ್ರಾವಕ ನಿರೂಪಣೆಯನ್ನು ಹೊಂದಿದೆ. ಸಿನಿಮಾ ರಿಲೀಸ್​ ಆದಾಗಿನಿಂದ ವಿಮರ್ಶಕರಿಂದ, ವೀಕ್ಷಕರಿಂದ ಸಾಕಷ್ಟು ಟೀಕೆಗಳು ಕೂಡ ಕೇಳಿ ಬರುತ್ತಿವೆ.

ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಸಂದರ್ಶನ..

ಸಿನಿಮಾದ ಕುರಿತಂತೆ ಮಾಧ್ಯಮಗಳೊಂದಿಗೆ ಮಾತನಾಡಿದ ವಿವೇಕ್, ಭಾರತದ ಯಾವ ಕಥೆಯನ್ನು ಹೇಳಲು ಭಯಪಡುತ್ತಾರೋ ಆ ಕಥೆಯನ್ನು ನಾನು ಸಿನಿಮಾದ ಮೂಲಕ ಹೇಳಿದ್ದೇನೆ. ಯಾವ ನಟರು, ಕ್ಯಾಮೆರಾಮ್ಯಾನ್​ಗಳು ಚಿತ್ರದಲ್ಲಿ ನಟಿಸಲು ಸಿದ್ಧರಿರಲಿಲ್ಲ.

ಸಿನಿಮಾ ಮಾಡಲು ಶುರು ಮಾಡಿದಾಗಿನಿಂದ ಕೊಲೆ ಬೆದರಿಕೆ ಕರೆಗಳು, ಸಂದೇಶಗಳು ಬರುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ ತರಹೇವಾರಿ ಕಮೆಂಟ್​ಗಳು ಬರುತ್ತಿವೆ ಎಂದಿದ್ದಾರೆ.

'ವೈ' ಶ್ರೇಣಿಯ ಭದ್ರತೆ

ಇನ್ನು ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರಿಗೆ ಕೊಲೆ ಬೆದರಿಕೆ ಬರುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಇಲಾಖೆ ವತಿಯಿಂದ ಅವರಿಗೆ 'ವೈ' ಶ್ರೇಣಿಯ ಸಿಆರ್‌ಪಿಎಫ್ ಭದ್ರತೆಯನ್ನು ನೀಡಲಾಗಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಮನೆ ಬಿಟ್ಟು ಸಿನಿಮಾ ಸೆಟ್​ನಲ್ಲಿ ಸಮಂತಾ ವಾಸ!

ABOUT THE AUTHOR

...view details