ಕರ್ನಾಟಕ

karnataka

ಕೋವಿಡ್​ ನಿಧಿಗೆಂದು ಬಡ ಜನರ ಬಳಿ ಹಣಕ್ಕಾಗಿ ಭಿಕ್ಷೆ ಬೇಡಬೇಡಿ : ನಟಿ ಕಂಗನಾ ರಣಾವತ್

By

Published : May 21, 2021, 2:05 PM IST

ಆಸ್ಪತ್ರೆಯ ಹಾಸಿಗೆಗಳು ಮತ್ತು ಆಮ್ಲಜನಕದ ಕೊರತೆಯ ನಡುವೆ ಸಮಾಜದಲ್ಲಿ ಪ್ರಭಾವಶಾಲಿ ಇರುವವರು ಜೀವ ಉಳಿಸಲು ಪ್ರಯತ್ನಿಸಬೇಕು ಎಂದು ಕಂಗನಾ ರಣಾವತ್ ಮನವಿ ಮಾಡಿದರು..

Kangana takes dig at celebs for COVID-19 fundraisers
ನಟಿ ಕಂಗನಾ ರಣಾವತ್

ಕಂಗನಾ ರಣಾವತ್ ಇತ್ತೀಚೆಗೆ ಕೊರೊನಾ ವೈರಸ್‌ನಿಂದ ಚೇತರಿಸಿಕೊಂಡಿದ್ದಾರೆ. ಕೋವಿಡ್​ಗೆ ನೆಗಟಿವ್​ ಪರೀಕ್ಷೆ ನಡೆಸಿದ ಒಂದು ದಿನದ ನಂತರ, ನಟಿ ಕಂಗನಾ "ಸಾಂಕ್ರಾಮಿಕದಿಂದ ಕಲಿತ ಪಾಠಗಳನ್ನು" ತಮ್ಮ ಅಧಿಕೃತ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಅದರಲ್ಲಿ ಒಂದು ಕೋವಿಡ್ -19 ಪರಿಹಾರ ಕಾರ್ಯಗಳಿಗೆ ಕೊಡುಗೆ ನೀಡಲು ನಿಧಿಸಂಗ್ರಹವನ್ನು ಪ್ರಾರಂಭಿಸಿದ ಪ್ರಸಿದ್ಧ ವ್ಯಕ್ತಿಗಳ ಬಗ್ಗೆ ಪೋಸ್ಟ್​ ಮಾಡಿದ್ದಾರೆ. "ದಿನದ ಚಿಂತನೆಯು ಸಂಕೀರ್ಣವಾಗಬಹುದು ಅಥವಾ ಕೆಲವರಿಗೆ ವಿಕಸನಗೊಂಡಿರಬಹುದು.

ಸಾಂಕ್ರಾಮಿಕದಿಂದ ಕಲಿತ ಪಾಠಗಳು 1) ಪ್ರತಿಯೊಬ್ಬರೂ ಸಹಾಯ ಮಾಡಲಾರರು. ಆದರೆ, ಸಮಾಜದಲ್ಲಿ ನಿಮ್ಮ ಸ್ಥಾನ, ಪಾತ್ರ ಮತ್ತು ಪ್ರಭಾವವನ್ನು ಗುರುತಿಸುವುದು ಮುಖ್ಯ 2) ನೀವು ಶ್ರೀಮಂತರಾಗಿದ್ದರೆ ದೇಣಿಗೆಗಾಗಿ ಬಡ ಜನರ ಬಳಿ ಹಣಕ್ಕಾಗಿ ಭಿಕ್ಷೆ ಬೇಡಬೇಡಿ"

ಕೊರೊನಾ ನಿಧಿ ಸಂಗ್ರಹದ ಕುರಿತಂತೆ ನಟಿ ಕಂಗನಾ ರಣಾವತ್ ಹೇಳಿಕೆ..

ಆಸ್ಪತ್ರೆಯ ಹಾಸಿಗೆಗಳು ಮತ್ತು ಆಮ್ಲಜನಕದ ಕೊರತೆಯ ನಡುವೆ ಸಮಾಜದಲ್ಲಿ ಪ್ರಭಾವಶಾಲಿ ಇರುವವರು ಜೀವ ಉಳಿಸಲು ಪ್ರಯತ್ನಿಸಬೇಕು ಎಂದು ಕಂಗನಾ ರಣಾವತ್ ಮನವಿ ಮಾಡಿದರು.

ABOUT THE AUTHOR

...view details