ಕರ್ನಾಟಕ

karnataka

'ದಿ ಕಪಿಲ್ ಶರ್ಮಾ' ಶೋ ನಲ್ಲಿ ಆಘಾತಕಾರಿ ವಿಚಾರ ಬಹಿರಂಗ ಪಡಿಸಿದರಾ ಗಾಯಕ ದಲೇರ್ ಮೆಹಂದಿ?

By

Published : Mar 9, 2022, 1:25 PM IST

'ದಿ ಕಪಿಲ್ ಶರ್ಮಾ' ಶೋನ ಮುಂದಿನ ಸಂಚಿಕೆಯ ಪ್ರೋಮೋ ಹೊರ ಬಿದ್ದಿದ್ದು, ಸಂಗೀತ ಲೋಕದ ಮಾಸ್ಟರ್ಸ್​ ದಲೇರ್ ಮೆಹಂದಿ, ಸಲೀಂ ಮತ್ತು ರಿಚಾ ಶರ್ಮಾ ಈ ವಾರದ ಶೋನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Daler Mehndi at kapil sharma show
ಕಪಿಲ್ ಶರ್ಮಾ ಶೋನಲ್ಲಿ ದಲೇರ್ ಮೆಹಂದಿ

ಅತ್ಯಂತ ಪ್ರಸಿದ್ಧ ಮತ್ತು ಕಾಮಿಡಿ ಶೋ 'ದಿ ಕಪಿಲ್ ಶರ್ಮಾ' ಶೋ ಕಳೆದ ಒಂಬತ್ತು ವರ್ಷಗಳಿಂದ ಪ್ರೇಕ್ಷಕರನ್ನು ನಗಿಸುತ್ತಾ ಬಂದಿದೆ. ಈ ಕಾರ್ಯಕ್ರಮದ ಸ್ವರೂಪವು ಎಷ್ಟು ಅದ್ಭುತವಾಗಿದೆ ಎಂದರೆ ಚಿತ್ರರಂಗದ ಖ್ಯಾತ ಕಲಾವಿದರು ಸಹ ಬರಲು ಸಿದ್ಧರಾಗಿದ್ದಾರೆ. ಹೊಸ ಸಂಚಿಕೆಗಳಿಗೆ ಅಭಿಮಾನಿಗಳು ಕಾದು ಕುಳಿತಿರುತ್ತಾರೆ.

ಇದೀಗ ಕಾರ್ಯಕ್ರಮದ ಮುಂದಿನ ಸಂಚಿಕೆಯ ಪ್ರೋಮೋ ಹೊರಬಿದ್ದಿದ್ದು, ಸಂಗೀತ ಲೋಕದ ಮಾಸ್ಟರ್ಸ್​ ದಲೇರ್ ಮೆಹಂದಿ, ಸಲೀಂ ಮತ್ತು ರಿಚಾ ಶರ್ಮಾ ಈ ವಾರದ ಶೋನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪ್ರೋಮೋ ಗಮನಿಸಿದರೆ, ಈ ಶೋನಲ್ಲಿ ಪ್ರೇಕ್ಷಕರು ನಗುವಿನ ಅಲೆಯಲ್ಲಿ ತೇಲೋದರಲ್ಲಿ ಡೌಟೇ ಇಲ್ಲ ಎನಿಸುತ್ತಿದೆ. ಗಾಯಕ ದಲೇರ್ ಮೆಹಂದಿ ಆಘಾತಕಾರಿ ವಿಚಾರವೊಂದನ್ನು ಬಹಿರಂಗಪಡಿಸಿದ್ದಾರೆ.

ಇದನ್ನೂ ಓದಿ:ಹೊಸ ಚಿತ್ರದಲ್ಲಿ ರಣಬೀರ್ ಕಪೂರ್ - ಶ್ರದ್ಧಾ ಕಪೂರ್ ಬ್ಯೂಸಿ

ಕಪಿಲ್ ಶರ್ಮಾ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸುತ್ತಾ, ಹರಿದ್ವಾರದಲ್ಲಿ ಒಂದು ಕಾರ್ಯಕ್ರಮ ಕೊಡುತ್ತಿದ್ದೆವು. ಒಬ್ಬ ವ್ಯಕ್ತಿ ಬಂದು ಜತ್​ ಯಮ್ಲಾ ಪಗ್ಲಾ ದಿವಾನಾ ಹಾಡನ್ನು ಹಾಡುವಂತೆ ಕೇಳಿಕೊಂಡನು. ನಾನು ಅವನತ್ತ ಗಮನ ಹರಿಸಲಿಲ್ಲ. ನಂತರ ಅವನು ತನ್ನ ರಿವಾಲ್ವರ್ ಅನ್ನು ತೆಗೆದುಗುಂಡು ಹಾರಿಸಿದನು. ನಾನು ತಕ್ಷಣ ಆ ಹಾಡು ಹಾಡಲು ಪ್ರಾರಂಭಿಸಿದೆ ಎಂಬ ವಿಚಾರವನ್ನು ಬಹಿರಂಗಪಡಿಸಿದರು.

ABOUT THE AUTHOR

...view details