ಕರ್ನಾಟಕ

karnataka

ETV Bharat / sitara

ಶ್ರೀದೇವಿ ಸಾವಿನ ಊಹಾಪೋಹಗಳಿಗೆ ಪತಿ ಬೋನಿ ಕಪೂರ್ ಪ್ರತಿಕ್ರಿಯೆ​​​​

ಶ್ರೀದೇವಿ ಇಂದು ನಮ್ಮೊಂದಿಗೆ ಇಲ್ಲವಾದರೂ ಅವರನ್ನು ಮರೆಯಲು ಯಾರಿಂದಲೂ ಸಾಧ್ಯವಿಲ್ಲ. ಬಾಲನಟಿಯಾಗಿ ಸಿನಿಮಾದಲ್ಲಿ ಕರಿಯರ್ ಆರಂಭಿಸಿ ಬಾಲಿವುಡ್​​​​​​​​ ಮಾತ್ರವಲ್ಲ ಕಾಲಿವುಡ್, ಮಾಲಿವುಡ್, ಟಾಲಿವುಡ್​​ ಸಿನಿಮಾ ಇಂಡಸ್ಟ್ರಿಯಲ್ಲಿ ಮೇರು ನಟಿಯಾಗಿ ಮೆರೆದವರು ಆಕೆ.

By

Published : Jul 14, 2019, 12:45 PM IST

ಶ್ರೀದೇವಿ, ಬೋನಿ ಕಪೂರ್​​​​

2018 ಫೆಬ್ರವರಿ 24 ಸಿನಿಪ್ರಿಯರ ಪಾಲಿಗೆ ಕರಾಳ ದಿನ. ಅದ್ರು ಮೋಹಕ ತಾರೆ ಶ್ರೀದೇವಿ ನಿಧನದ ವಾರ್ತೆ ಎಲ್ಲರಿಗೂ ಆಘಾತ ನೀಡಿತ್ತು. ಸಂಬಂಧಿಯೊಬ್ಬರ ಮದುವೆ ಕಾರ್ಯಕ್ರಮಕ್ಕೆಂದು ದುಬೈಗೆ ತೆರಳಿದ್ದ ಶ್ರೀದೇವಿ ಅಲ್ಲಿನ ಹೋಟೆಲೊಂದರಲ್ಲಿ ಹೃದಯಾಘಾತದಿಂದ ಮೃತಪಟ್ಟರು. ಈ ಘಟನೆ ನಡೆದ ಒಂದು ವರ್ಷದ ನಂತರ ಕೇರಳ ಡಿಜಿಪಿಯೊಬ್ಬರು ಶ್ರೀದೇವಿ ಸಾವು ಅನುಮಾನಕ್ಕೆ ಎಡೆಮಾಡಿಕೊಡುತ್ತಿದೆ. ಅಲ್ಲದೆ ವಿಧಿವಿಜ್ಞಾನ ತಜ್ಞ ಡಾ. ಉಮಾದಾತನ್ ಕೂಡಾ ಕೆಲವೊಂದು ಪುರಾವೆಗಳನ್ನು ನೋಡಿದರೆ, ಶ್ರೀದೇವಿಯದ್ದು ನೈಸರ್ಗಿಕ ಸಾವಲ್ಲ, ಕೊಲೆಯಾಗಿರುವ ಸಾಧ್ಯತೆ ಇದೆ ಎಂದು ಹೇಳಿರುವುದಾಗಿ ಅಂಕಣವೊಂದರಲ್ಲಿ ಬರೆದಿದ್ದರು.

ಶ್ರೀದೇವಿ, ಬೋನಿ ಕಪೂರ್​​​​

ಇದೀಗ ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಶ್ರೀದೇವಿ ಪತಿ ಬೋನಿಕಪೂರ್​, ಇಂತಹ ಕೆಲಸಕ್ಕೆ ಬಾರದ ಸುಳ್ಳುಗಳಿಗೆ ಪ್ರತಿಕ್ರಿಯಿಸುವ ಅವಶ್ಯಕತೆಯಿಲ್ಲ. ಇಂತಹ ಅವಿವೇಕತನದ ಮಾತುಗಳನ್ನು ಜನರು ಆಗಾಗ್ಗೆ ಮಾತನಾಡುತ್ತಿರುತ್ತಾರೆ. ಆದ್ದರಿಂದ ಇದರ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಇಲ್ಲಸಲ್ಲದನ್ನು ಕಲ್ಪಿಸಿಕೊಂಡು ಜನರು ಇಂತದ್ದನ್ನೆಲ್ಲಾ ಮಾತನಾಡುತ್ತಾರೆ ಎಂದು ಪ್ರತಿಕ್ರಿಯಿಸಿದ್ದಾರೆ. ಸದ್ಯಕ್ಕೆ ಬೋನಿಕಪೂರ್ ಅಜಿತ್ ಕುಮಾರ್ ನಟನೆಗೆ 'ನೇರ್ಕೊಂಡ ಪಾರ್ವೈ' ಸಿನಿಮಾವನ್ನು ನಿರ್ಮಿಸುತ್ತಿದ್ದು ಸಿನಿಮಾ ಆಗಸ್ಟ್​ 10 ರಂದು ಬಿಡುಗಡೆಯಾಗುತ್ತಿದೆ.

ಶ್ರೀದೇವಿ

For All Latest Updates

TAGGED:

ABOUT THE AUTHOR

...view details