ಕರ್ನಾಟಕ

karnataka

ETV Bharat / sitara

ಅದೃಷ್ಟದ ವಿಶ್ವಕಪ್​ ಗೆಲುವು: ದೃಷ್ಟಾಂತ ಮೂಲಕ ಐಸಿಸಿ ನಿಯಮ ಟೀಕಿಸಿದ 'ಬಿಗ್ ಬಿ'

ಇಂಗ್ಲೆಂಡ್ ತಂಡದ ವಿಶ್ವಕಪ್ ಗೆಲುವಿಗೆ ಕಾರಣವಾದ 'ಬೌಂಡರಿ ಕೌಂಟ್'​ ನಿಯಮದ ವಿರುದ್ಧ ಪರ-ವಿರೋಧ ಚರ್ಚೆ ಶುರುವಾಗಿದೆ. ಸದ್ಯ ಬಾಲಿವುಡ್ ಹಿರಿಯ ನಟ ಅಮಿತಾಭ್ ಬಚ್ಚನ್​ ಐಸಿಸಿಯ ಈ ನಿಯಮವನ್ನು ಟ್ರೋಲ್ ಮಾಡಿದ್ದಾರೆ.

By

Published : Jul 16, 2019, 11:00 PM IST

ಚಿತ್ರಕೃಪೆ: ಟ್ವಿಟರ್​

ಇದೇ 14 ರಂದು ಲಂಡನ್​​ನಲ್ಲಿ ನಡೆದ 50 ಓವರ್​​​ಗಳ ಹಾಗೂ ನಂತರದ ಸೂಪರ್​ ಓವರ್​ ಪಂದ್ಯ ಟೈ ಆಗಿತ್ತು. ಈ ವೇಳೆ 'ಬೌಂಡರಿ ಕೌಂಟ್​' ನಿಯಮದ ಅಡಿ ಅತೀ ಹೆಚ್ಚು ಬೌಂಡರಿ ಬಾರಿಸಿದ ಇಂಗ್ಲೆಂಡ್​​ ತಂಡಕ್ಕೆ ವಿಶ್ವ​ಕಪ್​ ಚಾಂಪಿಯನ್​ ಪಟ್ಟ ಒಲಿಯಿತು. ಆಂಗ್ಲರ್​ ವಿರುದ್ಧ ಪ್ರಬಲ ಸ್ಪರ್ಧೆಯೊಡ್ಡಿದ ನ್ಯೂಜಿಲ್ಯಾಂಡ್​ ತಾನು ಮಾಡದ ತಪ್ಪಿಗೆ ಚೊಚ್ಚಲ ವಿಶ್ವಕಪ್​​ನಿಂದ ವಂಚಿತವಾಯಿತು.

ಸದ್ಯ ಇಂಗ್ಲೆಂಡ್ ತಂಡದ ಈ ಗೆಲುವು ಕ್ರಿಕೆಟ್ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗುತ್ತಿದೆ. ಅವರ ಈ ವಿಜಯ ಎಷ್ಟು ಸರಿ ಎನ್ನುವ ಪ್ರಶ್ನೆಗಳು ಕೇಳಿ ಬರುತ್ತಿವೆ. ಇದೀಗ ಬಾಲಿವುಡ್ ಬಿಗ್​ ಬಿ ಕೂಡ ಐಸಿಸಿ ನಡೆ ಪ್ರಶ್ನಿಸಿದ್ದಾರೆ. ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಈ ವಿಚಾರ ಪ್ರಸ್ತಾಪಿಸಿರುವ ಅವರು, ಒಂದು ಉಲ್ಲಾಸಭರಿತ ದೃಷ್ಟಾಂತದ ಮೂಲಕ ಐಸಿಸಿ ನಿಯಮಕ್ಕೆ ಅಣಕವಾಡಿದ್ದಾರೆ. 'ನನ್ನ ಹಾಗೂ ನಿಮ್ಮ ಬಳಿ ತಲಾ ₹ 2000 ಇದೆ. ನಮ್ಮಿಬ್ಬರಲ್ಲಿ ಶ್ರೀಮಂತ ಯಾರು? ಎಂದು ಪ್ರಶ್ನಿಸಿ, ನಿಮ್ಮ ಬಳಿ ₹ 500 ಮೌಲ್ಯದ 4 ನೋಟು, ನನ್ನ ಬಳಿ ₹ 2000 ಮೌಲ್ಯದ 1 ನೋಟಿದೆ. ಐಸಿಸಿ ನಿಮಯದ ಪ್ರಕಾರ ನೀವೇ ಶ್ರೀಮಂತ ಎಂದಾಯಿತಲ್ಲವೇ ಎಂದು ಬಿಗ್​ಬಿ ಕಾಲೆಳೆದಿದ್ದಾರೆ.

ABOUT THE AUTHOR

...view details