ಮುಂಬೈ :ಕೊರೊನಾ ಆರ್ಭಟದಿಂದಾಗಿ ಬಹುತೇಕ ಎಲ್ಲಾ ಚಿತ್ರರಂಗಗಳೂ ಬಂದ್ ಆಗಿದ್ದು, ಕಲಾವಿದರು ಸೇರಿದಂತೆ ತಾಂತ್ರಿಕ ವರ್ಗ ಕೆಲಸವಿಲ್ಲದೆ ಕುಳಿತಿದೆ. ಕೋವಿಡ್ನಿಂದಾಗಿ ತೀವ್ರ ಸಂಕಷ್ಟಕ್ಕೆ ಚಿತ್ರೋದ್ಯಮ ತಲುಪಿದೆ.
ಈ ನಡುವೆ ಸಿನಿಮಾ ನಿರ್ಮಾಪಕ ಆದಿತ್ಯಾ ಚೋಪ್ರಾ ಸಿನಿಮಾ ರಂಗದಲ್ಲಿ ಕೆಲಸ ಮಾಡುವ ದಿನಗೂಲಿ ನೌಕರರಿಗೆ ಆರ್ಥಿಕ ನೆರವು ನೀಡಲು ಮುಂದಾಗಿದ್ದಾರೆ.
ಇದಕ್ಕಾಗಿ ‘ಯಶ್ ಚೋಪ್ರಾ ಸಾಥಿ’ ಎಂಬ ಅಭಿಯಾನ ಆರಂಭಿಸಿದ್ದು, ನೌಕರರ ನೆರವಿಗೆ ಬಂದಿದ್ದಾರೆ. ಯಶ್ ಚೋಪ್ರಾ ಫೌಂಡೇಶನ್ ಚಲನಚಿತ್ರೋದ್ಯಮದಲ್ಲಿ ಕಾರ್ಯ ನಿರ್ವಹಿಸುವ ಮಹಿಳೆಯರು ಮತ್ತು ಹಿರಿಯ ನಾಗರಿಕರಿಗೆ 5,000 ರೂ. ಜೊತೆಗೆ 4 ಜನರಿರುವ ಕುಟುಂಬದ ಕಾರ್ಮಿಕರಿಗೆ ಪಡಿತರ ಕಿಟ್ಗಳನ್ನು ತಮ್ಮ ಎನ್ಜಿಒ ಪಾಲುದಾರರಾದ ಯೂತ್ ಫೀಡ್ ಇಂಡಿಯಾ ಮೂಲಕ ಇಡೀ ತಿಂಗಳು ವಿತರಿಸಲಿದೆ.