ನವದೆಹಲಿ:ಹವಾಮಾನ ಬದಲಾವಣೆ ತಗ್ಗಿಸುವ ಕುರಿತು ಚರ್ಚಿಸಲು ಇಂದಿನಿಂದ (ನವೆಂಬರ್ 30 ರಿಂದ 12 ಡಿಸೆಂಬರ್) ದುಬೈನಲ್ಲಿ ಕಾಪ್-28 ಸಮ್ಮೇಳನ ಆರಂಭವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಸೇರಿದಂತೆ ವಿಶ್ವ ನಾಯಕರು ಈ ಸಮಾವೇಶದಲ್ಲಿ ವರ್ಚುಯಲ್ ಆಗಿ ಪಾಲ್ಗೊಳ್ಳಲಿದ್ದಾರೆ. ಎಲ್ಲ ದೇಶಗಳ ನಿಯೋಗಗಳು ಅಲ್ಲಿ ಹಾಜರಿರಲಿವೆ. ಜೀವನದ ಸುಸ್ಥಿರತೆಗೆ ಭೂಮಿಯ ಹೊರಪದರವು ಹೇಗೆ 'ನಿರ್ಣಾಯಕ ಪಾತ್ರ'ವನ್ನು ವಹಿಸುತ್ತದೆ ಎಂಬುದರ ಪ್ರಮುಖ ಚರ್ಚೆ ನಡೆಯಲಿದೆ.
ಪರಿಸರ ರಕ್ಷಣೆಗೆ ಅಗತ್ಯವಾಗಿರುವ ಓಝೋನ್ ಪದರವು ವಿವಿಧ ಮಾಲನ್ಯದಿಂದಾಗಿ ಹಾನಿಯುಂಟಾಗುತ್ತಿದ್ದು, ಅದರ ರಕ್ಷಣೆ ಬಗ್ಗೆಯೂ ಚರ್ಚೆ ನಡೆಯಲಿದೆ. ಹೊರಪದರ ಮತ್ತು ಬಾಷ್ಪಶೀಲ ವಸ್ತುಗಳ ಮರುಬಳಕೆಯಂತಹ ಪ್ರಕ್ರಿಯೆಗಳ ಮೂಲಕ ಮನುಷ್ಯ ಸೇರಿದಂತೆ ಪ್ರಾಣಿಗಳ ವಾಸಯೋಗ್ಯವಾದ ಭೂಮಿಯನ್ನು ರೂಪಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಬೇಕಿದೆ. ಹೊರಪದರವು ಭೂಮಿಯನ್ನು ಶೆಲ್ನಂತೆ ಕಾಪಾಡುತ್ತದೆ. ಇದನ್ನು ಹಲವಾರು ಟೆಕ್ಟೋನಿಕ್ ಪ್ಲೇಟ್ಗಳಾಗಿ ವಿಂಗಡಿಸಲಾಗಿದೆ. ಅದರ ಕೆಳಗಿರುವ ಅರೆ ದ್ರವ ಅಸ್ತೇನೋಸ್ಪಿಯರ್ನಲ್ಲಿ ತೇಲುತ್ತದೆ.
ಜ್ವಾಲಾಮುಖಿಯಿಂದಲೂ ಪರಿಸರಕ್ಕೆ ಹಾನಿ:ಭೂಮಿಯ ಹೊರಪದರವು ಕ್ರಿಯಾತ್ಮಕವಾಗಿದೆ. ಟೆಕ್ಟೋನಿಕ್ ಫಲಕಗಳು ಚಲನಶೀಲವಾಗಿವೆ. ಈ ಚಲನೆಯು ಜ್ವಾಲಾಮುಖಿಗಳಿಗೆ ಕಾರಣವಾಗುತ್ತವೆ. ಭೂಮಿಯ ಒಳಭಾಗದಿಂದ ಕರಗಿದ ಕಲ್ಲು ಅಥವಾ ಶಿಲಾಪಾಕವು ಜ್ವಾಲಾಮುಖಿ ಸ್ಫೋಟಗಳ ಮೂಲಕ ಮೇಲ್ಮೈಯನ್ನು ತಲುಪುತ್ತವೆ. ಸ್ಫೋಟದಿಂದಾಗಿ ನೀರಿನ ಆವಿ, ಇಂಗಾಲದ ಡೈಆಕ್ಸೈಡ್, ಸಾರಜನಕ ಮತ್ತು ಸಲ್ಫರ್ ಸಂಯುಕ್ತಗಳಂತಹ ಅನಿಲಗಳು ಮತ್ತು ಬಾಷ್ಪಶೀಲ ವಸ್ತುಗಳು ವಾತಾವರಣಕ್ಕೆ ಬಿಡುಗಡೆಯಾಗುತ್ತವೆ. ಇವೆಲ್ಲವೂ ಭೂಮಿಗೆ ಹಾನಿಕಾರಕವಾಗಿವೆ.
ಜ್ವಾಲಾಮುಖಿಗಳ ಆರಂಭಿಕ ಸ್ಥಿತಿಯಲ್ಲಿ ಉಂಟಾಗುವ ಬಿಸಿಯಿಂದ ಅನಿಲ ವಿಸರ್ಜನೆಯಾಗುತ್ತದೆ. ಮುಖ್ಯವಾಗಿ ಹೈಡ್ರೋಜನ್ ಸಲ್ಫೈಡ್, ಮೀಥೇನ್, ಕಾರ್ಬನ್ ಡೈಆಕ್ಸೈಡ್, ಹೀಲಿಯಂ, ಆರ್ಗಾನ್, ನಿಯಾನ್, ಕ್ಸೆನಾನ್ ಮತ್ತು ಕ್ರಿಪ್ಟಾನ್ನಂತಹ ಜಡ ಅನಿಲಗಳು ವಾತಾವರಣದಲ್ಲಿ ಸಂಗ್ರಹಗೊಳ್ಳುತ್ತವೆ ಎಂದು ರಾಷ್ಟ್ರೀಯ ಭೂಭೌತ ಸಂಶೋಧನಾ ಸಂಸ್ಥೆಯ ಹಿರಿಯ ಪ್ರಧಾನ ವಿಜ್ಞಾನಿ ಬಿ ಶ್ರೀನಿವಾಸ್ ಈಟಿವಿ ಭಾರತ್ಗೆ ಮಾಹಿತಿ ನೀಡಿದರು.