ಹೈದರಾಬಾದ್: ಪ್ರಣಯವನ್ನು ನಾವು ರಹಸ್ಯವಾಗಿ ನೋಡಿ ಮರೆಮಾಚುತ್ತಿದ್ದೇವೆ. ಚಿಕ್ಕಂದಿನಿಂದಲೂ ನಾವು ಶೃಂಗಾರದ ಬಗ್ಗೆ ಅಸಂಬದ್ಧವಾಗಿ ಮಾತನಾಡುತ್ತಿದ್ದೇವೆ. ಹರೆಯದಲ್ಲಿ ನಮಗೆ ಸೆಕ್ಸ್ ಬಗ್ಗೆ ಸಿಗಬೇಕಾದ ಮಾಹಿತಿ ಸಿಗುತ್ತಿಲ್ಲ. ಮದುವೆ ಬಳಿಕ ಕಣ್ಣಾಮುಚ್ಚಾಲೆ ಆಡುತ್ತಿದ್ದೇವೆ. ಚಿಕ್ಕ ವಯಸ್ಸಿನಲ್ಲೂ ಇದೇ ರೀತಿಯ ಆಸಕ್ತಿಯನ್ನು ತೋರಿಸಿ ಪ್ರತಿ ಹಂತದಲ್ಲೂ ನಮ್ಮ ಪ್ರವೃತ್ತಿ ಅವೈಜ್ಞಾನಿಕವಾಗಿಯೇ ಮುಂದುವರೆದಿದೆ ಎಂದು ಲೈಂಗಿಕ ಮೆಡಿಸಿನ್ ಸ್ಪೆಷಲಿಸ್ಟ್ ಸುಧಾಕರ್ ಕೃಷ್ಣಮೂರ್ತಿ ಹೇಳಿದ್ದಾರೆ.
ವೈಜ್ಞಾನಿಕ ತಿಳಿವಳಿಕೆಯೊಂದಿಗೆ ಇದಕ್ಕೆ ಸರಿಯಾದ ಉತ್ತರ ಎಂದರೆ ಒಳ್ಳೆ ಲೈಂಗಿಕ ಜೀವನವನ್ನು ಜವಾಬ್ದಾರಿಯುತವಾಗಿ ಆನಂದಿಸುವುದು. ಇದರ ಬಗ್ಗೆ ತಜ್ಞರು ಈಟಿವಿ ಭಾರತ್ದೊಂದಿಗೆ ಹಲವು ಮಾಹಿತಿಗಳನ್ನು ವಿವರಿಸಿದ್ದಾರೆ.
ನಮ್ಮಲ್ಲಿ ಹೆಚ್ಚಿನವರು ಮೂಳೆಗಳು ಮುರಿದಾಗ ಮಾತ್ರ ಅವರು ಮುರಿದ ಜಾಗದ ಬಗ್ಗೆ ಕಾಳಜಿ ವಹಿಸುತ್ತಾರೆ. ಪ್ರಣಯದ ವಿಚಾರದಲ್ಲಿ ಪರಿಸ್ಥಿತಿಯೇ ಬೇರೆ. ಅನೇಕ ಜನರು ನಿತ್ಯ ಹಲವು ಬಾರಿ ಅದರ ಬಗ್ಗೆ ಯೋಚಿಸುತ್ತಲೇ ಇರುತ್ತಾರೆ. ತನ್ನ ಸಂಗಾತಿಯೊಂದಿಗೆ ತನ್ನ ದೈಹಿಕ ಸಂಬಂಧವು ಉತ್ತಮವಾಗಿದೆಯೇ? ಆಕೆಗೆ ತೃಪ್ತಿ ಆಗುತ್ತಿದೀಯಾ? ಅಥವಾ ಹಳಿ ತಪ್ಪಿದಿಯಾ ಎಂಬುದರ ಬಗ್ಗೆ ಆಲೋಚನೆ ಮಾಡುತ್ತಾರೆ.
ನಮ್ಮ ಜೀವನದಲ್ಲಿ ಲೈಂಗಿಕತೆಯ ಮಹತ್ವವು ಅಂತ್ಯವಿಲ್ಲ. ಆದರೆ, ದುರದೃಷ್ಟವಶಾತ್ ನಮ್ಮ ಸಮಾಜದಲ್ಲಿ ಲೈಂಗಿಕ ಆರೋಗ್ಯಕ್ಕೆ ನೀಡಬೇಕಾದ ಗೌರವವನ್ನು ನೀಡಲಾಗುತ್ತಿಲ್ಲ. ಹೀಗಾಗಿ ಅದು ಕೆಲವರಿಗೆ ಸರಿಯಾಗಿ ಸಿಗುತ್ತಿಲ್ಲ.
'ಸೆಕ್ಸ್ನಿಂದ ಹೆಚ್ಚಿನ ಆನಂದ ಸಿಗುತ್ತಿಲ್ಲ':
ನಮ್ಮ ಸಂಸ್ಕೃತಿಯಲ್ಲಿ ಲೈಂಗಿಕತೆಯ ವಿವಿಧ ಸಂಘರ್ಷದ ಕಲ್ಪನೆಗಳು ಆಳ್ವಿಕೆ ನಡೆಸುತ್ತವೆ. ಪ್ರತಿಯೊಬ್ಬರೂ ಲೈಂಗಿಕತೆಯ ಬಗ್ಗೆ ಆಸಕ್ತಿ ಹೊಂದಿರುತ್ತಾರೆ. ಪ್ರತಿಯೊಬ್ಬರೂ ಲೈಂಗಿಕತೆಯ ಬಗ್ಗೆ ಉತ್ಸುಕರಾಗಿದ್ದಾರೆ. ಆದರೆ, ರೊಮ್ಯಾನ್ಸ್ ಬಗ್ಗೆ ಜೋರಾಗಿ ಮಾತನಾಡಲು ಬಂದಾಗ ಎಲ್ಲರೂ ಛೀ ಛೀ ಎನ್ನುತ್ತಾರೆ. ಹೀಗೆ ಸಿಟ್ಟಾದವರು, ಮುಖ ಗಂಟಿಕ್ಕಿಕೊಂಡವರು, ಹೀಗೆ ವ್ಯತಿರಿಕ್ತ ಭಾವನೆಗಳಲ್ಲಿ ಸುಳಿದಾಡುತ್ತಿದ್ದವರು.