ಕರ್ನಾಟಕ

karnataka

ETV Bharat / jagte-raho

ಜೊತೆಗಿದ್ದ ಫ್ರೆಂಡ್​ ದಿಢೀರ್​​ ದೂರವಾಗಿದ್ದಕ್ಕೆ ಯುವತಿ ಆತ್ಮಹತ್ಯೆ... ಇದು ಸ್ನೇಹನಾ, ಪ್ರೀತಿನಾ?!

ಪ್ರಾಣ ಸ್ನೇಹಿತೆ ತನ್ನಿಂದ ದೂರವಾಗಿದ್ದಾಳೆ ಎಂದು ಯುವತಿವೋರ್ವಳು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಆ ಯುವತಿಯರಿಬ್ಬರ ನಡುವೆ ಕೇವಲ 5 ತಿಂಗಳ ಅವಧಿಯಲ್ಲಿ ಬೆಳೆದಿದ್ದ ಸ್ನೇಹ, ಆತ್ಮಿಯತೆ ಕೊನೆಗೆ ಓರ್ವಳ ಸಾವಿನಲ್ಲಿ ಅಂತ್ಯವಾಗಿದೆ. ಈ ಅನುಮಾನಾಸ್ಪದ ಪ್ರಕರಣ ಹೈದರಾಬಾದ್​ನಲ್ಲಿ ನಡೆದಿದೆ.

By

Published : May 20, 2019, 5:50 PM IST

Updated : May 20, 2019, 6:09 PM IST

ಆತ್ಮಹತ್ಯೆ

ಹೈದರಾಬಾದ್​: ಪ್ರೀತಿಯ ಸ್ನೇಹಿತೆ ತನ್ನಿಂದ ದೂರವಾಗಿದ್ದಾಳೆಂಬ ಕೊರಗಿನಿಂದ ಯುವತಿವೋರ್ವಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತೆಲಂಗಾಣ ರಾಜ್ಯದಲ್ಲಿ ನಡೆದಿದೆ.

ಸಿರಿಸಿಲ್ಲ ಗ್ರಾಮದ ನಮ್ರತಾ ಮತ್ತು ಹೈದರಾಬಾದ್​ನ ಫಿಲ್ಮ್​ನಗರ್​ನ ಶ್ರೀದೇವಿ ಇಬ್ಬರು ಸ್ನೇಹಿತರು. ಇವರು ಹಿಮಾಯತ್​ನಗರದ ರುಷಿ ಕಾಲೇಜ್​ನಲ್ಲಿ ದೂರಶಿಕ್ಷಣ ಮೂಲಕ ಪದವಿ ವ್ಯಾಸಂಗ ಮಾಡುತ್ತಿದ್ದರು. ಶ್ರೀದೇವಿ ಹೈದರಾಬಾದ್​ ಮೂಲದವಳಾಗಿದ್ದರಿಂದ ಉದ್ಯೋಗಸ್ಥೆಯಾಗಿದ್ದಳು. ಆದ್ರೆ ಮನೆಯಿಂದ ದೂರವಿರುತ್ತಿದ್ದಳು. ನಮ್ರತಾ ಮತ್ತು ಶ್ರೀದೇವಿ ಒಂದೇ ಹಾಸ್ಟೆಲ್​ನಲ್ಲಿ ಇದ್ದುದರಿಂದ ಇಬ್ಬರ ಮಧ್ಯೆ ಸ್ನೇಹ ಬೆಳೆದಿತ್ತು. ಐದು ತಿಂಗಳ ಬಳಿಕ ನಮ್ರತಾ ಹಾಸ್ಟೆಲ್​ ಬಿಟ್ಟು ಮನೆಗೆ ಹಿಂದಿರುಗಿದ್ದಳು.

ಶನಿವಾರ ಸೈಂಟ್​ ಪೌಲ್ಸ್​ ಶಾಲೆಗೆ ಪರೀಕ್ಷೆ ಬರೆಯಲು ನಮ್ರತಾ ಬಂದಿದ್ದಳು. ಈ ವಿಷಯ ತಿಳಿದ ಶ್ರೀದೇವಿ ನೇರ ಆ ಶಾಲೆಗೆ ತೆರಳಿದ್ದು, ತನ್ನನ್ನು ಬಿಟ್ಟು ಹೋಗ್ತೀಯಾ ಅಂತಾ ನಮ್ರತಾ ಜೊತೆ ಶ್ರೀದೇವಿ ಜಗಳವಾಡಿದ್ದಳಂತೆ. ಈ ಕುರಿತು ನಮ್ರತಾ ನಾರಾಯಣಗುಡ ಪೊಲೀಸ್​ ಠಾಣೆಗೆ ದೂರು ಸಲ್ಲಿಸಿದ್ದರಿಂದ ಪೊಲೀಸರು ಶ್ರೀದೇವಿಗೆ ಬುದ್ಧಿಮಾತು ಹೇಳಿ ಮನೆಗೆ ಕಳುಹಿಸಿದ್ದರು. ಬಳಿಕ ನಮ್ರತಾ ತನ್ನ ಗ್ರಾಮಕ್ಕೆ ಹಿಂದಿರುಗಿದ್ದಳು.

ಯುವತಿ ಆತ್ಮಹತ್ಯೆ

ಶ್ರೀದೇವಿ ತನ್ನ ಸ್ನೇಹಿತರ ಜೊತೆ ಸೇರಿ ಪಾರ್ಕ್​ಗೆ ಹೋಗಿದ್ದಳು. ಅಲ್ಲಿ ಸ್ನೇಹಿತರ ಕಣ್ತಪ್ಪಿಸಿ ರಾಸಾಯನಿಕ ದ್ರವವನ್ನು ಸೇವಿಸಿ ಮೂರ್ಛೆ ಹೋಗಿದ್ದಳು. ಕೂಡಲೇ ಆಕೆಯನ್ನು ಸ್ನೇಹಿತೆಯರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ಪೋಷಕರು ಆಕೆಯನ್ನು ಜೂಬ್ಲಿ ಹಿಲ್ಸ್​ನಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದ್ರೆ ಚಿಕಿತ್ಸೆ ಫಲಿಸದೆ ಶ್ರೀದೇವಿ ಮೃತಪಟ್ಟಿದ್ದಾಳೆ. ಈ ಆತ್ಮಹತ್ಯೆಗೆ ಇವರ ಮಧ್ಯೆ ಇದ್ದ ಪ್ರೀತಿಯೇ ಕಾರಣವಾಯ್ತೆ ಎಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದು, ತನಿಖೆ ಮುಂದುವರಿಸಿದ್ದಾರೆ.

Last Updated : May 20, 2019, 6:09 PM IST

ABOUT THE AUTHOR

...view details