ಕರ್ನಾಟಕ

karnataka

ETV Bharat / jagte-raho

ಬಾಕಿ ಹಣ ಕಟ್ಟದಿದ್ದಕ್ಕೆ ಟ್ರಕ್​ ಮಾಲೀಕನನ್ನು ಜೀವಂತವಾಗಿ ಸುಟ್ಟ ಪಾಪಿಗಳು - ಜೌನ್‌ಪುರ

ಬಾಕಿ ಹಣ ಪಾವತಿಸದ ಕಾರಣಕ್ಕೆ ಟ್ರಕ್​ ಮಾಲೀಕನಿಗೆ ಫೈನಾನ್ಶಿಯರ್​ನ ಏಜೆಂಟರ್​ಗಳು ಬೆಂಕಿ ಹಚ್ಚಿದ್ದು, ಸಂತ್ರಸ್ತನ ಪರಿಸ್ಥಿತಿ ಚಿಂತಾಜನಕವಾಗಿದೆ.

Truck owner set ablaze in UP for not paying dues
ಟ್ರಕ್​ ಮಾಲೀಕನನ್ನು ಜೀವಂತವಾಗಿ ಸುಟ್ಟ ಪಾಪಿಗಳು

By

Published : Sep 17, 2020, 6:03 PM IST

ಉತ್ತರ ಪ್ರದೇಶ: ಫೈನಾನ್ಶಿಯರ್‌ಗೆ ಬಾಕಿ ಹಣ ಪಾವತಿಸದ ಕಾರಣಕ್ಕೆ ಬೆಂಕಿ ಹಚ್ಚಿ ಟ್ರಕ್​ ಮಾಲೀಕನನ್ನು ಜೀವಂತವಾಗಿ ಸುಟ್ಟಿರುವ ಘಟನೆ ಉತ್ತರ ಪ್ರದೇಶದ ಜೌನ್‌ಪುರ ಜಿಲ್ಲೆಯಲ್ಲಿ ನಡೆದಿದೆ. ಗಂಭೀರವಾಗಿ ಗಾಯಗೊಂಡ ಸತ್ಯ ಪ್ರಕಾಶ್​ ರೈ (51)ರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಕಾಂಕ್ರೀಟ್ ಲೋಡ್ ಮಾಡಿ ಟ್ರಕ್‌ನಲ್ಲಿ ಮಧ್ಯಪ್ರದೇಶದಿಂದ ಹಿಂದಿರುಗುವ ವೇಳೆ ಬದ್ಲಾಪುರ ಬಳಿ ಕಾರಿನಲ್ಲಿ ಬಂದ ಕೆಲವರು ಟ್ರಕ್​ ಅನ್ನು ಅಡ್ಡಗಟ್ಟಿದ್ದಾರೆ. ಫೈನಾನ್ಶಿಯರ್​ನ ಏಜೆಂಟರ್​ಗಳೆಂದು ಹೇಳಿ, ಕಳೆದ ಐದು ತಿಂಗಳುಗಳಿಂದ ಟ್ರಕ್ ಖರೀದಿಸಲು ಸತ್ಯ ಪ್ರಕಾಶ್​ ರೈ ತೆಗೆದುಕೊಂಡ ಸಾಲದ ಮಾಸಿಕ ಕಂತು ಪಾವತಿಸದಿರಲು ಕಾರಣ ಹೇಳುವಂತೆ ಒತ್ತಾಯಿಸಿದ್ದಾರೆ. ಕೋವಿಡ್ ಲಾಕ್​ಡೌನ್​ ವೇಳೆ ಸಾಲ ಮರುಪಾವತಿಗೆ ಸರ್ಕಾರವು ನೀಡಿದ ಅವಧಿ ವಿಸ್ತರಣೆ ಕುರಿತು ರೈ ತಿಳಿಸಿದ್ದು, ಏಜೆಂಟರ್​ಗಳು ಸುಮ್ಮನೇ ಹೋಗಿದ್ದಾರೆ ಎಂದು ರೈ ಅವರ ಜೊತೆಗಿದ್ದ ಅವರ ಮಗ ಶ್ಯಾಮಾನಂದ್ ಹೇಳಿದ್ದಾರೆ.

ಘನ್ಶ್ಯಾಂಪೂರ್ ಪ್ರದೇಶದಲ್ಲಿ ಮತ್ತೆ ಏಜೆಂಟರ್​ಗಳು ಬಂದು ಟ್ರಕ್​ ಅನ್ನು ತಡೆದಿದ್ದಾರೆ. ನಾನು ಟ್ರಕ್​ ಒಳಗೇ ಕುಳಿತಿದ್ದೆ. ತಂದೆ ಕೂಗಾಡುತ್ತಿರುವುದನ್ನು ಕೇಳಿ ಕೆಳಗೆ ಇಳಿಯುವಷ್ಟರಲ್ಲಿ ಅವರು ನನ್ನ ತಂದೆಗೆ ಬೆಂಕಿ ಹಚ್ಚಿದ್ದರು. ಟ್ರಕ್​​ನಲ್ಲಿದ್ದ ಕಂಬಳಿಯನ್ನು ತಂದು ತಂದೆಗೆ ಹೊದಿಸಿ ಬೆಂಕಿ ನಂದಿಸಿದೆ ಎಂದು ಶ್ಯಾಮಾನಂದ್ ಘಟನೆ ಕುರಿತು ವಿವರಿಸಿದ್ದಾರೆ.

ಸ್ಥಳೀಯರು ಇಬ್ಬರು ಆರೋಪಿಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದು, ಉಳಿದವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಬದ್ಲಾಪುರ ಪೊಲೀಸ್​ ಠಾಣಾಧಿಕಾರಿ​ ಶ್ರೀಜೇಶ್ ಯಾದವ್ ತಿಳಿಸಿದ್ದಾರೆ.

ABOUT THE AUTHOR

...view details