ಕರ್ನಾಟಕ

karnataka

ETV Bharat / jagte-raho

ಆನೇಕಲ್​ನಲ್ಲಿ ವ್ಯಕ್ತಿಯ ಮೇಲೆ ಹಲ್ಲೆ: ಮೊಬೈಲ್, ನಗದು ದೋಚಿ ಖದೀಮರು ಪರಾರಿ

ಒಂದೆಡೆ ಕೊರೊನಾ ಸಂಕಷ್ಟ ಮತ್ತೊಂದೆಡೆ ಕಳ್ಳ ಖದೀಮರ ಪುಂಡಾಟ ಜೋರಾಗಿದ್ದು, ವ್ಯಕ್ತಿಯ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಮೊಬೈಲ್ ನಗದು ದೋಚಿದ್ದಾರೆ.

By

Published : Apr 24, 2020, 1:25 PM IST

gdgf
ಮೊಬೈಲ್,ನಗದು ದೋಚಿ ಖದೀಮರು ಪರಾರಿ

ಬೆಂಗಳೂರು/ಆನೇಕಲ್​: ತಾಲೂಕಿನ ಹೊರವಲಯದ ಕರ್ನಾಟಕ ಗಡಿಭಾಗ ಅತ್ತಿಬೆಲೆಯ ಎಸ್ ಮಡಿವಾಳದಲ್ಲಿ ವ್ಯಕ್ತಿ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ದರೋಡೆ ಮಾಡಲಾಗಿದೆ.

ಅಸ್ಸೋಂ ಮೂಲದ ಬದ್ರೂಮ್ ಇಸ್ಲಾಂ ಎಂಬಾತನ ಮೇಲೆ ಹಲ್ಲೆ ನಡೆಸಿರುವ ದುಷ್ಕರ್ಮಿಗಳು ಮೊಬೈಲ್ ಹಾಗೂ 10000 ರೂ. ನಗದು ದೋಚಿ ಪರಾರಿಯಾಗಿದ್ದಾರೆ.

ಮೂವರು ಖದೀಮರಿಂದ ಈ ಕೃತ್ಯ ನಡೆದಿದ್ದು, ಈ ಸಂಬಂಧ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details